ಏನೇಲ್ಲಾ ಪೊಸ್ಟ್ ಮಾಡುವ ನಮ್ಮ ದು ಅಂತಾ ಬೆನ್ನು ತಟ್ಟಿಕೊಳ್ಳುವ ಶಿಕ್ಷಕ ಸಂಘದ ನಾಯಕರೇ ಶಿಕ್ಷಕರ ಬಗ್ಗೆ ಮಾತನಾಡಿದ ಆ CRP ಬಗ್ಗೆ ಮೌನ ಯಾಕೇ ಎಲ್ಲಿದೆ ನಿಮ್ಮ ಧ್ವನಿ

Suddi Sante Desk

ಬೆಂಗಳೂರು –

ರಾಜ್ಯದಲ್ಲಿ ಶಿಕ್ಷಕರ ಉದ್ದಾರಕ್ಕಾಗಿ, ಶಿಕ್ಷಕರ ಸಮಸ್ಯೆ ಗಳ ಕುರಿತು ಹೋರಾಟ ಮಾಡಲು ಅವರ ಧ್ವನಿ ಯಾಗಿ ನಾಡಿನಲ್ಲಿ ಅದೇಷ್ಟೋ ಶಿಕ್ಷಕರ ಸಂಘಟನೆ ಗಳಿವೆ.ಇವುಗಳು ಮಾತ್ರ ಹೆಸರಿಗೆ ಎಂಬಂತೆ ಕಂಡು ಬರುತ್ತಿವೆ ಅದರಲ್ಲೂ ಇತ್ತೀಚಿನ ಪರಿಸ್ಥಿತಿಯಲ್ಲಿ ಈ ಒಂದು ಮಾತು ಸತ್ಯ ಎಂಬಂತಾಗಿದ್ದು ಇದಕ್ಕೆ ವರ್ಗಾ ವಣೆ ವಿಚಾರದಲ್ಲಿ ಶಿಕ್ಷಕರ ಬಗ್ಗೆ ಹಗುರವಾಗಿ ಮಾತ ನಾಡಿದ ವಿಚಾರವೇ ಸಾಕ್ಷಿ

ಹೌದು ಶಿಕ್ಷಕರ ಸಮಸ್ಯೆ ಏನೇ ಇದ್ದರೂ ಅವರ ಬೇಡಿಕೆಗಳ ಕುರಿತು ಹಾಗೇ ಇನ್ನಿತರ ಪ್ರಮುಖ ವಿಚಾರ ಮತ್ತು ಇವರ ಧ್ವನಿಯಾಗಿ ಕೆಲಸ ಮಾಡುವ ಮತ್ತು ನ್ಯಾಯ ಒದಗಿಸಲು ಈ ಒಂದು ಸಂಘಟನೆ ಮತ್ತು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸೇರಿದಂತೆ ಸರ್ವ ಸದಸ್ಯರನ್ನು ನೇಮಕ ಮಾಡಿರುತ್ತಾರೆ. ಇದಕ್ಕಾಗಿ ವರ್ಷಕ್ಕೊಮ್ಮೆ ಸದಸ್ಯತ್ವ ಹಣವನ್ನು ನೀಡುತ್ತಾರೆ ಇಷ್ಟೆಲ್ಲಾ ಇದ್ದರೂ ಕೂಡಾ ವರ್ಗಾವಣೆ ವಿಚಾರದಲ್ಲಿ ಶಿಕ್ಷಕರ ಬಗ್ಗೆ ಹಗುರವಾಗಿ ಮಾತನಾಡಿದ ಕನಕಗಿರಿ ಯ CRP ಸಂಗಮೇಶ ಹಿರೇಮಠ ಏನೇಲ್ಲಾ ಮಾತ ನಾಡಿದರು ರಾಜ್ಯದ ಶಿಕ್ಷಕರ ಸಂಘಟನೆಗಳು ಕೇಳಿ ಕೇಳಿಸದಂತೆ ಕಂಡರು ಕಾಣಿಸದಂತೆ ಇದ್ದಾರೆ

