ಹೊರಬಿತ್ತು 7ನೇ ವೇತನ ಆಯೋಗದ ಮಹತ್ವದ ಸರ್ಕಾರಿ ಆದೇಶ – ರಾಜ್ಯದ ಸಮಸ್ತ ಸರ್ಕಾರಿ ನೌಕರರ ಪರವಾಗಿ ಮುಖ್ಯಮಂತ್ರಿಗಳಿಗೆ ಸರ್ಕಾರದ ಉನ್ನತ ಅಧಿಕಾರಿಗಳಿಗೆ ಧನ್ಯವಾದಗಳನ್ಮು ಹೇಳಿದರು ಷಡಾಕ್ಷರಿ ಅವರು

Suddi Sante Desk
ಹೊರಬಿತ್ತು 7ನೇ ವೇತನ ಆಯೋಗದ ಮಹತ್ವದ ಸರ್ಕಾರಿ ಆದೇಶ – ರಾಜ್ಯದ ಸಮಸ್ತ ಸರ್ಕಾರಿ ನೌಕರರ ಪರವಾಗಿ ಮುಖ್ಯಮಂತ್ರಿಗಳಿಗೆ ಸರ್ಕಾರದ ಉನ್ನತ ಅಧಿಕಾರಿಗಳಿಗೆ ಧನ್ಯವಾದಗಳನ್ಮು ಹೇಳಿದರು ಷಡಾಕ್ಷರಿ ಅವರು

ಬೆಂಗಳೂರು –

ಕೊನೆಗೂ 7ನೇ ವೇತನ ಆಯೋಗದ ಸಮಿತಿ ರಚನೆ ಕುರಿತು ಮಹತ್ವದ ಸರ್ಕಾರಿ ಆದೇಶವನ್ನು ರಾಜ್ಯ ಸರ್ಕಾರ ಹೊರಡಿಸಿದೆ ಹೌದು ಕಳೆದ ವಾರ ದಾವಣಗೆರೆ ಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಒಂದು ಸಮಿತಿಗೆ ರಾಜ್ಯಾಧ್ಯಕ್ಷರನ್ನು ಘೋಷಣೆ ಮಾಡಿದ್ದರು ಈಗ ರಾಜ್ಯ ಸರ್ಕಾರ ದಿಂದ ಅಧಿಕೃತವಾಗಿ ಆದೇಶ ವನ್ನು ಮಾಡಿದ್ದಾರೆ.

ನಿವೃತ್ತ ಐಎಎಸ್ ಅಧಿಕಾರಿ ಅಧ್ಯಕ್ಷ ತೆಯಲ್ಲಿ ಈ ಒಂದು ಸಮಿತಿ ಯನ್ನು ರಚನೆ ಮಾಡಲಾಗಿದ್ದು ಸದಸ್ಯರನ್ನು ಕೂಡಾ ನೇಮಕ ಮಾಡಿ ಆದೇಶ ವನ್ನು ಹೊರಡಿಸಲಾಗಿದೆ.

ಈ ಒಂದು ಆದೇಶದಲ್ಲಿ ಸಮಿತಿ ಸದಸ್ಯರ ಕಾರ್ಯ ಚಟುವಟಿಕೆ ಸೇರಿದಂತೆ ಇನ್ನಿತರ ಕೆಲ ಅಂಶಗಳನ್ನು ಹಾಗೇ ವರದಿ ನೀಡುವ ವಿಚಾರ ಸೇರಿದಂತೆ ಎಲ್ಲವನ್ನೂ ಉಲ್ಲೇಖ ಮಾಡಿ ಆದೇಶ ಮಾಡಲಾಗಿದೆ

ಇನ್ನೂ ಈ ಒಂದು ಆದೇಶ ಬರುತ್ತಿದ್ದಂತೆ ರಾಜ್ಯದ ಸಮಸ್ತ ಸರ್ಕಾರಿ ನೌಕರರ ಪರವಾಗಿ ಮುಖ್ಯ ಮಂತ್ರಿಗಳಿಗೆ ಸರ್ಕಾರದ ಉನ್ನತ ಅಧಿಕಾರಿಗಳಿಗೆ ರಾಜ್ಯದ ಸಮಸ್ತ ಸರ್ಕಾರಿ ನೌಕರರ ಪರವಾಗಿ ಷಡಾಕ್ಷರಿ ಅವರು ಧನ್ಯವಾದಗಳನ್ಮು ಹೇಳಿದ್ದಾರೆ

 

ಸುದ್ದಿ ಸಂತೆ ನ್ಯೂಸ್

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.