ಅಕ್ರಮ ಪಿಸ್ತೂಲ್ ಮಾರಾಟ ಜಾಲ ಪತ್ತೆ – ಪಿಸ್ತೂಲ್ ನೊಂದಿಗೆ ನಾಲ್ವರ ನ್ನು ಬಂಧನ ಮಾಡಿದ ಪೊಲೀಸರು

Suddi Sante Desk

ಕಲಬುರಗಿ

ರಕ್ತ ಚರಿತ್ರೆಯ ಇತಿಹಾಸ ಹೊಂದಿರುವ ಭೀಮಾತೀರದಲ್ಲಿ ಇನ್ನೂ ಬಂದೂಕುಗಳು ಜೀವಂತವಾಗಿವೆ.ಹೌದು ಈ ಒಂದು ಮಾತಿಗೆ ಸಾಕ್ಷಿಯಾಗಿದೆ ಅಕ್ರಮವಾಗಿ ಪಿಸ್ತೂಲ್ ಮಾರಾಟ ಮಾಡುತ್ತಿದ್ದ ಜಾಲವೊಂದು.ಭೀಮಾ ತೀರದ ಅಫಜಲಪುರದಲ್ಲಿ ಕಂಟ್ರಿ ಮೇಡ್‌ ಪಿಸ್ತೂಲ್ ಮಾರಾಟ ಜಾಲ ಪತ್ತೆಯಾಗಿದೆ.ಈ ಸಂಬಂಧ ನಾಲ್ವರನ್ನು ಸಧ್ಯ ಪೊಲೀಸರು ಬಂಧಿಸಿದ್ದಾರೆ.ಇದೀಗ ಅಫಜಲಪುರದಲ್ಲಿ ಕಂಟ್ರಿ ಮೇಡ್‌ ಪಿಸ್ತೂಲ್ ಮಾರಾಟ ಜಾಲ ಪತ್ತೆಗಾಗಿದ್ದು ಆತಂಕದಲ್ಲಿ ಈಗ ಜನರಿಗೆ ಭಯ ಉಂಟಾಗಿದೆ.

ಇಂಥದ್ದೊಂದು ಜಾಲವನ್ನು ಅಫಜಲಪುರ ಪೊಲೀಸರು ಖಚಿತ ಮಾಹಿತಿ ಆಧರಿಸಿ ಬೇಟೆಯಾಡಿದ್ದಾರೆ.ಸಿದ್ದಪ್ಪ, ಭೀಮಣ್ಣ,ಪರಸಯ್ಯ ಮತ್ತು ಸಲೀಂ ಬಂಧಿತರಾಗಿದ್ದಾರೆ ಯಡ್ರಾಮಿ ತಾಲ್ಲೂಕಿನ ಸುಂಬಡ ಗ್ರಾಮದ ಭೀಮಣ್ಣ ಪೂಜಾರಿ ಮತ್ತು ಸಿದ್ದಪ್ಪ ಡಿಗ್ಗಾವಿ ದಂಧೆಯ ಪ್ರಮುಖರು. ಭೀಮಣ್ಣ ಪೂಜಾರಿ ಅಫಜಲಪುರ ಪಟ್ಟಣದ ಬಸ್ ನಿಲ್ದಾಣದ ಬಳಿ ಪಿಸ್ತೂಲ್ ಇಟ್ಟುಕೊಂಡು ನಿಂತಿದ್ದಾಗ ಪೊಲೀಸರು ಸೆರೆ ಹಿಡಿದಿದ್ದಾರೆ.ಭೀಮಣ್ಣ ಪೂಜಾರಿಯನ್ನು ತೀವ್ರ ವಿಚಾರಣೆ ನಡೆಸಿರುವ ಪೊಲೀಸರು ಬಳಿಕ ನಾಲ್ವರ ನ್ನು ಬಂಧಿಸಿದ್ದಾರೆ.ಸಿದ್ದಪ್ಪ ಡಿಗ್ಗಾವಿ ಮತ್ತು ಭೀಮಣ್ಣ ಪೂಜಾರಿ ಇಬ್ಬರು ಕಂಟ್ರಿ ಪಿಸ್ತೂಲ್‌ಗಳನ್ನು ಮಾರಾಟ ಮಾಡುತ್ತಿದ್ದರು.ಇವರ ಬಳಿ ನಾಡ ಪಿಸ್ತೂಲ್ 50 ಸಾವಿರ ರೂ.ಗೆ ಖರೀದಿಸಿರುವ ಜೇವರ್ಗಿ ತಾಲ್ಲೂಕಿನ ಮಂದೆವಾಲ್ ಗ್ರಾಮದ ಸಲೀಂ ಶಿರಸಗಿ ಹಾಗೂ 65 ಸಾವಿರ ರೂ.ಗಳಿಗೆ ಖರೀದಿಸಿದ್ದ ಯಡ್ರಾಮಿ ತಾಲ್ಲೂಕಿನ ಮಳ್ಳಿ ಗ್ರಾಮದ ಪರಸಯ್ಯ ಗುತ್ತೇದಾರನನ್ನು ಪೊಲೀಸರು ಬಂಧಿಸಿದ್ದಾರೆ. 4 ನಾಡ ಪಿಸ್ತೂಲ್,18 ಜೀವಂತ ಗುಂಡುಗಳನ್ನು ವಶಪ ಡಿಸಿಕೊಳ್ಳಲಾಗಿದೆ.

