ನಡು ರಸ್ತೆಯಲ್ಲಿಯೇ ನಗರಸಭೆಯ ಆಯುಕ್ತರನ್ನು ಥಳಿಸಿದ ಶಾಲಾ ಸಿಬ್ಬಂದಿ – ಆಯುಕ್ತರೆನ್ನದೇ ಹಿಗ್ಗಾ ಮುಗ್ಗಾ ಥಳಿತ…..

Suddi Sante Desk

ಹಾಸನ –

ನಡು ರಸ್ತೆಯಲ್ಲಿಯೇ ನಗರ ಸಭೆಯ ಆಯುಕ್ತರನ್ನು ಹಿಗ್ಗಾ ಮುಗ್ಗಾ ಥಳಿಸಿದ ಘಟನೆ ಹಾಸನದಲ್ಲಿ ನಡೆದಿದೆ.ಹೌದು ನಗರಸಭೆ ಆಯುಕ್ತರು ಎಂದು ಸರಿಯಾಗಿ ತಿಳಿದುಕೊಳ್ಳದೇ ನಡುರಸ್ತೆಯಲ್ಲೇ ಹಲ್ಲೆಯನ್ನು ಮಾಡಿದ್ದಾರೆ ಶಾಲಾ ಸಿಬ್ಬಂದಿ. ಹಾಸನದ ಹೇಮಾವತಿ ನಗರ ಯತೀಂದ್ರ ಕಾಲೇಜು ಬಳಿ ಈ ಒಂದು ಘಟನೆ ನಡೆದಿದೆ.

ಯತೀಂದ್ರ ಪಬ್ಲಿಕ್ ಸ್ಕೂಲ್ ಮಾಲೀಕ ಸಿಬ್ಬಂದಿ ಯಿಂದ ಈ ಒಂದು ಹಲ್ಲೆಯಾಗಿದೆ.ಯತಿಂದ್ರ ಕಾಲೇಜನ್ನು ಕೊರೋನ ಲಸಿಕಾ ಕೇಂದ್ರ ವಾಗಿ ಬಳಸಲಾಗಿತ್ತು 2 ಗಂಟೆಗೆ ವ್ಯಾಕ್ಸಿನೇಷನ್‌ ನಿಲ್ಲಿಸು ವಂತೆ ಸ್ಕೂಲ್ ಮಾಲೀಕರ ಸೂಚನೆಯನ್ನು ನೀಡಿದ್ದ ರಂತೆ. 6 ಗಂಟೆಯವರೆಗೆ ವ್ಯಾಕ್ಸಿನೇಷನ್‌ ಮಾಡಲು ಪ್ಲಾನ್ ಮಾಡಲಾಗಿದೆ ಎಂದು ಆಯುಕ್ತರು ಹೇಳಿದ್ದರು.

ಇದೇ ವಿಷಯಕ್ಕೆ ಇಬ್ಬರ ನಡುವೆ ವಾಗ್ವಾದ ಆರಂಭ ಗೊಂಡು ನಗರಸಭೆ ಆಯುಕ್ತರ ವಿರುದ್ಧ ಕೈ ಮಿಲಾ ಯಿಸಿ ಹಲ್ಲೆ ಮಾಡಿದ್ದಾರೆ ಯತೀಂದ್ರ ಪಬ್ಲಿಕ್ ಶಾಲೆ ಸಿಬ್ಬಂದಿ ಮತ್ತು ಮಾಲೀಕರು.ಕೃಷ್ಣಮೂರ್ತಿ ಹಲ್ಲೆ ಗೊಳಗಾದ ನಗರಸಭೆ ಆಯುಕ್ತರಾಗಿದ್ದು ಸಧ್ಯ ಈ ಕುರಿತಂತೆ ದೂರನ್ನು ದಾಖಲು ಮಾಡಿದ್ದು ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿ ದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.