ಸಂತೋಷ ಲಾಡ್ ಬೆನ್ನಿಗೆ ಬಿದ್ದ ಇಮಾಮ್ ನಿಯಾಜ್ – ಕೈನಾಯಕ ರಲ್ಲಿ ಮುಂಚೂಣಿಯಲ್ಲಿರುವ ಮಾಜಿ ಸಚಿವರಿಗೆ ಸನ್ಮಾನಿಸಿ ಗೌರವಿಸಿದ ಇಮಾಮ್ ಮತ್ತು ಟೀಮ್…..

Suddi Sante Desk

ವಿಜಯನಗರ –

ವಿಧಾನಸಭ ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಬಾಕಿ ಇರುವಾಗಲೇ ಟಿಕೆಟ್ ಪಡೆಯಲು ಕಸರತ್ತನ್ನು ಮಾಡಲಾಗುತ್ತಿದೆ. ಹೌದು ಈ ನಡುವೆ ಹೊಸಪೇಟೆ ವಿಜಯನಗರ ವಿಧಾನಸಭೆ ಕ್ಷೇತ್ರಕ್ಕೆ ಕೈ ಟಿಕೆಟ್ ಪಡೆಯಲು ತೆರೆಮರೆಯಲ್ಲಿ ಈಗಲೇ ನಡೆದಿದೆ ಕಸರತ್ತು.ಟಿಕೆಟ್ ಪಡೆಯಲು ಹವಣಿಸುತಿದ್ದಾರೆ ಹೆಚ್.ಎನ್.ಎಫ್. ಇಮಾಮ್ ನಿಯಾಜಿಯವರು.ಟಿಕೆಟ್ ಗಿಟ್ಟಿಸಿಕೊಳ್ಳಲು ಮಾಜಿ ಸಚಿವ ಸಂತೋಷ್ ಲಾಡ್ ಅವರನ್ನು ಭೇಟಿ ಮಾಡಿದರು

ಇಮಾಮ್ ನಿಯಾಜಿ.ಸಧ್ಯ ಕೈ ನಾಯಕರಲ್ಲಿ ಮುಂಚೂಣಿ ಯಲ್ಲಿದ್ದಾರೆ ಸಂತೋಷ್ ಲಾಡ್.ಹೀಗಾಗಿ ಇವರು ಮನಸ್ಸು ಮಾಡಿದರೆ ಇಮಾಮ್ ನಿಯಾಜಿಗೆ ಟಿಕೆಟ್ ಪಕ್ಕಾ ಎಂಬ ಲೆಕ್ಕಾಚಾರ ಕೇಳಿ ಬರುತ್ತಿದೆ.

ಈ ಹಿಂದೆ ಆನಂದ್ ಸಿಂಗ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತಂದು ವಿಜಯನಗರಕ್ಕೆ ಕೈ ಟಿಕೆಟ್ ಕೊಡಿಸಿದ್ದ ಸಂತೋಷ್ ಲಾಡ್.ಅದನ್ನ ಮನಗಂಡ ಸಂತೋಷ್ ಲಾಡ್ ಬೆನ್ನಿಗೆ ಬಿದ್ದಿರುವ ಇಮಾಮ್ ನಿಯಾಜಿ.ಈ ಹಿನ್ನೆಲೆ ಯಲ್ಲಿ ಇಂದು ಜಿಂದಾಲ್ ಗೆ ಭೇಟಿ ನೀಡಿದ ಸಂತೋಷ್ ಲಾಡ್ ರನ್ನು ಭೇಟಿ ಮಾಡಿದ ನಿಯಾಜ

ಬೆಂಬಲಿಗರೊಂದಿಗೆ ಭೇಟಿ‌ ನೀಡಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು ವಿಜಯನಗರ ವಿಧಾನಸಭೆ ಕ್ಷೇತ್ರದ ಟಿಕೆಟ್ ಗೆ ಶಿಪಾರಸ್ಸು ಮಾಡಲು ಮನವಿ ಮಾಡಿಕೊಂಡರು ನಿಯಾಜಿಯವರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.