ಕೊಡುಗೆಯಾಗಿ ಬಂದಿದ್ದ ಬೆಳ್ಳಿ ಗದೆಯನ್ನು ಕೊಡುಗೆಯಾಗಿ ನೀಡಿದ CM – ಶ್ರೀ ಮಠಕ್ಕೆ ಗಿಪ್ಟ್ ನೀಡಿ ಸಾಮಾನ್ಯ ಮುಖ್ಯಮಂತ್ರಿ ಹೆಸರಿಗೆ ಸಾಕ್ಷಿಯಾದರು…..

Suddi Sante Desk

ಮಂಡ್ಯ –

ನಾಡದೋರೆ ಬಸವರಾಜ ಬೊಮ್ಮಾಯಿ ಸದಾ ನಾನು ಯಾವಾಗಲೂ ಸಾಮಾನ್ಯ ಮುಖ್ಯಮಂತ್ರಿ ಎಂದು ಹೇಳು ತ್ತಿದ್ದರು ಈ ಒಂದು ಮಾತಿಗೆ ಇವರು ಮತ್ತೊಮ್ಮೆ ಸಾಕ್ಷಿ ಯಾಗಿ ಕೆಲಸದ ಮೂಲಕ ತೋರಿಸಿಕೊಟ್ಟಿದ್ದಾರೆ.ಹೌದು ಈ ಹಿಂದೆ ತಮಗೆ ಕಾರ್ಯಕ್ರಮ ದಲ್ಲಿ ಕೊಡುಗೆಯಾಗಿ ಬೆಳ್ಳಿ ಗದೆ ಬಂದಿತ್ತು ಅದನ್ನು ಈವರೆಗೆ ತಮ್ಮಲ್ಲಿ ಇಟ್ಟುಕೊಂಡಿದ್ದ ಬಸವರಾಜ ಬೊಮ್ಮಾಯಿ ಅವರು ಇಂದು ಆದಿಚುಂಚನ ಗಿರಿ ಶ್ರೀಮಠಕ್ಕೆ ಬೆಳ್ಳಿ ಗದೆ ಗಿಫ್ಟ್ ಕೊಟ್ಟಿದ್ದಾರೆ ಸಿಎಂ.

ಶ್ರೀಕ್ಷೇತ್ರದ ಆಂಜನೇಯ ದೇಗುಲಕ್ಕೆ ಬೆಳ್ಳಿ ಗದೆಯನ್ನು ಇಂದು ಕೊಡುಗೆಯಾಗಿ ನೀಡಿದ್ದಾರೆ.ಸಿಎಂಗೆ ಈ ಹಿಂದೆ ಸಚಿವ ನಾರಾಯಣಗೌಡರು ಕೊಟ್ಟಿದ್ದರು ಬೆಳ್ಳಿ ಗದೆಯನ್ನು ಅದನ್ನು ಯುವ ಜನೋತ್ಸವ ಸಮಾರೋಪ ಸಮಾ ರಂಭ ದಲ್ಲಿ ಕೊಟ್ಟಿದ್ದರು.ಈ ಒಂದು ಗದೆಯನ್ನು ಶ್ರೀಗಳಿಗೆ ಬೆಳ್ಳಿ ಗದೆ ಹಸ್ತಾಂತರ ಮಾಡಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು ಕತ್ತಿ ಕೊಟ್ಟರೆ ಆದಿ ಶಕ್ತಿ ದೇಗುಲಕ್ಕೆ ಕೊಡ್ತೀನಿ ಗದೆ ಕೊಟ್ಟರೆ ಆಂಜನೇಯನ ದೇಗುಲಕ್ಕೆ ಕೊಡೋದನ್ನ ರೂಢಿಸಿಕೊಂಡಿದ್ದೇನೆ ಎಂದರು.

ಅದರಂತೆ ಶ್ರೀಮಠದ ಆಂಜನೇಯನ ದೇಗುಲಕ್ಕೆ ಗದೆ ಕೊಡ್ತೀನಿ ಎಂದರು.ಇದರೊಂದಿಗೆ ನಾನೊಬ್ಬ ಸಾಮಾನ್ಯ ಮುಖ್ಯಮಂತ್ರಿ ಅಂತಾ ಮಾತಿಗೆ ಈ ಮೂಲಕ ಸಾಕ್ಷಿ ಯಾಗಿ ತೋರಿಸಿಕೊಟ್ಟರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.