ಶಾಲಾ ಆರಂಭದ ವಿಚಾರದಲ್ಲಿ ನಾಡಿನ ಜನತೆಯ ಬೆಂಬಲ ಕೇಳಿದ ಶಿಕ್ಷಣ ಸಚಿವರು…..

Suddi Sante Desk

ಬೆಂಗಳೂರು –

ಮಹಾಮಾರಿ ಕೋವಿಡ್ ಸಂಕಷ್ಟದ ನಡುವೆಯೂ ಕೂಡಾ ರಾಜ್ಯದಲ್ಲಿ ಶಾಲೆಗಳನ್ನು ಆರಂಭ ಮಾಡಲಾ ಗುತ್ತಿದೆ.ಆಗಸ್ಟ್ 23 ರಿಂದ 9 ರಿಂದ ತರಗತಿಗಳು ಆರಂಭವಾಗಲಿದ್ದು ಇನ್ನೂ ಈ ಒಂದು ವಿಚಾರ ಕುರಿತು ಶಿಕ್ಷಣ ಸಚಿವ ಬಿ ಸಿ ನಾಗೇಶ್ ನಾಡಿನ ಜನತೆಯ ಬೆಂಬಲ ವನ್ನು ಕೇಳಿದ್ದಾರೆ

ನಮ್ಮ ಈ ಒಂದು ನಿರ್ಧಾರಕ್ಕೆ ನಾಡಿನ ಜನತೆಯ ಬೆಂಬಲದ ಅಗತ್ಯವಿದೆ.ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಾರದು ಎಂದು ಇಂತಹ ಸಂಕಷ್ಟದ ನಡುವೆಯೂ ಶಾಲೆ ಆರಂಭಿಸುವ ದೃಢವಾದ ನಿರ್ಧಾರಕ್ಕೆ ಬರಲಾಗಿದೆ. ನಾಡಿನ ಜನತೆಯ ಪೋಷಕರ ಬೆಂಬಲವನ್ನು ಈ ಮೂಲಕ ಕೋರುತ್ತಿದ್ದೇವೆ.ಬನ್ನಿ ಮಕ್ಕಳೇ ಮರಳಿ ಶಾಲೆಗೆ ನಿಮ್ಮ ಸುರಕ್ಷಿತಯ ಜವಾಬ್ದಾರಿ ನಮ್ಮದು ಎಂದು ಶಿಕ್ಷಣ ಸಚಿವರು ಟ್ಚೀಟ್ ಮಾಡಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.