ಮುಖ್ಯೋಪಾಧ್ಯಾಯ ವಿರುದ್ದ ವಿದ್ಯಾರ್ಥಿಗಳ,ಪೋಷಕರ ಪ್ರತಿಭಟನೆ – ಸಿಡಿದೆದ್ದ ವಿದ್ಯಾರ್ಥಿಗಳು,ಪೋಷಕರು ಬೀಗ ಜಡಿದು ಪ್ರತಿಭಟನೆ ಆಕ್ರೋಶ…..

Suddi Sante Desk
ಮುಖ್ಯೋಪಾಧ್ಯಾಯ ವಿರುದ್ದ ವಿದ್ಯಾರ್ಥಿಗಳ,ಪೋಷಕರ ಪ್ರತಿಭಟನೆ – ಸಿಡಿದೆದ್ದ ವಿದ್ಯಾರ್ಥಿಗಳು,ಪೋಷಕರು ಬೀಗ ಜಡಿದು ಪ್ರತಿಭಟನೆ ಆಕ್ರೋಶ…..

ಕಾರವಾರ

ಮುಖ್ಯೋಪಾಧ್ಯಾಯರೊಬ್ಬರ ವಿರುದ್ಧ ಪ್ರತಿಭಟನೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ ಹೌದು ತರಗತಿಗೆ ಬರುತ್ತಿಲ್ಲ,ಪಾಠ ಮಾಡುತ್ತಿಲ್ಲ ಎಂದು ಅರೋಪಿಸಿ ಶಾಲಾ ವಿದ್ಯಾರ್ಥಿಗಳು,ಪೋಷಕರು ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೊಯಿಡಾದ ರಾಮನಗರ ಹನುಮಾನ್ ಲೇನ್ ಸರ್ಕಾರಿ ಶಾಲೆಯಲ್ಲಿ ನಡೆದಿದೆ

ಶಾಲೆಯ ಮುಖ್ಯೋಪಾಧ್ಯಾಯರಾಗಿರುವ ರಾಮಾ ಚವ್ಹಾಣ್. ದಿನನಿತ್ಯ ತರಗತಿಗೆ ಗೈರ ಹಾಜರಾಗುತ್ತಿರುವ ಆರೋಪ. ಅಲ್ಲದೆ ಶಾಲೆಗೆ ಬಂದ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಬದಲು ಬೈಗುಳ. ವಿನಾಕಾರಣ ವಿದ್ಯಾರ್ಥಿಗಳಿಗೆ ಬೈಯುತ್ತಿರುವುದರಿಂದ ರೋಸಿ ಹೋಗಿರುವ ವಿದ್ಯಾರ್ಥಿಗಳು ಈ ವಿಚಾರ ಪೋಷಕರಿಗೆ ತಿಳಿಸಿದ್ದು ವಿದ್ಯಾರ್ಥಿಗಳು.ಮುಖ್ಯೋಪಾಧ್ಯಾಯ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದರು.

ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ಬಿಇಒ. ಪೋಷಕ ರೊಂದಿಗೆ ಮಾತನಾಡಿ ಬಳಿಕ ಮುಖ್ಯೋಪಾಧ್ಯಾಯ ವರ್ತನೆ ಕುರಿತು ಮಾಹಿತಿಯನ್ನು ಪಡೆದುಕೊಂಡು ಸಮಸ್ಯೆ ಪರಿಹಾರದ ಭರವಸೆ ನೀಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಕಾರವಾರ‌…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.