This is the title of the web page
This is the title of the web page

Live Stream

[ytplayer id=’1198′]

May 2025
T F S S M T W
1234567
891011121314
15161718192021
22232425262728
293031  

| Latest Version 8.0.1 |

State News

ನಾನು ಕೂಡಾ ಒಬ್ಬ ಶಿಕ್ಷಕಿಯ ಮಗ ಎನ್ನುತ್ತಿರುವ ಶಿಕ್ಷಣ ಸಚಿವರಿಗೆ ಶಿಕ್ಷಕರ ಸಮಸ್ಯೆಗಳು ಯಾಕೇ ಅರ್ಥವಾಗುತ್ತಿಲ್ಲ…..

WhatsApp Group Join Now
Telegram Group Join Now

ಬೆಂಗಳೂರು –

ರಾಜ್ಯದಲ್ಲಿ ಮಾದರಿ ಆದರ್ಶ ರಾಜಕಾರಣಗಳನ್ನು ಹುಡುಕುತ್ತಾ ಹೊದರೆ ಸಾಲು ಸಾಲು ಜನಪ್ರತಿನಿಧಿ ಗಳ ಸಾಲಿಗೆ ಸಧ್ಯ ಶಿಕ್ಷಣ ಸಚಿವರಾಗಿರುವ ಸುರೇಶ್ ಕುಮಾರ್ ಅವರು ಒಬ್ಬರಾಗುತ್ತಾರೆ.

ಅವರಾಗಲಿ ಅವರ ಕೆಲಸಗಳಾಗಲಿ ಇನ್ನೂ ಅವರ ನ್ನು ನೋಡಿದರೆ ಅವರಿವರ ಹಾಗೇ ಇರದೇ ಸರಳ ಸಜ್ಜನಿಕೆಯ ರಾಜಕಾರಣಿ ಎನ್ನೊದರಲ್ಲಿ ಎರಡು ಮಾತಿಲ್ಲ.

ಪ್ರತಿಯೊಂದು ಕೆಲಸ ಕಾರ್ಯದಲ್ಲೂ ಇವರು ತಮ್ಮ ದೇಯಾದ ವಿಶೇಷತೆಯನ್ನು ಮಾನ್ಯ ಶಿಕ್ಷಣ ಸಚಿವ ರು ತೊರಿಸಿಕೊಂಡು ನಾಡಿನಲ್ಲಿ ತಾವು ಕೂಡಾ ಒಬ್ಬ ರು ಮಾದರಿ ಆದರ್ಶ ರಾಜಕಾರಣಿ ಎನ್ನೊದನ್ನು ಸದಾ ಯಾವಾಗಲೂ ತೊರಿಸಿಕೊಳ್ಳುತ್ತಾರೆ ಇದರಲ್ಲಿ ಎರಡು ಮಾತಿಲ್ಲ.

ಇನ್ನೂ ಇಷ್ಟೇಲ್ಲ ಮಾದರಿಯಾಗಿರುವ ಮಾನ್ಯ ಸುರೇಶ್ ಕುಮಾರ್ ಅವರಿಗೆ ಅದ್ಯೋಕೋ ಏನೋ ನಮ್ಮ ರಾಜ್ಯದಲ್ಲಿನ ಶಿಕ್ಷಕರ ಸಮಸ್ಯೆಗಳು ಮಾತ್ರ ಅರ್ಥವಾಗುತ್ತಿಲ್ಲ.ಹೌದು ತಾವು ಕೂಡಾ ಒಬ್ಬ ಶಿಕ್ಷಕಿಯರ ಮಗ ಎನ್ನುತ್ತಿರುವ ಮಾನ್ಯ ಸಚಿವರಿಗೆ ಸಧ್ಯ ಜ್ಞಾನದ ಅಕ್ಷರಗಳನ್ನು ಮಕ್ಕಳಲ್ಲಿ ಬಿತ್ತುತ್ತಾ ಕೆಲಸವನ್ನು ಮಾಡುತ್ತಿರುವ ಶಿಕ್ಷಕರ ಕಷ್ಟ ಮಾತ್ರ ಕಾಣುತ್ತಿಲ್ಲ ಕೇಳುತ್ತಿಲ್ಲ ಹೀಗಾಗಿ ಈ ಒಂದು ವಿಚಾರ ದಲ್ಲಿ ಮಾನ್ಯ ಸಚಿವರು ನಿರ್ಲಕ್ಷ್ಯವನ್ನು ತೋರಿದ್ದಾರೆ

