ತುಮಕೂರು –
ರಾಜ್ಯದ ಶಾಲಾ ಮಕ್ಕಳಿಗೆ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಮತ್ತೊಂದು ಶುಭ ಸುದ್ದಿಯನ್ನು ನೀಡಿದ್ದಾರೆ.ಹೌದು ಮಕ್ಕಳಿಗೆ ಶೀಘ್ರದಲ್ಲೇ ಹಾಲನ್ನು ವಿತರಣೆ ಮಾಡೊದಾಗಿ ಹೇಳಿದರು.ತುಮಕೂರಿನಲ್ಲಿ ಮಾತನಾಡಿದ ಅವರು ರಾಜ್ಯದ ಶಾಲಾ ಮಕ್ಕಳಿಗೆ ಹಾಲು ವಿತರಣೆ ಕುರಿತಂತೆ ಕೂಡಲೇ ಸೂಕ್ತವಾದ ತೀರ್ಮಾನವನ್ನು ಕೈಗೊಳ್ಳೊದಾಗಿ ಹೇಳಿದರು.
ಶಾಲಾ ಮಕ್ಕಳಿಗೆ ಮಿಲ್ಕ್ ಫೌಡರ್ ಸರಬರಾಜಿನಲ್ಲಿ ಅಡೆತಡೆಯಾಗಿದ್ದು ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶಾಲಾ ಮಕ್ಕಳಿಗೆ ಕಳೆದ ತಿಂಗಳು ಮಕ್ಕಳ ಮನೆಗಳಿಗೆ ಹಾಲಿನ ಫೌಡರ್ ಅನ್ನು ವಿತರಿಸಲಾ ಗಿದೆ. ಆದರೆ ಈ ತಿಂಗಳು ಹಾಲಿನ ಪೌಡರ್ ಸಂಗ್ರಹವಿಲ್ಲ ದಂತಾಗಿದೆ. ಹೀಗಾಗಿ ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು