ಚಿತ್ರದುರ್ಗ –
ಪ್ರತಿಯೊಬ್ಬ ವಿದ್ಯಾರ್ಥಿಗೂ ಪರೀಕ್ಷಾ ಫಲಿತಾಂಶ ಬಹು ಮುಖ್ಯವಾಗಿರುತ್ತದೆ.ಮುಂದಿನ ತರಗತಿಗಳಿಗೆ ಸೇರಿಕೊ ಳ್ಳಲು ಅಂಕಗಳಿಗೆ ಪ್ರಾಮುಖ್ಯತೆ ಸಿಗುವ ಕಾರಣ ವರ್ಷ ಪೂರ್ತಿ ಕಷ್ಟಪಟ್ಟು ಹೋಗಿ ಪರೀಕ್ಷೆ ಬರೆದಿರುತ್ತಾರೆ.ಆದರೆ ಕೆಲವೊಬ್ಬರು ಮೌಲ್ಯಮಾಪಕರು ಮಾಡುವ ಎಡವಟ್ಟಿನಿಂ ದಾಗಿ ವಿದ್ಯಾರ್ಥಿಗಳು ಪರಿತಪಿಸುವಂತಾಗುತ್ತದೆ.ಅಂಥದೇ ಪ್ರಕರಣವೊಂದರ ಈಗ ರಾಜ್ಯದಲ್ಲಿ ಬೆಳಕಿಗೆ ಬಂದಿದೆ.
ಚಳ್ಳಕೆರೆಯ ಜೋಗೇಶ್ವರಿ ಪದವಿ ಪೂರ್ವ ಕಾಲೇಜಿನ ಆರ್.ನಿವೇದಿತಾ ಎಂಬವರು ದ್ವಿತೀಯ ಪಿಯುಸಿ ಅರ್ಥಶಾಸ್ತ್ರ ವಿಷಯದ ಪರೀಕ್ಷೆಯಲ್ಲಿ 15 ಪುಟಗಳಷ್ಟು ಉತ್ತರ ಬರೆದಿದ್ದರು.ಆದರೆ ಮೌಲ್ಯಮಾಪಕರು ಕೇವಲ ಎರಡು ಪುಟಗಳನ್ನಷ್ಟೇ ಮೌಲ್ಯಮಾಪನ ಮಾಡಿ 15 ಅಂಕ ನೀಡಿದ್ದಾರೆ.
ತಮ್ಮ ಉತ್ತರ ಪತ್ರಿಕೆಯನ್ನು ನಿವೇದಿತಾ ಅವರು ಪಡೆದು ಕೊಂಡ ವೇಳೆ ಉಳಿದ 13 ಪುಟಗಳಲ್ಲಿದ್ದ ಉತ್ತರವನ್ನು ಮೌಲ್ಯಮಾಪಕರು ಗಮನಿಸಿಯೆ ಇಲ್ಲದ ಸಂಗತಿ ಬೆಳಕಿಗೆ ಬಂದಿದೆ.ಇದೀಗ ನಿವೇದಿತಾ ಜುಲೈ 18ರಂದು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದು ಎಷ್ಟು ಅಂಕಗಳು ಬರುತ್ತವೆ ಜೊತೆಗೆ ಹೀಗೆ ವಿದ್ಯಾರ್ಥಿಗಳೊಂದಿಗೆ ಚಲ್ಲಾಟ ಆಡುತ್ತಿರುವ ಮೌಲ್ಯಮಾಪಕರ ಮೇಲೆ ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳಲು ಒತ್ತಾಯ ಕೇಳಿ ಬಂದಿದೆ.