ಶಾಲೆ ಬಿಟ್ಟು ರಾಜಕೀಯ ಮಾಡುವ ಶಿಕ್ಷಕರಿಗೆ ಖಡಕ್ ಸಂದೇಶ ನೀಡಿದ ಶಿಕ್ಷಣ ಸಚಿವರು ಅಂಥಹ ಶಿಕ್ಷಕರನ್ನು ಕೂಡಲೇ ಅಮಾನತ್ತು ಮಾಡಲು ಆಯುಕ್ತ ರಿಗೆ ಸೂಚನೆ…..

Suddi Sante Desk

ಬೀದರ್ –

ಪತ್ನಿ ಗ್ರಾಪಂ ಸದಸ್ಯೆ ಇದ್ದು ಶಿಕ್ಷಕ ಪತಿ ಗ್ರಾಮ ಪಂಚಾಯತ್ ನಲ್ಲಿ ರಾಜಕೀಯ ಮಾಡುವಂತಹ ಶಿಕ್ಷಕರಿದ್ದರೆ ಅವರನ್ನು ಈ ಕೂಡಲೇ ಅಮಾನತ್ತು ಮಾಡುವಂತೆ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರು ಹೇಳಿದರು.

ಬೀದರ್ ನಲ್ಲಿ ಮಾತನಾಡಿದ ಅವರು ಈ ಕುರಿತಂತೆ ನನಗೂ ಮತ್ತು ಇಲಾಖೆಗೂ ಸಾಕಷ್ಟು ಪ್ರಮಾಣ ದಲ್ಲಿ ದೂರುಗಳು ಬಂದಿದ್ದು ಹೀಗಾಗಿ ಈ ಕುರಿತಂತೆ ಸಮಗ್ರ ವಾದ ಮಾಹಿತಿಯನ್ನು ತಗೆದುಕೊಂಡು ಅಮಾನತು ಮಾಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಸೂಚನೆಯನ್ನು ನೀಡಿದರು.

ಇನ್ನೂ ಜಿಲ್ಲೆಯ ಕೆಲವು ಕಡೆ ಗ್ರಾಮ ಪಂ‌ಚಾಯತ ಸದಸ್ಯೆಯರು ಶಿಕ್ಷಕರ ಪತ್ನಿಯರು ಆಗಿದ್ದು ಶಾಲೆ ಕೆಲ್ಸ್ ಬಿಟ್ಟು ಪತ್ನಿಯರ ಜೊತೆ ರಾಜಕೀಯ ಮಾಡುತ್ತಿದ್ದಾರೆ ಶಿಕ್ಷಕರು ಅಂತಹ ಶಿಕ್ಷಕರ ವಿರುದ್ಧ ಹಲವು ದೂರುಗಳ ಹಿನ್ನಲೆಯಲ್ಲಿ ಸಚಿವ ಬಿ ಸಿ ನಾಗೇಶ್ ಹೇಳಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.