ಮಾಜಿ ಸಚಿವ ವಿನಯ ಕುಲಕರ್ಣಿ ಭವಿಷ್ಯ ಇಂದು ನಿರ್ಧಾರ – ಮಧ್ಯಾ ಹ್ನ ಪ್ರಕಟವಾಗಲಿದೆ ಹೈಕೊರ್ಟ್ ನಿಂದ ತೀರ್ಪು…..

Suddi Sante Desk

ಬೆಂಗಳೂರು –

ಯೊಗೀಶಗೌಡ ಕೊಲೆ ಪ್ರಕರಣದಲ್ಲಿ ಬಂಧನವಾಗಿ ರುವ ಮಾಜಿಸಚಿವ ವಿನಯ ಕುಲಕರ್ಣಿ ಜಾಮೀನಿ ನ ಭವಿಸ್ಯ ಇಂದು ನಿರ್ಧಾರವಾಗಲಿದೆ. ಈಗಾಗಲೇ ಕಳೆದ ಹದಿನೈದು ದಿನಗಳಿಂದ ಜಾಮೀನು ಅರ್ಜಿ ಯ ವಿಚಾರಣೆ ಮಾಡಿರುವ ಹೈಕೊರ್ಟ್ ನ್ಯಾಯಾ ಧೀಶರು ಇಂದು ಅಂತಿಮವಾಗಿ ತೀರ್ಪನ್ನು ಪ್ರಕಟ ಮಾಡಲಿದ್ದಾರೆ.

ಈಗಾಗಲೇ ಬಹುತೇಕವಾಗಿ ವಾದ ವಿವಾದಗಳನ್ನು ಎರಡು ಕಡೆಗಳಿಂದ ಆಲಿಸಿರುವ ನ್ಯಾಯಾಧೀಶರು ಇಂದು ಮಧ್ಯಾಹ್ನ ಮತ್ತೆ ಎರಡು ಕಡೆಗಳಲ್ಲಿ ಹತ್ತು ಹತ್ತು ನಿಮಿಷಗಳ ಕಾಲ ಮತ್ತೊಮ್ಮೆ ವಾದವನ್ನು ಮಂಡಿಸಲು ನ್ಯಾಯಾಧೀಶರು ಅವಕಾಶವನ್ನು ನೀಡಿದ್ದು ಹೀಗಾಗಿ ಮಾಜಿ ಸಚಿವ ವಿನಯ ಕುಲಕ ರ್ಣಿ ಮತ್ತುಸಿಬಿಐ ಪರವಾಗಿ ನ್ಯಾಯವಾದಿಗಳು ವಾದವನ್ನು ಮಂಡಿಸಲಿದ್ದಾರೆ.

ಹೀಗಾಗಿ ಇದರ ನಂತರ ನ್ಯಾಯಾಧೀಶರು ತಮ್ಮ ತೀರ್ಪನ್ನು ಪ್ರಕಟ ಮಾಡಲಿದ್ದಾರೆ.ಇನ್ನೂ ಇಂದಿನ ತೀರ್ಪು ಅಂತಿಮವಾಗಿದ್ದು ಬಂಧನವಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿಗೆ ಇವತ್ತಾದರೂ ಜಾಮೀನು ಸಿಗುತ್ತದೆನಾ ಎಂಬ ನಿರೀಕ್ಷೆಯಲ್ಲಿ ಅವರ ಕುಟುಂಬದವರು ಅಭಿಮಾನಿಗಳಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.