ತುಮಕೂರು —
ನಾಳೆಯಿಂದ ರಾಜ್ಯದಲ್ಲಿ ಶಾಲಾ ಕಾಲೇಜು ಆರಂಭ ವಿಚಾರ ಕುರಿತಂತೆ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಮಾತನಾಡಿದ್ದಾರೆ.ತುಮಕೂರಿನಲ್ಲಿ ಮಾತನಾಡಿದ ಅವರು ನಾಳೆಯಿಂದ 9 ರಿಂದ 12 ತರಗತಿವರೆಗೂ ತರಗತಿ ಪ್ರಾರಂಭವನ್ನು ಮಾಡುತ್ತಿದ್ದೇವೆ.ಕಳೆದ ಒಂದು ವರ್ಷದಿಂದ ಎಷ್ಟೇ ಪ್ರಯತ್ನ ಮಾಡಿದ್ರು ಆನ್ ಲೈನ್ ನಲ್ಲಿ ಒಳ್ಳೆ ಶಿಕ್ಷಣ ಕೊಡಲು ಸಾಧ್ಯ ವಾಗಲಿಲ್ಲ.

ಬೇರೆ ಬೇರೆ ಕಾರಣಗಳಿಂದ ಉತ್ತಮ ಶಿಕ್ಷಣ ಕೊಡಲಾಗಿಲ್ಲ.ಕೋವಿಡ್ ಪಾಸಿಟಿವಿಟಿ ರೇಟ್ ಕಡಿಮೆಯಿರುವುದರಿಂದ ತರಗತಿ ಆರಂಭ ಮಾಡು ವಂತೆ ಸಿಎಂ ಘೋಷಣೆ ಮಾಡಿದರು.ಶಾಲೆಗೆ ಬರಲು ಪೋಷಕರ ಅನುಮತಿ ಪತ್ರ ಕಡ್ಡಾಯ. ಒತ್ತಾಯ ಪೂರ್ವಕವಾಗಿ ವಿದ್ಯಾರ್ಥಿಗಳು ಶಾಲೆಗೆ ಬರಬೇಕಂತಿಲ್ಲ.ಆನ್ ಲೈನ್ ಮತ್ತು ಆಫ್ ಲೈನ್ ನಲ್ಲಿ ತರಗತಿ ನಡೆಯಲಿವೆ.ಮೂರನೇ ಅಲೆ ಮಕ್ಕಳಿ ಗೆ ಕಂಟಕವಾಗಲಿದೆ ಅನ್ನುವುದು ಇತ್ತು.
ಈಗ ಒಂದು ತಿಂಗಳಿಂದ ಎಲ್ಲಾ ತಜ್ಞರು ಮಕ್ಕಳ ಮೇಲೆ ಕೊರೋನಾ ಸೋಂಕು ಹರಡುವ ಸಾಧ್ಯತೆ ಕಡಿಮೆ ಎಂದು ಹೇಳಿದ್ದಾರೆ.ಸೋಂಕು ತಗುಲಿದರು ಪ್ರಾಣ ಹಾನಿಯಾಗುವುದಿಲ್ಲ ಎಂಬ ಅಭಿಪ್ರಾಯ ವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ.ಮುಂದಿನ ಹಂತ ದಲ್ಲಿ 1 ರಿಂದ 8ನೇ ತರಗತಿವರೆಗೂ ಶಾಲೆ ತೆರೆಯು ವ ಪ್ರಯತ್ನ ಮಾಡುತ್ತೇವೆ.ಪಾಸಿಟಿವಿಟಿ ರೇಟ್ ಶೇಕಡ 2ಕ್ಕಿಂತ ಹೆಚ್ಚಿದರೆ ಆ ಜಿಲ್ಲೆಯ ಶಾಲೆಗಳನ್ನು ಪ್ರಾರಂಭಿಸಲ್ಲ.ರಾಜ್ಯದಲ್ಲಿ 5 ಜಿಲ್ಲೆಗಳಲ್ಲಿ ಪಾಸಿಟಿವಿ ಟಿ ರೇಟ್ ಶೇ2 ಕ್ಕಿಂತ ಹೆಚ್ಚಿದೆ ಎಂದರು.
\