ಯಶಸ್ವಿಯಾಗಿ ನಡೆಯಿತು ರಾಯಚೂರಿನ ಸಭೆ ಪೂರ್ವಭಾವಿ ಯಲ್ಲಿ ತಗೆದುಕೊಂಡರು ಹೋರಾಟದ ನಿರ್ಧಾರ…..

Suddi Sante Desk


ರಾಯಚೂರು –

ಕೊನೆಗೂ ವರ್ಗಾವಣೆಯ ವಂಚಿತಗೊಂಡ ಶಿಕ್ಷಕರು ಹೋರಾಟಕ್ಕೆ ಸಿದ್ದರಾಗುತ್ತಿದ್ದಾರೆ.ಹೌದು ಕಳೆದ ಹಲವಾರು ವರ್ಷಗಳಿಂದ ನಮಗೂ ವರ್ಗಾವಣೆ ಭಾಗ್ಯ ಸಿಗುತ್ತದೆ ಎಲ್ಲರ ಹಾಗೇ ನಾವು ಕೂಡಾ ನಮ್ಮ ಸ್ವಂತ ಜಿಲ್ಲೆಗೆ ಹೋಗುತ್ತೇವೆ ಎಂದುಕೊಂಡು ಕಾದು ಕಾದು ಬೇಸತ್ತ ಶಿಕ್ಷಕರು ಈಗ ಅವರು ಬೆಂಗಳೂರು ಚಲೋ ಗೆ ಸಿದ್ದರಾಗುತ್ತಿದ್ದಾರೆ.ಈ ಒಂದು ಹೋರಾಟದ ಕುರಿತಂತೆ ಇಂದು ರಾಯಚೂರಿನಲ್ಲಿ ಪೂರ್ವಭಾವಿ ಸಭೆಯನ್ನು ಕರೆಯಲಾಗುತ್ತು.

ರಾಯಚೂರಿನ ಪಬ್ಲೀಕ್ ಗಾರ್ಡ್ ನಲ್ಲಿ ಈ ಒಂದು ಸಭೆ ಯಲ್ಲಿ ಕರೆಯಲಾಗಿತ್ತು ರಾಯಚೂರು ಕೊಪ್ಪಳ ಗದಗ ಸೇರಿದಂತೆ ಸುತ್ತ ಮುತ್ತಲಿನಿಂದ ಸಾಕಷ್ಟು ಪ್ರಮಾಣದಲ್ಲಿ ಶಿಕ್ಷಕರು ಈ ಒಂದು ಸಭೆಯಲ್ಲಿ ಪಾಲ್ಗೊಂಡು ತಮ್ಮ ಸಲಹೆ ಸೂಚನೆಗಳನ್ನು ನೀಡಿದರು.ಇದರೊಂದಿಗೆ ರಾಯಚೂರಿ ನಲ್ಲಿನ ಪೂರ್ವಭಾವಿ ಸಭೆ ಬಹಳ ಯಶಸ್ವಿಯಾಗಿ ಜರುಗಿತು.

ಶಿಕ್ಷಕರ ವರ್ಗಾವಣೆ ಸಮಸ್ಯೆಗಳ ಕುರಿತಂತೆ ಸಭೆಯಲ್ಲಿ ಚರ್ಚೆಯನ್ನು ಮಾಡಲಾಯಿತು.ಇನ್ನೂ ಇದರೊಂದಿಗೆ ತಾಲೂಕಾವಾರು ಸಂಘಟನೆಗಳನ್ನು ರಚನೆ ಮಾಡಿ ಕೆಲ ವೊಂದಿಷ್ಟು ಜವಾಬ್ದಾರಿಗಳನ್ನು ನೀಡಲಾಯಿತು. ಇದ ರೊಂದಿಗೆ ಬೆಂಗಳೂರು ಚಲೋ ಬಗ್ಗೆ ಚರ್ಚಿಸಿ ಜನೆವರಿ ಮೊದಲ ವಾರದಲ್ಲಿಯೇ ತಯಾರಾಗಲು ನಿರ್ಧಾರಿಸಲಾ ಯಿತು.ಹಾಗೇ ಎಲ್ಲಾ ಜಿಲ್ಲೆಗಳಲ್ಲಿಯೂ ಈ ರೀತಿಯಾಗಿ ಬೆಂಗಳೂರು ಚಲೋ ಜಿಲ್ಲಾ ಮಟ್ಟದ ಪೂರ್ವಭಾವಿ ಮುಖಾ ಮುಖಿ ಸಭೆಗಳನ್ನು ಆಯೋಜಿಸಿ ತಾಲೂಕಾ ವಾರು ಸಂಘಟನೆಗಳನ್ನು ರಚಿಸಿ ಮಾಧ್ಯಮಗಳ ಮೂಲಕ ಎಲ್ಲರ ಗಮನಕ್ಕೆ ತರಬೇಕೆಂದು ವಿನಂತಿ ಮಾಡಲಾಯಿತು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.