ಬೆಂಗಳೂರು –
ಮಹಾಮಾರಿ ಕೋವಿಡ್ ಸಂಕಷ್ಟದ ನಡುವೆಯೂ ಕೂಡಾ ರಾಜ್ಯದಲ್ಲಿ ಶಾಲೆಗಳನ್ನು ಆರಂಭ ಮಾಡಲಾ ಗುತ್ತಿದೆ.ಆಗಸ್ಟ್ 23 ರಿಂದ 9 ರಿಂದ ತರಗತಿಗಳು ಆರಂಭವಾಗಲಿದ್ದು ಇನ್ನೂ ಈ ಒಂದು ವಿಚಾರ ಕುರಿತು ಶಿಕ್ಷಣ ಸಚಿವ ಬಿ ಸಿ ನಾಗೇಶ್ ನಾಡಿನ ಜನತೆಯ ಬೆಂಬಲ ವನ್ನು ಕೇಳಿದ್ದಾರೆ
ನಮ್ಮ ಈ ಒಂದು ನಿರ್ಧಾರಕ್ಕೆ ನಾಡಿನ ಜನತೆಯ ಬೆಂಬಲದ ಅಗತ್ಯವಿದೆ.ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಾರದು ಎಂದು ಇಂತಹ ಸಂಕಷ್ಟದ ನಡುವೆಯೂ ಶಾಲೆ ಆರಂಭಿಸುವ ದೃಢವಾದ ನಿರ್ಧಾರಕ್ಕೆ ಬರಲಾಗಿದೆ. ನಾಡಿನ ಜನತೆಯ ಪೋಷಕರ ಬೆಂಬಲವನ್ನು ಈ ಮೂಲಕ ಕೋರುತ್ತಿದ್ದೇವೆ.ಬನ್ನಿ ಮಕ್ಕಳೇ ಮರಳಿ ಶಾಲೆಗೆ ನಿಮ್ಮ ಸುರಕ್ಷಿತಯ ಜವಾಬ್ದಾರಿ ನಮ್ಮದು ಎಂದು ಶಿಕ್ಷಣ ಸಚಿವರು ಟ್ಚೀಟ್ ಮಾಡಿದ್ದಾರೆ