This is the title of the web page
This is the title of the web page

Live Stream

September 2023
T F S S M T W
 123456
78910111213
14151617181920
21222324252627
282930  

| Latest Version 8.0.1 |

ಧಾರವಾಡ

ಕೈ ಕಾಲು ಮುಗಿತೇನಿ ಇದೊಂದು ಬಾರಿ ನನಗೆ ಟಿಕೆಟ್ ಕೊಡಿ ಎನ್ನುತ್ತಾ ವೇದಿಕೆಯ ಮೇಲೆ ಕಣ್ಣೀರಾಕಿದ BJP ಮಾಜಿ ಶಾಸಕ – ಹುಟ್ಟು ಹಬ್ಬದ ದಿನದಂದೇ ಮಾಜಿ ಶಾಸಕರ ಕಣ್ಣೀರಿನ ಕಥೆ…..


ಕುಂದಗೋಳ

ಟಿಕೆಟ್‌ಗಾಗಿ ಕಣ್ಣೀರಿಟ್ಟಿದ್ದಾರೆ ಧಾರವಾಡ ಜಿಲ್ಲೆಯ ಕುಂದಗೋಳದ ಮಾಜಿ ಶಾಸಕ ಎಸ್ ಐ ಚಿಕ್ಕನಗೌಡರ.ಜನ್ಮ ದಿನದ ವೇದಿಕೆಯ ಮೇಲೆಯೇ ಗಳಗಳನೇ ಅತ್ತಿದ್ದಾರೆ ಎಸ್.ಐ. ಚಿಕ್ಕನಗೌಡರ.ಎಸ್.ಐ.ಚಿಕ್ಕನಗೌಡರ ಧಾರವಾಡ ಜಿಲ್ಲೆಯ ಕುಂದಗೋಳ ಕ್ಷೇತ್ರದ ಬಿಜೆಪಿ ಯ ಮಾಜಿ ಶಾಸಕರಾಗಿದ್ದಾರೆ.

ಕುಂದಗೋಳ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ಗಾಗಿ ಇಬ್ಬರ ನಡುವೆ ಬಿಗ್ ಫೈಟ್ ನಡೆಯುತ್ತಿದೆ. ಯಡಿಯೂರಪ್ಪನವರ ಸಂಬಂಧಿಯಾಗಿರೋ ಎಸ್.ಐ.ಚಿಕ್ಕನಗೌಡರ.ಇವರಿಗೆ ಟಕ್ಕರ್ ಕೊಟ್ಟಿರೋ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಪ್ತ ಎಮ್.ಆರ್.ಪಾಟೀಲ್.ಈಗಾಗಲೇ ಕ್ಷೇತ್ರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಓಡಾಡಿಕೊಂಡು ಕೆಲಸ ಕಾರ್ಯಗಳನ್ನು ಮಾಡುತ್ತಿರುವ ನಾಯಕ.

ಎಮ್.ಆರ್.ಪಾಟೀಲ್ ಅವರಿಗೆ ಟಿಕೆಟ್ ಬಹುತೇಕ ಖಚಿತ ಎಂಬ ಮಾಹಿತಿ ಈಗಾಗಲೇ ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ.ಜೊತೆಗೆ ಬಿಜೆಪಿಯಲ್ಲಿ ಎಸ್.ಐ.ಚಿಕ್ಕನಗೌಡರ ಕಡೆಗಣನೆ ಎಂಬ ಮಾತು. ಕಂಡು ಬರುತ್ತದೆ.ಅದೇ ಕಾರಣಕ್ಕಾಗಿ ಜನ್ಮ ದಿನದ ಮುಖಾಂತರ ಶಕ್ತಿ ಪ್ರದರ್ಶನ ಮಾಡಿದ್ದಾರೆ  ಚಿಕ್ಕನಗೌಡರ.

ಇದೇ ವೇದಿಕೆಯಲ್ಲಿ ಟಿಕೆಟ್ ನೀಡುವಂತೆ ಕಣ್ಣೀರು ಹಾಕಿದ್ದಾರೆ.ಕಳೆದ ಎರಡೂ ಚುನಾವಣೆ ಯಲ್ಲಿ ಕಡಿಮೆ ಅಂತರದಿಂದ ಸೋಲು ಕಂಡಿದ್ದೇನೆ 2018 ರ ಚುನಾವಣೆಯಲ್ಲಿ 634 ಮತಗಳ ಅಂತರದಿಂದ ಸೋತಿದ್ದೇನೆ.2019 ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಅನುಕಂಪ ಮತ್ತು ಸಮ್ಮಿಶ್ರ ಸರ್ಕಾರ ಇದ್ದರೂ ಕೇವಲ 1601 ಮತ ಗಳ ಅಂತರದಿಂದ ಪರಾಭವಗೊಂಡಿದ್ದೇನೆ.

ಆದ್ರೂ ಸಹ ನಾನು ಧೃತಿಗೆಟ್ಟಿಲ್ಲ ನಾನು ಮುಂದಿಟ್ಟ ಹೆಜ್ಜೆ ಹಿಂದೆ ಇಡಲ್ಲ.ಇನ್ನೊಮ್ಮೆ ನಿಮ್ಮ ಆಶೀರ್ವಾದ ಕೇಳುತ್ತಿದ್ದೇನೆ.ಇದೊಂದು ಬಾರಿಗೆ ಟಿಕೆಟ್ ನೀಡುವಂತೆ ನಾಯಕರ ಬಳಿ ಬೇಡಿಕೆ ಇಟ್ಟಿದ್ದೇನೆ ಎಂದು ವೇದಿಕೆಯ ಮೇಲೆ ಹೇಳಿದರು ನನಗೆ ಇದೊಂದು ಬಾರಿ ಟಿಕೆಟ್ ನೀಡಿ ಕಾಲು ಬೀಳುತ್ತೇನೆ,ಕೈ ಮುಗಿಯುತ್ತೇನೆ ನನಗೆ ಟಿಕೆಟ್ ನೀಡಿ.

 

ನನ್ನ ಪರಿಸ್ಥಿತಿ ಸರಿಯಿಲ್ಲ ಯಾರು ಬಂದ್ರೂ ಏನೂ ಮಾಡಲಿಕ್ಕೆ ಆಗುವುದಿಲ್ಲ.ಪರೋಕ್ಷವಾಗಿ ಪಕ್ಷದ ವರಿಷ್ಠ ರಿಗೆ ಟಾಂಗ್ ಕೊಟ್ಟು ಕಣ್ಣೀರು ಹಾಕಿದರು ಚಿಕ್ಕನಗೌಡರ.ಕ್ಷೇತ್ರದ ಜನ ತೀರ್ಮಾನ ಮಾಡಲಿ. ಇದೊಂದು ಬಾರಿಗೆ ಆಶೀರ್ವಾದ ಮಾಡಿ ಎಂದು ಗಳಗಳನೇ ಅಳುತ್ತಲೇ ಕ್ಷೇತ್ರದ ಜನರಿಗೆ ಸಾಷ್ಟಾಂಗ ನಮಸ್ಕಾರ ಹಾಕಿದರು ಚಿಕ್ಕನಗೌಡರ.

 

ಸುದ್ದಿ ಸಂತೆ ನ್ಯೂಸ್ ಕುಂದಗೋಳ…..


Google News Join The Telegram Join The WhatsApp

 

 

Suddi Sante Desk

Leave a Reply