This is the title of the web page
This is the title of the web page

Live Stream

[ytplayer id=’1198′]

February 2025
T F S S M T W
 12345
6789101112
13141516171819
20212223242526
2728  

| Latest Version 8.0.1 |

State News

129 ಶಾಲೆಗಳಿಗೆ ಶಾಕ್ ನೀಡಿದ ಶಿಕ್ಷಣ ಇಲಾಖೆ – ಅತಂತ್ರವಾಯಿತು ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ…..

129 ಶಾಲೆಗಳಿಗೆ ಶಾಕ್ ನೀಡಿದ ಶಿಕ್ಷಣ ಇಲಾಖೆ – ಅತಂತ್ರವಾಯಿತು ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ…..
WhatsApp Group Join Now
Telegram Group Join Now

ಬೆಂಗಳೂರು

ಹೌದು ರಾಜ್ಯದಲ್ಲಿನ 129 ಶಾಲೆಗಳಿಗೆ ಶಿಕ್ಷಣ ಇಲಾಖೆ ಬಿಗ್ ಶಾಕ್ ನೀಡಿದೆ.ರಾಜ್ಯದಲ್ಲಿ 2023-24ನೇ ಸಾಲಿನಲ್ಲಿ ಮಾನ್ಯತೆ ನವೀಕರಣ ಮಾಡಿ ಕೊಳ್ಳದೇ ಇರುವ 129 ಖಾಸಗಿ ಪ್ರೌಢಶಾಲೆಗ ಳಲ್ಲಿ ವ್ಯಾಸಂಗ ಮಾಡುತ್ತಿರುವ SSLC ವಿದ್ಯಾರ್ಥಿ ಗಳ ಕರಡು ಪ್ರವೇಶ ಪತ್ರವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ತಡೆಹಿಡಿದಿದೆ.

ಇದರಿಂದ ಇವು ಅನಧಿಕೃತ ಎಂಬುದನ್ನು ಮಂಡಳಿ ಸ್ಪಷ್ಟಪಡಿಸಿದ್ದು ಅಂತಿಮ ಪ್ರವೇಶ ಪತ್ರ ವಿತರಿಸುವುದಕ್ಕೆ 15 ದಿನಗಳ ಮುಂಚಿತವಾಗಿ ಸಲ್ಲಿಕೆಯಾದಲ್ಲಿ ಆ ಶಾಲೆಗಳ ಕರಡು ಪ್ರವೇಶ ಪತ್ರಗಳನ್ನು ಪರಿಶೀಲನೆಗೆ ಬಿಡುಗಡೆ ಮಾಡ ಲಾಗುವುದು ಎಂದು ಶಾಲೆಗಳಿಗೆ ಮಂಡಳಿಯ ನಿರ್ದೇಶಕರು ಎಚ್ಚರಿಕೆ ನೀಡಿದ್ದಾರೆ.

ಈಗಾಗಲೇ ರಾಜ್ಯದಲ್ಲಿ ಮಾನ್ಯತೆ ನವೀಕರಿಸಿ ಕೊಂಡಿರುವ ಶಾಲೆಗಳ ಪಟ್ಟಿಯನ್ನು ಜಿಲ್ಲಾ ಉಪನಿರ್ದೇಶಕರು ಮಂಡಳಿಗೆ ಕಳುಹಿಸಿಕೊಟ್ಟಿ ದ್ದಾರೆ ಇದನ್ನು ಪರಿಶೀಲಿಸಿದಾಗ 129 ಶಾಲೆಗಳು ಮಾನ್ಯತೆ ನವೀಕರಿಸಿದೇ ಇರುವುದು ಕಂಡು ಬಂದಿದೆ. ಮುಂದಿನ ದಿನಗಳಲ್ಲಿ ಈ 129 ಶಾಲೆ ಗಳ ಪೈಕಿ ಯಾವುದೇ ಶಾಲೆಗಳು ಮಾನ್ಯತೆ ನವೀಕರಿಸಿಕೊಂಡು ಅದರ ಮಾಹಿತಿಯನ್ನು ಮಂಡಳಿಗೆ ಕಳುಹಿಸಿದಲ್ಲಿ,

ಅಂತಹ ಶಾಲೆಗಳ ಕರಡು ಪ್ರವೇಶ ಪತ್ರವನ್ನು ಪರಿಶೀಲನೆಗೆ ಬಿಡುಗಡೆ ಮಾಡುವುದಾಗಿ ಮಂಡಳಿಯು ಶಾಲೆಗಳಿಗೆ ಎಚ್ಚರಿಕೆಯನ್ನು ನೀಡಿದೆ.129 ಶಾಲೆಗಳ ಪಟ್ಟಿ ಪರಿಶೀಲಿಸಿದಾಗ 36 ಶಾಲೆಗಳು ಬೆಂಗಳೂರು ದಕ್ಷಿಣ ವಿಭಾಗದ ಲ್ಲಿವೆ. ಬೆಂ.ಉತ್ತರ, ತುಮಕೂರು, ಶಿವಮೊಗ್ಗದ ಜಿಲ್ಲೆಗಳಲ್ಲೂ ಶಾಲೆಗಳಿವೆ. ಮಾನ್ಯತೆ ಪಡೆದುಕೊ ಳ್ಳದೇ ಇರುವ ಶಾಲೆಗಳು ಅನಧಿಕೃತವಾಗಲಿದ್ದು, ಇಲ್ಲಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ಸಹ ಅನಧಿಕೃತರಾಗುತ್ತಾರೆ.

ಈ ಹಿನ್ನೆಲೆಯಲ್ಲಿ ಕರಡು ಪ್ರತಿ ಬಿಡುಗಡೆ ವೇಳೆ ಯಲ್ಲೇ ಇಂತಹ ಶಾಲೆಗಳಿಗೆ ಮಂಡಳಿಯು ಎಚ್ಚರಿಕೆಯನ್ನು ನೀಡಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..


Google News

 

 

WhatsApp Group Join Now
Telegram Group Join Now
Suddi Sante Desk