ವರ್ಗಾವಣೆಯ ವಿಚಾರದಲ್ಲಿ ನೋವನ್ನು ಅನುಭವಿ ಸುತ್ತಿರುವ ನಾಡಿನ ಅದೇಷ್ಟೋ ಶಿಕ್ಷಕರ ನರಕಯಾತ ನೆಯ ಬದುಕು ಮಾತ್ರ ಕಾಣುತ್ತಿಲ್ಲ ಕೇಳುತ್ತಿಲ್ಲ. ಕಳೆದ ಹಲವಾರು ವರುಷಗಳಿಂದ ವರ್ಗಾವಣೆಯ ವಿಚಾರ ದಲ್ಲಿ ಅವರಿವರಿಗೆ ಹೇಳುತ್ತಾ ದಯಮಾಡಿ ನಮ್ಮ ನ್ನು ವರ್ಗಾವಣೆ ಮಾಡಿ ನಮ್ಮ ನೋವಿಗೆ ಸ್ಪಂದಿಸಿ ಎನ್ನುತ್ತಿರುವ ನಮ್ಮ ನಾಡಿನ ಶಿಕ್ಷಕರ ಧ್ವನಿಗೆ ಮಾತ್ರ ಯಾರು ಕೂಡಾ ಸ್ವಂದಿಸುತ್ತಿಲ್ಲ ಕ್ಯಾರೆ ಎನ್ನುತ್ತಿಲ್ಲ.

ಕಳೆದ ಹಲವಾರು ವರುಷಗಳಿಂದ ವರ್ಗಾವಣೆಯ ವಿಚಾರ ಅದರಲ್ಲೂ ಒಂದೇರೆಡು ತಿಂಗಳಿನಿಂದ ತೀವ್ರವಾಗಿ ಚರ್ಚೆಯಾಗುತ್ತಿರುವ ಈ ಒಂದು ಸಮ ಸ್ಯೆ ಕುರಿತಂತೆ ಶಿಕ್ಷಣ ಸಚಿವರಾಗಿರುವ ಸುರೇಶ್ ಕುಮಾರ್ ಅವರು ಕಣ್ತೇರೆದು ನೋಡುತ್ತಿಲ್ಲ ಕೇಳುತ್ತಿಲ್ಲ ನೆನಪಾದಗೊಮ್ಮೆ ಈ ಕುರಿತಂತೆ ಶಿಕ್ಷಕ ಸಂಘದ ಮುಖಂಡರು ಮುಖ್ಯಮಂತ್ರಿ ಶಿಕ್ಷಣ ಸಚಿವರಿಗೆ ಅವರಿವರಿಗೆ ಮನವಿ ಕೊಟ್ಟು ಕೊಟ್ಟು ಬೇಸತ್ತಿದ್ದಾರೆ

ಆದರೂ ಕೂಡಾ ಯಾರು ನೋಡುತ್ತಿಲ್ಲ ಕೇಳುತ್ತಿಲ್ಲ ಹೀಗಾಗಿ ಶಿಕ್ಷಕರ ಸಮಸ್ಯೆ ಮಾತ್ರ ಸಮಸ್ಯೆಯಾಗಿ ಉಳಿದಿದೆ. ತಾವು ಕೂಡಾ ಶಿಕ್ಷಕಿಯರ ಮಗ ಎನ್ನುತ್ತಿ ರುವ ಮಾನ್ಯ ಶಿಕ್ಷಣ ಸಚಿವರಿಗೆ ಮಾತ್ರ ಶಿಕ್ಷಕರ ಸಮಸ್ಯೆಗಳು ಅರ್ಥವಾಗದಿರೊದು ದುರಂತ

ಇನ್ನಾದರೂ ಎಷ್ಟೇತ್ತುಕೊಂಡು ಶಿಕ್ಷಕರ ವರ್ಗಾವಣೆ ಯನ್ನು ಸರಿಯಾಗಿ ಅರ್ಥ ಮಾಡಿಕೊಂಡು ದೊಡ್ಡ ಸಮಸ್ಯೆಯಾಗಿ ಉಳಿದಿರುವ ಈ ಒಂದು ವರ್ಗಾವ ಣೆಯನ್ನು ಸರಳವಾಗಿ ಬಗೆಹರಿಸಿ ವರ್ಗಾವಣೆಯ ಸಮಸ್ಯೆಯಲ್ಲಿ ಬಿದ್ದು ಒದ್ದಾಡುತ್ತಿರುವ ನಾಡಿನ ಶಿಕ್ಷಕರಿಗೆ ಮುಕ್ತಿ ಕೊಟ್ಟು ಅವರಿಗೆ ನೆಮ್ಮದಿ ನೀಡು ತ್ತಾರೆ ಎಂಬುದನ್ನು ಕಾದು ನೋಡಬೇಕು


Google News

 

 

WhatsApp Group Join Now
Telegram Group Join Now
Suddi Sante Desk