ಸರ್ಕಾರಿ ನೌಕರರು ಸರ್ಕಾರಕ್ಕೆ ಲೆಕ್ಕಕ್ಕೆ ಇಲ್ವಾ – ಮಾರ್ಚ್ 1 _ಕ್ಕೆ ಹೋರಾಟಕ್ಕೆ ಕರೆ ನೀಡಿದರು ಗಂಭೀರವಾಗಿ ತಗೆದುಕೊಳ್ಳದ ರಾಜ್ಯ ಸರ್ಕಾರ……

Suddi Sante Desk
ಸರ್ಕಾರಿ ನೌಕರರು ಸರ್ಕಾರಕ್ಕೆ ಲೆಕ್ಕಕ್ಕೆ ಇಲ್ವಾ – ಮಾರ್ಚ್ 1 _ಕ್ಕೆ ಹೋರಾಟಕ್ಕೆ ಕರೆ ನೀಡಿದರು ಗಂಭೀರವಾಗಿ ತಗೆದುಕೊಳ್ಳದ ರಾಜ್ಯ ಸರ್ಕಾರ……

ಬೆಂಗಳೂರು

7ನೇ ವೇತನ ಆಯೋಗ ಜಾರಿಗೆ ಮತ್ತು ಹಳೆ ಪಿಂಚಣಿ ಯೋಜನೆ ಮರು ಜಾರಿಗೆ ಒತ್ತಾಯಿಸಿ ಮಾರ್ಚ್ 1 ರಿಂದ ರಾಜ್ಯದಲ್ಲಿ ಸರ್ಕಾರಿ ನೌಕರರು ಹೋರಾಟಕ್ಕೆ ಕರೆ ನೀಡಿದ್ದಾರೆ.ಈಗಾಗಲೇ ಈ ಒಂದು ವಿಚಾರ ಕುರಿತು ರಾಜ್ಯ ಸರ್ಕಾರ 7 ನೇ ವೇತನ ಆಯೋಗಕ್ಕೆ ಸಮಿತಿ ರಚಿಸಿ ಅದಕ್ಕೆ ಬೇಕಾದ ಎಲ್ಲಾ ರೀತಿಯ ಸೌಲಭ್ಯಗಳನ್ನು ಕೂಡಾ ನೀಡಿದೆ.

ಈ ಒಂದು ಸಮಿತಿ ರಚನೆಗೊಂಡು ಮೂರುವರೆ ತಿಂಗಳು ಕಳೆದಿದ್ದು ಇನ್ನೂ ಈಗಾಗಲೇ ಸಮಿತಿ ಕೂಡಾ ಕೆಲವೊಂದಿಷ್ಟು ಕೆಲಸ ಕಾರ್ಯಗಳನ್ನು ಕೂಡಾ ಮಾಡಿದ್ದು ಈ ಒಂದು ವಿಚಾರ ವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್ ನಲ್ಲಿ ಘೋಷಣೆ ಮಾಡಲಿಲ್ಲ ಇನ್ನೂ ಹಳೆಯ ಪಿಂಚಣಿ ಯೋಜನೆ ಯನ್ನು ಕೂಡಾ ಪ್ರಸ್ತಾಪ ಮಾಡಲಿಲ್ಲ ಹೀಗಾಗಿ ಬೇಸತ್ತ ರಾಜ್ಯದ ಸರ್ಕಾರಿ ನೌಕರರು ಈಗ ಅನಿವಾರ್ಯ ವಾಗಿ ಹೋರಾಟಕ್ಕೆ ಕರೆ ನೀಡಿದ್ದಾರೆ.

ಹೋರಾಟಕ್ಕೆ ಕರೆ ನೀಡುತ್ತಿದ್ದಂತೆ ರಾಜ್ಯಾದ್ಯಂತ ಸರ್ಕಾರಿ ನೌಕರರ ಕಿಚ್ಚು ಹೆಚ್ಚಾಗಿದೆ ಎಲ್ಲಾ ಇಲಾಖೆ ಗಳ ನೌಕರರು ಹೋರಾಟಕ್ಕೆ ಸಿದ್ದರಾಗಿ ದ್ದಾರೆ.ಈ ಒಂದು ಸಮಿತಿ ಯಿಂದ ಮಧ್ಯಂತರ ವರದಿ ಪಡೆದು ಘೋಷಣೆ ಮಾಡೊದು ಅದೇನು ದೊಡ್ಡ ವಿಚಾರ ವಲ್ಲ ಹೀಗಿರುವಾಗ ರಾಜ್ಯ ಸರ್ಕಾರಕ್ಕೆ ಸರ್ಕಾರಿ ನೌಕರರು ಲೆಕ್ಕಕ್ಕೆ ಇಲ್ಲ ಎಂಬಂತೆ ಕಾಣುತ್ತಿದೆ

ಹೋರಾಟಕ್ಕೆ ಕರೆ ನೀಡಿ ಡೆಡ್ ಲೈನ್ ನೀಡಿದರು ಕೂಡಾ ಈವರೆಗೆ ರಾಜ್ಯ ಸರ್ಕಾರ ಮುಖ್ಯಮಂತ್ರಿ ಯವದು ಈ ಒಂದು ವಿಚಾರ ವನ್ನು ಗಂಭೀರ ವಾಗಿ ಪರಿಗಣಿಸುತ್ತಿಲ್ಲ ಇದನ್ನು ನೋಡಿದರೆ ನಿಜವಾಗಿಯೂ ಸರ್ಕಾರಿ ನೌಕರರು ಹೋರಾಟಕ್ಕೆ ಕರೆ ನೀಡುವ ಮೂಲಕ ತಮ್ಮ ಬೇಡಿಕೆ ಗಳ ಈಡೇರಿಕೆಗೆ ಪಟ್ಟು ಹಿಡಿದಿದ್ದಾರೆ.

ಒಟ್ಟಾರೆ ಮಾರ್ಚ್ 1 ರಿಂದ ರಾಜ್ಯದ ಎಲ್ಲಾ ಸರ್ಕಾರಿ ನೌಕರರು ದೊಡ್ಡ ಪ್ರಮಾಣದಲ್ಲಿ ಬೀದಿ ಗಿಳಿದು ಹೋರಾಟ ಮಾಡಲಿದ್ದು ಈವರೆಗೆ ಸರ್ಕಾರ ಮುಖ್ಯಮಂತ್ರಿ ಯವರು ಇದನ್ನು ಗಂಭೀರವಾಗಿ ಪರಿಗಣಿಸದಿರೊದನ್ನು ನೋಡಿ ದರೆ ರಾಜ್ಯದಲ್ಲಿ ಸರ್ಕಾರಕ್ಕೆ ರಾಜ್ಯದ ಸರ್ಕಾರಿ ನೌಕರರು ಲೆಕ್ಕಕ್ಕೆ ಇಲ್ಲ ಎಂಬಂತೆ ಕಾಣುತ್ತಿದ್ದು ಇದೊಂದು ದೊಡ್ಡ ದುರಂತ.

 

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.