ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಶಿಕ್ಷಕರಿಗೆ ಮಹತ್ವದ ಸಂದೇಶ ನೀಡಿದ ಇಲಾಖೆ – ನಾವು ಯಾವುದಕ್ಕೂ ಬಗ್ಗೊದಿಲ್ಲವೆಂದ KSPSTA ಟೀಮ್…..ಬೆಂಗಳೂರಿನಲ್ಲಿ ಶಿಕ್ಷಕ ಬಂಧುಗಳು…..

Suddi Sante Desk
ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಶಿಕ್ಷಕರಿಗೆ ಮಹತ್ವದ ಸಂದೇಶ ನೀಡಿದ ಇಲಾಖೆ – ನಾವು ಯಾವುದಕ್ಕೂ ಬಗ್ಗೊದಿಲ್ಲವೆಂದ KSPSTA ಟೀಮ್…..ಬೆಂಗಳೂರಿನಲ್ಲಿ ಶಿಕ್ಷಕ ಬಂಧುಗಳು…..

ಬೆಂಗಳೂರು

ಪದವೀಧರ ಶಿಕ್ಷಕರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಇಂದು ಬೆಂಗಳೂರಿನಲ್ಲಿ ರಾಜ್ಯದ ಶಿಕ್ಷಕ ಬಂಧುಗಳಿಂದ ದೊಡ್ಡ ಪ್ರಮಾಣದಲ್ಲಿ ಪ್ರತಿಭ ಟನೆ ನಡೆಯಲಿದೆ.ಈಗಾಗಲೇ ಬೆಂಗಳೂ ರಿಗೆ ಆಗಮಿರುವ ಶಿಕ್ಷಕರು ನಗರದ ಫ್ರೀಡಂ ಪಾರ್ಕ್ ನಲ್ಲಿ ಶಕ್ತಿ ಪ್ರದರ್ಶನ ವನ್ನು ಮಾಡಲಿದ್ದಾರೆ.

ಇದರೊಂದಿಗೆ ರಾಜ್ಯ ಸರ್ಕಾರಕ್ಕೆ ಮತ್ತೊಂದು ಪ್ರತಿಭಟನೆಯ ಬಿಸಿ ತಟ್ಟಿದ್ದು, ವಿವಿಧ ಬೇಡಿಕೆ ಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯಾ ದ್ಯಂತ ಸರ್ಕಾರಿ ಶಾಲಾ ಶಿಕ್ಷಕರು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ.ಶಾಲಾ ಶಿಕ್ಷಕರ ಪ್ರತಿಭಟನೆ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯು ಶಿಕ್ಷಕರಿಗೆ ಮಹತ್ವದ ಸೂಚನೆಯೊಂದನ್ನು ನೀಡಿದೆ

ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರು ಪ್ರತಿಭಟ ನೆಯಲ್ಲಿ ಭಾಗವಹಿಸುತ್ತಿರುವ ಹಿನ್ನೆಲೆಯಲ್ಲಿ ತರಗತಿಗಳಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರವಹಿಸ ಬೇಕೆಂದು ತಿಳಿಸಿದೆ.ವಿವಿಧ ಬೇಡಿಕೆಗೆ ಈಡೇರಿಕೆಗೆ ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆಗೆ ಆಗಮಿಸು ವಂತೆ ಎಲ್ಲಾ ಶಿಕ್ಷಕರಿಗೆ ಪ್ರಾಥಮಿಕ ಶಿಕ್ಷಕರ ಸಂಘ ಮನವಿ ಮಾಡಿದೆ.

ಒಂದು ಕಡೆಗೆ ಬೇಡಿಕೆ ಗಳ ಈಡೇರಿಕೆ ಮತ್ತೊಂದೆಡೆ ಶಾಲೆಗಳು ಇವೆರಡರ ನಡುವೆ ಶಿಕ್ಷಕರ ಶಕ್ತಿ ಪ್ರದರ್ಶನ ಹೀಗಾಗಿ ಏನೇನಾಗಲಿದೆ ಎಂಬೊಂದರ ಜೊತೆಗೆ ಸರ್ಕಾರ ಸಚಿವರು ಬೇಡಿಕೆ ಗಳಿಗೆ ಸ್ಪಂದಿಸುತ್ತಾರೆಯೆ ಎಂಬೊಂದನ್ನು ಕಾದು ನೋಡಬೇಕಿದೆ

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.