ಕಾಂಗ್ರೆಸ್ ಮುಖಂಡನ ಭೀಕರ ಕೊಲೆ – ಕಳೆದ ತಿಂಗಳು ಸಹೋದರ ನ ಕೊಲೆ ಈಗ ಗಿರೀಶ್ ನ ಕೊಲೆ

Suddi Sante Desk

ಕಲಬುರ್ಗಿ –

ಕಾಂಗ್ರೆಸ್ ಮುಖಂಡನನ್ನು ಹಾಡು ಹಗಲೇ ಭೀಕರವಾಗಿ ಕೊಲೆ ಮಾಡಿದ ಘಟನೆ ಕಲಬುರಗಿ ಯಲ್ಲಿ ನಡೆದಿದೆ ಹೌದು ಶಹಾಬದ್ ಪಟ್ಟಣದ ಸ್ಟೇಷನ್ ಏರಿಯಾದಲ್ಲಿ ಈ ಒಂದು ಕೊಲೆ ನಡೆದಿದೆ.ತಲ್ವಾರ್ ಗಳಿಂದ ಮನಬಂದಂತೆ ಕೊಚ್ಚಿ ಭೀಕರವಾಗಿ ಕೊಲೆ ಮಾಡಿದ್ದಾರೆ ಹಂತಕರು.

ಗಿರೀಶ್ ಕಂಬನೂರ್ ಕೊಲೆಯಾದ ವ್ಯಕ್ತಿಯಾಗಿದ್ದು ಗಿರೀಶ್ ಕಂಬನೂರ್ ಶಾಹಾಬಾದ್ ನಗರ ಸಭೆ ಅಧ್ಯಕ್ಷೆ ಅಂಜಲಿ ಗಿರೀಶ್ ಅವರ ಪತಿಯಾಗಿದ್ದಾರೆ‌.ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಈ ಒಂದು ಕೊಲೆಯನ್ನು ಮಾಡ ಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ

ಕೆಲ ದಿನಗಳ ಹಿಂದೆ ಆತನ ಸಹೋದರ ಸತೀಶ್ ಕಂಬನೂ ರನನ್ನು ಕೊಲೆ ಮಾಡಲಾಗಿತ್ತು ಇನ್ನೂ ಸುದ್ದಿ ತಿಳಿದ ಶಾಹಾಬಾದ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ದೂರನ್ನು ದಾಖಲು ಮಾಡಿಕೊಂಡು ಮುಂದಿನ‌ ಕ್ರಮವನ್ನು ಕೈಗೊಂಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.