ಮೊನ್ನೆ ತಾಯಿ ಇಂದು ಸಹೋದರಿ ಸಾವು – ಆತಂಕದಲ್ಲಿ ಭಾರತೀಯ ಮಹಿಳಾ ಕ್ರಿಕೆಟರ್ ವೇದಾ ಕೃಷ್ಣ ಮೂರ್ತಿ ಕುಟುಂಬ…..

Suddi Sante Desk

ಚಿಕ್ಕಮಗಳೂರು –

ಮೊನ್ನೆ ಮೊನ್ನೆಯಷ್ಟೇ ಮಹಾಮಾರಿ ಕರೊನಾದಿಂದ ತಾಯಿಯನ್ನು ಕಳೆದುಕೊಂಡ ಬೆನ್ನಲ್ಲೇ ಇಂದು ಸಹೋದರಿಯನ್ನೂ ಭಾರತೀಯ ಮಹಿಳಾ ಕ್ರಿಕೆಟರ್ ವೇದಾಕೃಷ್ಣಮೂರ್ತಿ ಕಳೆದುಕೊಂಡಿದ್ದಾರೆ ಈ ಮೂಲಕ ಶೋಕ ಸಾಗರದಲ್ಲಿದೆ ಕುಟುಂಬ. ಚಿಕ್ಕಮ ಗಳೂರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಸಹೋದರಿ ವತ್ಸಲಾ ಕೃಷ್ಣಮೂರ್ತಿ ಚಿಕಿತ್ಸೆ ಫಲಿಸ ದೇ ಇಂದು ಮೃತಪಟ್ಟಿದ್ದಾರೆ.

ಕಳೆದ ವಾರ ವೇದಕೃಷ್ಣಮೂರ್ತಿ ತಾಯಿ ಚೆಲುವಾಂ ಬ (63) ಕೋವಿಡ್ ಗೆ ಬಲಿಯಾಗಿದ್ದರು.ಇದಾದ ಒಂದೇ ವಾರದಲ್ಲಿ ಸಹೋದರಿಯನ್ನು ಕಳೆದುಕೊಂ ಡಿದ್ದಾರೆ.ಒಂದೇ ಕುಟುಂಬದ ಐವರಲ್ಲಿ ಕರೊನಾ ಸೋಂಕು ದೃಢಪಟ್ಟಿತ್ತು.ಕಳೆದ ಜನವರಿಯಲ್ಲಿ ವೇದಾ ಅವರ ತಾಯಿ ಚೆಲುವಾಂಬ 63ನೇ ಹುಟ್ಟು ಹಬ್ಬ ಆಚರಿಸಿಕೊಂಡಿದ್ದರು.ನಂತರ ಕೋವಿಡ್ ಪಾಸಿಟಿವ್ ಆಗಿ ಉಸಿರಾಟದ ತೊಂದರೆಯಿಂದ ಕೋವಿಡ್ ಗೆ ಬಲಿಯಾಗಿದ್ದಾರೆ.

ಇದಾದ ಒಂದೇ ವಾರದಲ್ಲಿ ಸಹೋದರಿಯು ಸಹ ಮೃತಪಟ್ಟಿದ್ದಾರೆ.ಕಡೂರು ತಾಲೂಕಿನ ಬೀರೂರು ರಸ್ತೆ ಬಳಿಯಿರುವ ಇರುವ ವೇದಾ ಕೃಷ್ಣಮೂರ್ತಿ ಅವರ ಜಮೀನಿನಲ್ಲಿ ಕೋವಿಡ್ ಮಾರ್ಗ ಸೂಚಿ ಯಂತೆಯೇ ತಾಲೂಕು ಆಡಳಿತ ವತಿಯಿಂದ ಸಹೋದರಿಯ ಅಂತ್ಯಸಂಸ್ಕಾರ ನೆರವೇರಿತು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.