ಪ್ರಕರಣದ ಮತ್ತೊಬ್ಬ ಆರೋಪಿ ಸೈಫನ್ ಮತ್ತು ಭೀಮಣ್ಣ ಇಬ್ಬರು ಈ ಹಿಂದೆ ಮುಂಬೈನಲ್ಲಿ ಟ್ರಾನ್ಸ್‌ಪೋರ್ಟ್‌ ಒಂದರಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾಗ ಸ್ನೇಹಿತ ರಾಗಿದ್ದಾರೆ.ನಂತ್ರ ಇಬ್ಬರು ಪಿಸ್ತೂಲ್ ಮಾರಾಟ ದಂಧೆ ಯಲ್ಲಿ ತೊಡಗಿದ್ದಾರೆ. ಮಾಸ್ಟರ್ ಮೈಂಡ್ ಸೈಫನ್ ಭೀಮಣ್ಣನಿಗೆ ಪಿಸ್ತೂಲ್ ಖರೀದಿ ಮಾರಾಟದ ಬಗ್ಗೆ ಗೈಡ್ ಮಾಡುತ್ತಿದ್ದ.ಇಬ್ಬರ ಜೊತೆಗೆ ಸಿದ್ದಪ್ಪ ಸೇರಿಕೊಂಡಿದ್ದು ಪಿಸ್ತೂಲ್‌ಗಳನ್ನು ಮಾರಾಟ ಮಾಡ್ತಿದ್ದಾರೆ.ಮಧ್ಯಪ್ರದೇಶದ ಧಾರ್ ಜಿಲ್ಲೆಯಿಂದ ನಾಡ ಪಿಸ್ತೂಲ್ಗಳನ್ನು 20 ಸಾವಿರ ರೂ.ಗೆ ಖರೀದಿಸಿ ತಂದು50 ರಿಂದ 60 ಸಾವಿರ ರೂ.ಗೆ ಮಾರಾಟ ಮಾಡ್ತಿದ್ದರು.ಕಿಲಾಡಿ ಸೈಫನ್ ಮೇಲೆ ಕೊಲೆ ಕೇಸ್ ಸೇರಿದಂತೆ ಹತ್ತು ಕೇಸ್ ಗಳಿದ್ದು ತಲೆಮರೆಸಿ ಕೊಂಡಿದ್ದಾನೆ.ಈ ಮಾರಾಟ ದಂಧೆಯಲ್ಲಿ ಕೈವಾಡ ಹೊಂದಿ ರುವ ಸೈಫನ್ ಹಾಗೂ ಬಾಬು ಎನ್ನುವ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.