ರಸ್ತೆ ಪಕ್ಕದಲ್ಲಿ ಕಸ ಹಾಕಿವರಿಂದ ಕಸ ತುಂಬಿಸಿ ಸಾಮಾಜಿಕ ಜವಾಬ್ದಾರಿ ತೋರಿಸಿಕೊಟ್ಟ ಸಾರ್ವಜನಿಕರು – ಬೆಳ್ಳಂ ಬೆಳಿಗ್ಗೆ ರಸ್ತೆ ಬದಿ ಹಾಕಿದವರಿಗೆ ಕ್ಲಾಸ್ ತಗೆದುಕೊಂಡಿದ್ದು ಹೇಗೆ ನೋಡಿ…..

Suddi Sante Desk
ರಸ್ತೆ ಪಕ್ಕದಲ್ಲಿ ಕಸ ಹಾಕಿವರಿಂದ ಕಸ ತುಂಬಿಸಿ ಸಾಮಾಜಿಕ ಜವಾಬ್ದಾರಿ ತೋರಿಸಿಕೊಟ್ಟ ಸಾರ್ವಜನಿಕರು – ಬೆಳ್ಳಂ ಬೆಳಿಗ್ಗೆ ರಸ್ತೆ ಬದಿ ಹಾಕಿದವರಿಗೆ ಕ್ಲಾಸ್ ತಗೆದುಕೊಂಡಿದ್ದು ಹೇಗೆ ನೋಡಿ…..

ದಾವಣಗೆರೆ

ಬೆಳ್ಳಂ ಬೆಳಗ್ಗೆ ರಸ್ತೆ ಬದಿ ಕಸ ಹಾಕಿದವನಿಗೆ  ಸಾಮಾಜಿಕ ಕಾರ್ಯಕರ್ತರೊಬ್ಬರು ಸರಿಯಾಗಿ ಕ್ಲಾಸ್ ತೆಗೆದುಕೊಂಡು ಅವರಿಂದಲೇ ಪುನಃ ಅದೇ ಕಸವನ್ನು ತುಂಬಿಸಿರುವ ಘಟನೆ ದಾವಣಗೆರೆ ಯಲ್ಲಿ ನಡೆದಿದೆ.ಹೌದು ಬೆಣ್ಣೆ ನಗರಿ ದಾವಣಗೆರೆ ಸ್ಮಾರ್ಟ್ ಸಿಟಿಯಾಗಿದ್ದು ಹೀಗಾಗಿ ಈ ಒಂದು ಸಿಟಿ ಯಲ್ಲಿ ಸ್ವಚ್ಚತಾ ಕಾರ್ಯ ಕೈ ಜೋಡಿಸಲಕರೆ ನೀಡಿದ್ದಾರೆ

 

 

ಕಸ  ಹಾಕಿದಂತ ವ್ಯಕ್ತಿಯಿಂದಲೇ ಕಸ ವಾಪಸ್ ತೆಗೆಸಿದ್ದಾರೆ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ದಾವಣಗೆರೆಯ ರೇಣುಕಾ ಮಂದಿರ ಬಳಿ ನಡೆದ ಘಟನೆ ಇದಾಗಿದೆ.ಪ್ರತಿ ನಿತ್ಯ ಕಸವನ್ನು ರಸ್ತೆಯಲ್ಲಿ ಹಾಕುತಿದ್ದರು ಸ್ಥಳೀಯ ನಿವಾಸಿಗಳು

ಇದು ಸ್ಮಾರ್ಟ್ ಸಿಟಿ ಅನ್ಕೊಂಡಿದ್ದೀಯಾ ಏನು ಅಂತ ಪ್ರಶ್ನೆ ಮಾಡಿದ್ದಾರೆ.ನಿಮ್ಮ ಮನೆ ಮುಂದೆ ಪ್ರತಿನಿತ್ಯ ಕಸದ ಗಾಡಿ ಬಂದರು ಯಾಕೆ ರಸ್ತೆ ಯಲ್ಲಿ ಕಸ ಹಾಕ್ತಿರಾ ಎಂದು ಪ್ರಶ್ನೆ ಮಾಡಿದ್ದಾರೆ

ವಾಪಸ್ ಕಸ ತುಂಬಿಕೊಂಡು ಹೋಗುವ ವರೆಗೆ ಬಿಡದ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ವಾಪಸ್ ಕಸವನ್ನು ಅವರಿಂದಲೇ ತುಂಬಿಸಿ ಕಳುಹಿಸಿದರು ಸಾಮಾಜಿಕ ಹೋರಾಟಗಾರ.

 

ವರದಿ – ಚಕ್ರವರ್ತಿ ಜೊತೆಗೆ ಸಂತೋಷ್ V S ಸುದ್ದಿ ಸಂತೆ ನ್ಯೂಸ್ ದಾವಣಗೆರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.