ನಾಳೆ ಶಾಲಾ, ಕಾಲೇಜುಗಳು ಬಂದ್‌ – ಸರ್ಕಾರಕ್ಕೆ ನೀಡಿದ ಡೆಡ್ ಲೈನ್ ಮುಕ್ತಾಯ ನಾಳೆಯಿಂದ ರಾಜ್ಯದಲ್ಲಿ ನೌಕರರ ಹೋರಾಟ ಆರಂಭ

Suddi Sante Desk
ನಾಳೆ ಶಾಲಾ, ಕಾಲೇಜುಗಳು ಬಂದ್‌ – ಸರ್ಕಾರಕ್ಕೆ ನೀಡಿದ ಡೆಡ್ ಲೈನ್ ಮುಕ್ತಾಯ ನಾಳೆಯಿಂದ ರಾಜ್ಯದಲ್ಲಿ ನೌಕರರ ಹೋರಾಟ ಆರಂಭ

ಬೆಂಗಳೂರು

ರಾಜ್ಯದ ಸರ್ಕಾರಿ ನೌಕರರ ಬೇಡಿಕೆ ಗಳ ಕುರಿತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರೊಂದಿಗೆ ನಡೆದ ಸಂಧಾನ ಸಭೆ ವಿಫಲ ಗೊಂಡ ಹಿನ್ನೆಲೆಯಲ್ಲಿ ನಾಳೆಯಿಂದ ರಾಜ್ಯದಲ್ಲಿ ಸರ್ಕಾರಿ ನೌಕರರ ಹೋರಾಟ ನಡೆಯಲಿದೆ.

ರಾಜ್ಯದ ಸರ್ಕಾರಿ ನೌಕರರ ಸಂಘಟನೆ ಕರೆ ನೀಡಿದ ಹಿನ್ನೆಲೆಯಲ್ಲಿ ಈ ಒಂದು ಹೋರಾಟ ನಡೆಯಲಿದ್ದು ರಾಜ್ಯದ ಎಲ್ಲಾ ಸರ್ಕಾರಿ ನೌಕರರು ಪ್ರತಿಭಟನೆ ಮಾಡಲಿದ್ದಾರೆ.ಇನ್ನೂ ನಾಳೆ ಈ ಒಂದು ಹೋರಾಟ ದಲ್ಲಿ ಶಿಕ್ಷಕರು ಪಾಲ್ಗೊಳ್ಳ ಲಿದ್ದಾರೆ.

ಇನ್ನೂ ನಾಳೆಯ ಹೋರಾಟದ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ ಸರ್ಕಾರಿ ನೌಕರರು ನಮ್ಮವರು ಅವರ ಬೇಡಿಕೆ ಗಳ ಕುರಿತು ಸರ್ಕಾರ ಬದ್ದ ವಾಗಿದೆ‌.ಹೋರಾಟ ವನ್ನು ಹಿಂದೆ ತಗೆದುಕೊಳ್ಳು ತ್ತಾರೆ ಎಂದರು.

ಇನ್ನೂ ನಾಳೆ ಶಾಲಾ, ಕಾಲೇಜುಗಳು ಬಂದ್‌ ಆಗಲಿವೆ ಸರ್ಕಾರಕ್ಕೆ ನೀಡಿದ ಡೆಡ್ ಲೈನ್ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ನಾಳೆಯಿಂದ ರಾಜ್ಯದಲ್ಲಿ ನೌಕರರ ಹೋರಾಟ ಆರಂಭ ವಾಗಲಿದೆ.

ಶಿಕ್ಷಕರು, ಉಪನ್ಯಾಸಕರು, ಪ್ರಾಧ್ಯಾಪಕರು ಕೆಲಸಕ್ಕೆ ಗೈರುಹಾಜರಾಗುತ್ತಿದ್ದಾರೆ.ಹಾಗಾಗಿ, ಪ್ರಾಥಮಿಕ ಶಾಲೆಗಳಿಂದ ಪದವಿ ಕಾಲೇಜು ಗಳವರೆಗೂ ತರಗತಿಗಳು ನಡೆಯುವುದಿಲ್ಲ. ಮಾರ್ಚ್‌ 1ರ ಬಳಿಕ ನಡೆಯಬೇಕಿದ್ದ ಶಾಲಾ, ಕಾಲೇಜು ಹಂತದ ಎಲ್ಲ ಪರೀಕ್ಷೆಗಳನ್ನೂ ಮುಂದೂಡುವ ಸಂಭವ ಇದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.