ಈ ಒಂದು ವಿಚಾರ ಕುರಿತು ಕಳೆದ ಎರಡು ದಿನ ಗಳಿಂದ ಈ ಒಂದು ವಿಚಾರದಲ್ಲಿ ನಾಡಿನ ಶಿಕ್ಷಕರು ಬೇಸರಗೊಂಡಿದ್ದಾರೆ ಇನ್ನೂ ಇತ್ತ ಸಿಡಿದೆದ್ದಿದ್ದಾರೆ ಆದರೆ ಈ ಒಂದು ವಿಷಯದಲ್ಲಿ ಆ ಒಂದು CRP ವಿರುದ್ಧ ಏನೇಲ್ಲಾ ಹೋರಾಟ ಮಾಡಬೇಕಿದ್ದ ಧ್ವನಿ ಎತ್ತಬೇಕಾಗಿದ್ದ ಶಿಕ್ಷಕ ಸಂಘಟನೆಯವರು ಯಾಕೇ ಮೌನವಾಗಿದ್ದಾರೆ.ಕನಕಗಿರಿ ಯಲ್ಲಿ ಒಂದು ಹೋರಾ ಟ ಬಿಟ್ಟರೆ ಯಾವುದೇ ಒಂದು ಸಂಘಟನೆ ಅವರ ವಿರುದ್ಧ ಧ್ವನಿ ಎತ್ತಲಿಲ್ಲ ಹೋರಾಟ ಮಾಡಲಿಲ್ಲ ಇದೇನಾ ಶಿಕ್ಷಕರ ಉದ್ದಾರಕ್ಕಾಗಿ ಹುಟ್ಟಿಕೊಂಡ ಸಂಘಟನೆಯ ಕಥೆ‌.

ವರ್ಗಾವಣೆಯ ವಿಚಾರದಲ್ಲಿ ಏನೇಲ್ಲಾ ಮಾತನಾಡಿ ದರು ಈವರೆಗೆ ಮಾತ್ರ ಅವರ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಲಿಲ್ಲ ಶಿಕ್ಷಣ ಸಚಿವರಿಗೆ ಇಲಾಖೆ ಯ ಅಧಿಕಾರಿಗಳಿಗೆ ಮನವಿ ನೀಡಲಿಲ್ಲ ತಾವೊಬ್ಬ ಇಲಾಖೆಯ ಅಧಿಕಾರಿ ಶಿಕ್ಷಕ ಆಗಿದ್ದರು ಕೂಡಾ ಶಿಕ್ಷಕರ ಬಗ್ಗೆ ಕೀಳಾಗಿ ಮಾತನಾಡಿದರು ಮೌನವಾಗಿ ದ್ದಾರೆ. ಇನ್ನೂ ಮುಂದೆ ಶಿಕ್ಷಕರ ಬಗ್ಗೆ ಯಾರು ಬೇಕಾ ದರೂ ಮಾತನಾಡುತ್ತಾರೆ ಯಾಕೆಂದರೆ ಅದನ್ನು ಕೇಳುವವರು ಇಲ್ಲದಂತೆ ಪರಿಸ್ಥಿತಿಯಲ್ಲಿ ಸಂಘಟನೆ ನಾಯಕರಿದ್ದಾರೆ.ಏನೇಲ್ಲಾ ಪೊಸ್ಟ್ ಮಾಡುವ ನಮ್ಮದು ನಾವು ಮಾಡಿದ್ದು ಎಂದು ಹೇಳಿಕೊಳ್ಳುವ ನಾಯಕರೇ ಎಲ್ಲಿದೆ ನಿಮ್ಮ ಧ್ವನಿ. ಇದೇನಾ ನಿಮ್ಮ ಹೋರಾಟ ಇದೇನಾ ಶಿಕ್ಷಕರ ಧ್ವನಿಯಾಗಿ ಕೆಲಸ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಿ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.