ಸರ್ಕಾರಿ ನೌಕರರ ಭವನಕ್ಕೆ ಅಡಿಗಲ್ಲು – ಅಧ್ಯಕ್ಷ ಬಿ.ಎ.ಕುಂಬಾರ ನೇತ್ರತ್ವದಲ್ಲಿ ನಡೆಯಿತು ಸಮಾರಂಭ…..

Suddi Sante Desk
ಸರ್ಕಾರಿ ನೌಕರರ ಭವನಕ್ಕೆ ಅಡಿಗಲ್ಲು – ಅಧ್ಯಕ್ಷ ಬಿ.ಎ.ಕುಂಬಾರ ನೇತ್ರತ್ವದಲ್ಲಿ ನಡೆಯಿತು ಸಮಾರಂಭ…..

ಚಿಕ್ಕೋಡಿ

ಸರ್ಕಾರಿ ನೌಕರರ ಭವನಕ್ಕೆ ಅಡಿಗಲ್ಲು ಸಮಾರಂಭವೊಂದು ಚಿಕ್ಕೋಡಿ ಯಲ್ಲಿ ನಡೆಯಿತು ಚಿಕ್ಕೋಡಿಯಲ್ಲಿ ಸರ್ಕಾರಿ ನೌಕರರ ಭವನ ನಿರ್ಮಾಣದ ಕನಸು ಬಹು ದಿನಗಳಿಂದ ಇತ್ತು ಹೀಗಾಗಿ ಸರ್ಕಾರಿ ನೌಕರರ ಹಿತದೃಷ್ಟಿ ಯಿಂದ ಸುಸಜ್ಜಿತವಾದ ನೌಕರರ ಭವನವನ್ನು ನಿರ್ಮಾಣ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಸರ್ಕಾರಿ ನೌಕರರ ಭವನ ನಿರ್ಮಾಣ ಕಾಮಗಾರಿಯ ಅಡಿಗಲ್ಲು ಸಮಾರಂಭ ನೆರವೇರಿಸಿ ಅವರು ಮಾತನಾಡಿದರು.’₹ 1.50 ಕೋಟಿ ಮೊತ್ತದಲ್ಲಿ ಲೋಕೋಪಯೋಗಿ ಇಲಾಖೆ ಯಿಂದ ಅನುದಾನದಲ್ಲಿ ಸರ್ಕಾರಿ ನೌಕರರ ಭವನ ನಿರ್ಮಾಣ ಕಾಮಗಾರಿಗೆ ತಾನು ಇನ್ನೂ ಹೆಚ್ಚುವರಿಯಾಗಿ ₹ 1.50 ಕೋಟಿ ನೀಡುವೆ ಎಂದು ಭರವಸೆ ನೀಡಿದರು.

ಶಾಸಕ ಗಣೇಶ ಹುಕ್ಕೇರಿ ಮಾತನಾಡಿ, ನೌಕರರ ಅಗತ್ಯಕ್ಕೆ ಅನುಗುಣವಾಗಿ ಭವನ ನಿರ್ಮಾಣ ಮಾಡಲಾಗುವುದು. ಇನ್ನು ಕೆಲವೇ ದಿನಗಳಲ್ಲಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರ ಅನುದಾನದಲ್ಲಿ ನಗರದ ಆಯ ಕಟ್ಟಿನ ಸ್ಥಳ ಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗು  ವುದು ಎಂದರು.

ಚಿಕ್ಕೋಡಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಎ.ಕುಂಬಾರ ಪ್ರಾಸ್ತಾವಿಕವಾಗಿ ಮಾತನಾಡಿ, ಭವನ ನಿರ್ಮಾಣಕ್ಕಾಗಿ ನೌಕರರ ಸಂಘದಿಂದ ₹ 50 ಲಕ್ಷ ವಂತಿಗೆ ಸಂಗ್ರಹಿಸಿ ನೀಡಲಾಗಿದೆ ಎಂದರು.ಕಾರ್ಯಕ್ರಮದಲ್ಲಿ ಮಾಜಿ ಸಚಿವ ವೀರಕುಮಾರ ಪಾಟೀಲ, ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ,

ಲಕ್ಷ್ಮಣರಾವ ಚಿಂಗಳೆ, ಅರುಣಕುಮಾರ ಪಾಟೀಲ, ಉಪ ವಿಭಾಗಾಧಿಕಾರಿ ಸುಭಾಷ ಸಂಪಗಾವಿ, ತಹಶೀಲ್ದಾರ ಚಿದಂಬರ ಕುಲಕರ್ಣಿ, ಡಿವೈಎಸ್ಪಿ ಗೋಪಾಲಕೃಷ್ಣ ಗೌಡರ, ಮುಖಂಡ ರಾದ ಮಹಾವೀರ ಮೋಹಿತೆ, ಪ್ರಭಾಕರ ಐ. ಕೋರೆ, ರಾಹುಲ ಜಾರಕಿಹೊಳಿ, ಅಣ್ಣಾಸಾಹೇಬ ಹವಲೆ, ಉತ್ತಮ ಪಾಟೀಲ ಮುಂತಾದವರು ಇದ್ದರು.

ಸುದ್ದಿ ಸಂತೆ ನ್ಯೂಸ್ ಚಿಕ್ಕೋಡಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.