7ನೇ ವೇತನ ಆಯೋಗ ಜಾರಿಗೊಳಿಸಿ NPS ರದ್ದು ಮಾಡುವ ಭರವಸೆ ನೀಡಿದ ಸಚಿವರು – ಷಡಾಕ್ಷರಿ ಅವರ ನೇತ್ರತ್ವದಲ್ಲಿ ನೂತನ ಸಚಿವರಿಗೆ ಸನ್ಮಾನ ಗೌರವ ಬೇಡಿಕೆಗಳನ್ನಿಟ್ಟ ನಿಯೋಗ…..

Suddi Sante Desk
7ನೇ ವೇತನ ಆಯೋಗ ಜಾರಿಗೊಳಿಸಿ NPS ರದ್ದು ಮಾಡುವ ಭರವಸೆ ನೀಡಿದ ಸಚಿವರು – ಷಡಾಕ್ಷರಿ ಅವರ ನೇತ್ರತ್ವದಲ್ಲಿ ನೂತನ ಸಚಿವರಿಗೆ ಸನ್ಮಾನ ಗೌರವ ಬೇಡಿಕೆಗಳನ್ನಿಟ್ಟ ನಿಯೋಗ…..

ಬೆಂಗಳೂರು

ರಾಜ್ಯ ಸರ್ಕಾರಿ ನೌಕರರ ಬಹು ದಿನಗಳ ಬೇಡಿಕೆ ಯಾದಂತ 7ನೇ ರಾಜ್ಯ ವೇತನ ಆಯೋಗವನ್ನು ಜಾರಿ ಮಾಡಿ ಇದರೊಂದಿಗೆ NPS ರದ್ದುಗೊಳಿಸಿ OPS ಜಾರಿಗೆ ಮಾಡುವ ಕುರಿತು ಸಿದ್ಧರಾಮಯ್ಯ ಅವರ ಗಮನ ಸೆಳೆಯುವುದಾಗಿ ಸಚಿವ ಹೆಚ್ ಕೆ ಪಾಟೀಲ್ ಭರವಸೆ ನೀಡಿದ್ದಾರೆ.ಈ ಮೂಲಕ ರಾಜ್ಯ ಸರ್ಕಾರಿ ನೌಕರರಿಗೆ ಶುಭಸುದ್ದಿಯನ್ನು ನೀಡಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ ಎಸ್ ಷಡಾಕ್ಷರಿ ಅವರು ಸಂಸದೀಯ ಮತ್ತು ಕಾನೂನು ಹಾಗೂ ಪ್ರವಾಸೋದ್ಯಮ ಸಚಿವರಾದ ಎಚ್ ಕೆ ಪಾಟೀಲ್ ಅವರನ್ನು ಅಭಿನಂದಿಸಿದರು

7ನೇ ವೇತನ ಆಯೋಗದ ಅನುಷ್ಠಾನ ಹಾಗೂ ಓಪಿಎಸ್ ಜಾರಿಗೊಳಿಸುವ ಸರ್ಕಾರಿ ನೌಕರ ಪರವಾಗಿ ಸದನದಲ್ಲಿ ಮಾತನಾಡುವಂತೆ ಕೋರಿ ಒತ್ತಾಯ ವನ್ನು ಮೂಡಾ ಮಾಡಿದರು

ಸರ್ಕಾರಿ ನೌಕರರ ಕೋರಿಕೆಗೆ ಸ್ಪಂದಿಸಿದ ಸಚಿವ ಹೆಚ್.ಕೆ ಪಾಟೀಲ್ ಮುಖ್ಯಮಂತ್ರಿಗಳ ಗಮನ ಸೆಳೆಯುವುದಾಗಿ ಭರವಸೆ ನೀಡಿದ್ದಾರೆ. ಈ ಮೂಲಕ ಶೀಘ್ರವೇ ಎನ್ ಪಿಎಸ್ ರದ್ದುಗೊಳಿಸಿ ಓಪಿಎಸ್ ಜಾರಿ ಹಾಗೂ 7ನೇ ವೇತನ ಆಯೋಗ ಜಾರಿಯ ಭರವಸೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ನೌಕರರ ಸಂಘದ ಉಪಾಧ್ಯ ಕ್ಷರಾದ ಎನ್ ಮಾಲ್ತೇಶ್, ರಾಜ್ಯ ಕಾರ್ಯದರ್ಶಿ ಯಾದ ಡಾ, ನೆಲ್ಕುದ್ರಿ ಸದಾನಂದ , ವೇಣ ಗೋಪಾಲ್, ಚೇತನ್, ನಾಗನಗೌಡ  ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.