This is the title of the web page
This is the title of the web page

Live Stream

[ytplayer id=’1198′]

August 2025
T F S S M T W
 123456
78910111213
14151617181920
21222324252627
28293031  

| Latest Version 8.0.1 |

State News

ಸರ್ಕಾರಿ ಗೌರವದೊಂದಿಗೆ ಮೃತ PSI ಅವಿನಾಶ್ ಅಂತ್ಯಕ್ರಿಯೆ ಸ್ವ ಗ್ರಾಮದಲ್ಲಿ ನೆರವೇರಿತು ಅಂತಿಮ ಸಂಸ್ಕಾರ…..

WhatsApp Group Join Now
Telegram Group Join Now

ಬಸವಕಲ್ಯಾಣ –

ಆಂಧ್ರದ ಚಿತ್ತೂರ ಹತ್ತಿರದಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದ ಪಿಎಸ್‌ಐ ಅವಿನಾಶ ಕಾಶಿನಾಥ ಅಂತ್ಯಕ್ರಿಯೆ ಸ್ವಗ್ರಾಮ ತಾಲ್ಲೂಕಿನ ದಾಸರವಾಡಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.

ಬೆಂಗಳೂರಿನ ಶಿವಾಜಿ ನಗರ ಠಾಣೆಯಲ್ಲಿ‌ ಕರ್ತವ್ಯದಲ್ಲಿದ್ದ ಅವಿನಾಶ ಜುಲೈ 24ರಂದು ಗಾಂಜಾ ಮಾರಾಟಗಾರರ ಪತ್ತೆಗೆ ಹೋದಾಗ ಕಾರು ಸೇತುವೆಯ ಗೋಡೆಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು.

ಇವರನ್ನೊಳಗೊಂಡು ಮೂವರು ಅಪಘಾತದಲ್ಲಿ ಮೃತ ಪಟ್ಟಿದ್ದರು.ದಾಸರವಾಡಿಯಲ್ಲಿನ ಅವರ ಹೊಲದಲ್ಲಿ ಅಂತ್ಯಕ್ರಿಯೆ ‌ನೆರವೆರಿಸಲಾಯಿತು.ಪೊಲೀಸರಿಂದ ಮೂರು ಸುತ್ತಿನ ಗುಂಡು ಹಾರಿಸುವ ಮೂಲಕ ಗೌರವವನ್ನು ಸಲ್ಲಿಸಿ ನಂತರ ಅಂತಿಮ ಸಂಸ್ಕಾರ ಮಾಡಲಾಯಿತು.

ಐಜಿಪಿ ಮನೀಷ ಕರ್ಬಿಕರ್,ಶಾಸಕರಾದ ರಾಜಶೇಖರ ಪಾಟೀಲ ಹುಮನಾಬಾದ್,ಶರಣು‌ ಸಲಗರ ಬಸವಕ ಲ್ಯಾಣ,ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್, ಹಾರಕೂಡ ಚನ್ನವೀರ ಶಿವಾಚಾರ್ಯ,ಉಪ ವಿಭಾಗಾ ಧಿಕಾರಿ ರಮೇಶ ಕೋಲಾರ ಹಾಗೂ ಸುತ್ತಲಿನ ಗ್ರಾಮಗಳ ಅಪಾರ ಜನರು ಪಾಲ್ಗೊಂಡಿದ್ದರು.


Google News

 

 

WhatsApp Group Join Now
Telegram Group Join Now
Suddi Sante Desk