ಮತ್ತೆ ಸಿಡಿದೆದ್ದ ಸಿಡಿ ಲೇಡಿ ಪೊಲೀ ಸ್ ಆಯುಕ್ತರಿಗೆ ಮತ್ತೊಂದು ಪತ್ರ ಬರೆದ ಸಿಡಿ ಲೇಡಿ ರಮೇಶ್ ಜಾರಕಿ ಹೊಳಿ ಮೇಲೆ ಮತ್ತೊಂದು ಗಂಭೀ ರ ಆರೋಪ ಮಾಡಿದ ಆ ಲೇಡಿ…..

Suddi Sante Desk

ಬೆಂಗಳೂರು –

ರಮೇಶ್ ಜಾರಕಿಹೊಳಿ ಸಿ ಡಿ ಕೇಸ್ ಪ್ರಕರಣದಲ್ಲಿ ಸಿಡಿ ಲೇಡಿ ಮತ್ತೆ ಸಿಡಿದಿದ್ದಾರೆ.ಕಳೆದ ಕೆಲ ದಿನಗಳಿಂ ದ ಸುಮ್ಮನಿದ್ದ ಆ ಸಿಡಿ ಲೇಡಿ ಮತ್ತೆ ರಮೇಶ್ ಜಾರ ಕಿಹೊಳಿ ಮೇಲೆ ಮತ್ತೊಂದು ಗಂಭೀರವಾದ ಆರೋಪವನ್ನು ಮಾಡಿದ್ದಾರೆ.ಹೌದು ಸಂತ್ರಸ್ತೆಯ ಸ್ಥಾನದಲ್ಲಿರುವ ಯುವತಿಯು ಪೊಲೀಸ್ ಆಯುಕ್ತ ಕಮಲ್ ಪಂತ್ ಗೆ ಮತ್ತೊಂದು ಪತ್ರವನ್ನು ಬರೆದಿ ದ್ದಾರೆ.

ಮತ್ತೊಮ್ಮೆ ಜಾರಕಿಹೊಳಿ ಮೇಲೆ ಗಂಭೀರ ಆರೋ ಪವನ್ನು ಆ ಸಿಡಿ ಲೇಡಿ ಮಾಡಿದ್ದಾಳೆ. ತಮ್ಮ ವಕೀಲ ರಾದ ಸೂರ್ಯ ಮುಕುಂದರಾಜ್ ಮತ್ತು ಜಗದೀಶ್ ಕುಮಾರ್ ಅವರಿಗೆ ಆಮಿಷವನ್ನು ನೀಡಿದ ಆರೋ ಪವನ್ನು ಮಾಡಿದ್ದಾಳೆ.

ಹೀಗಾಗಿ ಕೂಡಲೇ ರಮೇಶ್ ಜಾರಕಿಹೊಳಿಯನ್ನು ಕೂಡಲೇ ಬಂಧಿಸುವಂತೆ ಒತ್ತಾಯವನ್ನು ಸಿಡಿ ಲೇಡಿ ಮಾಡಿದ್ದಾಳೆ.ಸಾಕ್ಷ್ಯ ನಾಶ ಮಾಡಲು ರಮೇಶ್ ಜಾರಕಿಹೊಳಿ ಯತ್ನವನ್ನು ಮಾಡಿದ್ದಾರೆ.ತಮ್ಮ ಪರ ವಕೀಲರಿಗೆ ಕೋಟಿಗಟ್ಟಲೇ ಆಫರ್ ನೀಡಿದ್ದಾರೆ. ಬೆಂಗಳೂರು ಪೊಲೀಸ್ ಕಮಿಷನರ್ ಗೆ ದೂರನ್ನು ನೀಡಿದ್ದಾರೆ ಸಿಡಿ ಲೇಡಿ ವಕೀಲರಾದ ಸೂರ್ಯ ಮುಕುಂದ್ ರಾಜ್, ಜಗದೀಶ್ ಗೆ ಕೋಟಿ ಕೋಟಿ ಆಫರ್ ನ್ನು ರಮೇಶ್ ಜಾರಕಿಹೊಳಿ ಮಗನ ಸ್ನೇಹಿತನಿಂದ ಪೋನ್ ಕಾಲ್ ಮಾಡಿ ನೀಡಿದ್ದಾರೆ ಎಂಬ ಆರೋಪವನ್ನು ಸಿಡಿ ಲೇಡಿ ಮಾಡಿದ್ದಾರೆ.

ವಾಟ್ಸಪ್ ಕರೆ ಮಾಡಿ ವಕೀಲರಿಗೆ ಹಣದ ಆಮಿಷ ವನ್ನು ನೀಡಿದ್ದಾರೆ. ಅಮರ್ ನಾಥ್ ಜಾರಕಿಹೊಳಿ ಸ್ನೇಹಿತ ಎಂದಿದ್ದ ಪ್ರದೀಪ್ ಅಮರ್ ನಾಥ್ ಜಾರಕಿ ಹೊಳಿ,ರಮೇಶ್ ಜಾರಕಿಹೊಳಿ ಪುತ್ರ ಪ್ರಭು ಪಾಟೀ ಲ್ ಎಂಬಾತ ಪ್ರದೀಪ್ ಎಂಬ ಹೆಸರಿನಲ್ಲಿ ಕರೆಯ ನ್ನು ಮಾಡಿದ್ದಾರಂತೆ.ವಕೀಲರು ತನಿಖಾಧಿಕಾರಿ ಗಮನಕ್ಕೆ ತರ್ತಿನಿ ಎಂದ ಕೂಡಲೇ ಕರೆಯನ್ನು ಕಟ್ ಮಾಡಿದ್ದಾರಂತೆ.

15 ದಿನಗಳಿಂದ ವಕೀಲರಿಗೆ ಕೋಟಿ ಕೋಟಿ ಆಮಿ ಷ ಒಡ್ಡಿದ್ದಾರೆ ಎಂದು ದೂರಿನಲ್ಲಿ ಯುವತಿ ಗಂಭೀರ ಆರೋಪವನ್ನು ಮಾಡಿ ಉಲ್ಲೇಖವನ್ನು ಲೇಡಿ ಮಾಡಿದ್ದಾಳೆ.ಸಧ್ಯ ಈ ಕುರಿತಂತೆ ಸಿಡಿ ಲೇಡಿ ದೂರ ನ್ನು ನೀಡಿದ್ದು ದೂರಿನ ಪ್ರತಿಯನ್ನು ಪೊಲೀಸರು ತಗೆದುಕೊಂಡಿದ್ದಾರೆ.ಇನ್ನೂ ಇದರ ನಂತರ ಮತ್ತೆ ರಮೇಶ್ ಜಾರಕಿಹೊಳಿ ಯಾವ ಹೇಳಿಕೆ ನೀಡ್ತಾರೆ ಮತ್ತೇ ಏನಾದರೂ ಬಾಂಬ್ ಸಿಡಿಸುತ್ತಾರೆನಾ ಎಂಬುದನ್ನು ಕಾದು ನೋಡಬೇಕು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.