ಸರ್ಕಾರಿ ಶಾಲಾ ಶಿಕ್ಷಕನ ಬರ್ಬರ ಹತ್ಯೆ – ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಸ್ಥಳದಲ್ಲಿ ಪೊಲೀಸರು…..

Suddi Sante Desk

ಬೀದರ –

ಸರ್ಕಾರಿ ಶಾಲಾ ಶಿಕ್ಷಕರೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬೀದರ್ ನಲ್ಲಿ ನಡೆದಿದೆ.ಔರಾದ ಪಟ್ಟಣ ದಲ್ಲಿನ ಸರ್ಕಾರಿ ಶಿಕ್ಷಕನ ಬರ್ಬರ ಕೊಲೆಯಾಗಿದೆ

ಪಟ್ಟಣದ ಹೊರವಲಯದ ಕೃಷಿ ತರಬೇತಿ ಕೇಂದ್ರದಲ್ಲಿನ ಸಮೀಪ ಶಿಕ್ಷಕನ ಬರ್ಬರ ಕೊಲೆಯನ್ನು ಮಾಡಲಾಗಿದೆ. ಪಟ್ಟಣದ ಲಿಡ್ಕರ್ ಕಾಲೋನಿಯ ನಿವಾಸಿ ವಿಜಯ ಕುಮಾರ್ ವೃತ್ತಿಯಲ್ಲಿ ಶಿಕ್ಷಕರಾಗಿದ್ದಾರಂತೆ.ಯಾರೊ ಅಪರಿಚಿತರು ಈ ಸರ್ಕಾರಿ ಶಾಲೆ ಶಿಕ್ಷಕ ವಿಜಯಕುಮಾರ್ ನನ್ನು ಕೊಲೆ ಮಾಡಿದ್ದಾರಂತೆ

ಔರಾದ ತಾಲೂಕಿನ ಕರಂಜಿ (ಕೆ) ಗ್ರಾಮದಲ್ಲಿ ಸರ್ಕಾರಿ ಶಾಲೆಯಲ್ಲಿನ ಶಿಕ್ಷಕ ವಿಜಯಕುಮಾರ್ ಆಗಿದ್ದಾರೆ. ಮೃತ ದುರ್ದೈವಿ ವಿಜಯಕುಮಾರ ಮುಖಕ್ಕೆ ಕಲ್ಲಿನಿಂದ ಹೊಡೆದು ಮರ್ಮಾಂಗಕ್ಕೆ ಹೊಡೆದು ಕೊಲೆ ಮಾಡಲಾಗಿದೆ

ಇನ್ನೂ ಸುದ್ದಿ ತಿಳಿದು ಸ್ಥಳಕ್ಕೆ ಔರಾದ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಹೇಗೆ ಕೊಲೆಯಾಗಿದೆ ಎಂಬುದನ್ನು ಪೊಲೀಸ್ ತನಿಖೆಯಿಂದ ಹೆಚ್ಚಿನ ಮಾಹಿತಿ ಹೋರ ಹೊರಬೀಳಬೇಕಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.