ಶಿಕ್ಷಕರ ಸಹಕಾರ ಕೋರಿದ ಶಿಕ್ಷಣ ಸಚಿವರು – ಶಿಕ್ಷಕರ ಮೇಲೆಯೆ ಮುಂದಿನ ನಿರ್ಧಾರ ಎಂದರು ಸಚಿವರು…..

Suddi Sante Desk

ಶಿವಮೊಗ್ಗ –

ಶಾಲಾ ಮಕ್ಕಳ ಪಠ್ಯ ಕಡಿತಗೊಳಿಸಿದರೆ ಮುಂದಿನ ತರಗತಿಗಳಿಗೆ ತೊಂದರೆಯಾಗಲಿದೆ.ಬ್ರಿಡ್ಜ್ ಕೋರ್ಸ್‍ ಗಳ ಮೂಲಕ ಮಕ್ಕಳ ಪಠ್ಯವನ್ನು ಪೂರ್ಣಗೊಳಿಸ ಬೇಕಾಗಿದೆ ಹೀಗಾಗಿ ಶಿಕ್ಷಕರ ಸಹಕಾರದ ಮೇಲೆ ತೀರ್ಮಾನಿಸಲಾಗುತ್ತದೆ.ಹಾಗಾಗಿ ಇನ್ನೂ ಯಾವು ದೇ ನಿರ್ಣಯ ಕೈಗೊಂಡಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು

ಪಠ್ಯ ಕಡಿತದ ಬಗ್ಗೆ ಯಾವುದೇ ನಿರ್ಧಾರವನ್ನು ಇನ್ನೂ ಕೈಗೊಂಡಿಲ್ಲ.ಪಠ್ಯ ಪೂರ್ಣಗೊಳಿಸಿದರೆ ಮಕ್ಕಳಿಗೆ ಲಾಭವಾಗುತ್ತದೆ. ಮಕ್ಕಳು ಒಂದೂವರೆ ವರ್ಷ ಶಾಲೆಯಿಂದ ಹೊರಗುಳಿದ್ದಾರೆ.ಅದನ್ನು ಬ್ರಿಡ್ಜ್ ಕೋರ್ಸ್ ಮೂಲಕ ಪೂರ್ಣಗೊಳಿಸಬೇಕಾ ಗಿದೆ ಎಂದರು.ಇನ್ನೂ ಒಂದರಿಂದ ಐದನೇ ತರಗತಿ ಯವರೆಗೆ ಶಾಲೆ ಆರಂಭಿಸುವ ಕುರಿತು ಶೀಘ್ರವೇ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಲಾಗುವುದು.

ಸಮಿತಿ ಅನುಮತಿ ನೀಡಿದರೆ ಶಾಲೆಗಳನ್ನು ಪುನರಾರಂಭಿಸಲಾಗುವುದು ಎಂದು ಸಚಿವರು ಹೇಳಿದರು.ಈಗಾಗಲೇ 9ರಿಂದ 12 ಹಾಗೂ 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳು ನಡೆಯುತ್ತಿವೆ. ಒಂದರಿಂದ ಐದನೆ ತರಗತಿಗಳ ವರೆಗೂ ಶಾಲೆ ಆರಂಭಿಸುವ ಬಗ್ಗೆ ಸದ್ಯದಲ್ಲೇ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ನೆರೆ ರಾಜ್ಯ ಕೇರಳದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಕೋವಿಡ್ ಸಂಖ್ಯೆ ಹೆಚ್ಚಾ ದರೆ ಶಾಲೆಗಳನ್ನು ತಕ್ಷಣ ಮುಚ್ಚುವ ಅವಕಾಶವಿದೆ ಎಂದು ಅವರು ತಿಳಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.