ಬೆಂಗಳೂರು
ರಂಜಾನ್ ತಿಂಗಳ ಅವಧಿಯಲ್ಲಿ ಕರ್ನಾಟಕದಲ್ಲಿ ಉರ್ದು ಶಾಲೆಗಳ ಅವಧಿಯನ್ನು ಬದಲಾವಣೆ ಯಾಗಲಿದೆ.ಈ ಕುರಿತು ಸರ್ಕಾರದ ಪ್ರಧಾನ ಕಾರ್ಯದರ್ಶಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ರಿಗೆ ಪತ್ರವನ್ನು ಬರೆದಿದ್ದಾರೆ.
ರಂಜಾನ್ ತಿಂಗಳ ಅವಧಿಯಲ್ಲಿ ಶಾಲಾ ಅವಧಿ ಬದಲಾವಣೆ ಮಾಡುವ ಕುರಿತು ಕರ್ನಾಟಕ ರಾಜ್ಯ ಭಾಷಾ ಅಲ್ಪಸಂಖ್ಯಾತ ಶಿಕ್ಷಕರ ಕ್ಷೇಮಾ ಭಿವೃದ್ಧಿ ಸಂಘ(ರಿ) ಸರ್ಕಾರಕ್ಕೆ ಮನವಿ ಮಾಡಿತ್ತು.
ಸರ್ಕಾರದ ಅಧೀನ ಕಾರ್ಯದರ್ಶಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (ಪ್ರಾಥಮಿಕ) ಮಹಾಂತಯ್ಯಎಸ್ ಹೊಸಮಠ ಆದೇಶ ಹೊರಡಿಸಿದ್ದಾರೆ.ರಂಜಾನ್ ತಿಂಗಳಿನಲ್ಲಿ ಉರ್ದು ಶಾಲೆಗಳ ಶಾಲಾ ಅವಧಿಗಳನ್ನು ಬದಲಾವಣೆ ಮಾಡುವ ಬಗ್ಗೆ ಎಂಬ ವಿಷಯವನ್ನು ಆದೇಶ ಒಳಗೊಂಡಿದೆ.
ರಾಜ್ಯ ಭಾಷಾ ಅಲ್ಪಸಂಖ್ಯಾತ ಶಿಕ್ಷಕರ ಕ್ಷೇಮಾಭಿ ವೃದ್ಧಿ ಸಂಘ (ರಿ.) ಸಲ್ಲಿಕೆ ಮಾಡಿದ್ದ ಮನವಿ ಪತ್ರವನ್ನು ಉಲ್ಲೇಖಿಸಿ ಈ ಆದೇಶ ನೀಡಲಾಗಿದೆ ಕರ್ನಾಟಕ ರಾಜ್ಯ ಭಾಷಾ ಅಲ್ಪಸಂಖ್ಯಾತ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘ (ರಿ.), ಬೆಂಗಳೂರಿ ಇವರ ಮನವಿಗೆ ಸಂಬಂಧಿಸಿದಂತೆ, ದಿನಾಂಕ 23/03/ 2023ರಿಂದ ರಂಜಾನ್ ತಿಂಗಳು ಕೊನೆಗೊಳ್ಳುವ ತನಕ ಉರ್ದು ಶಾಲೆಗಳ ಶಾಲಾ ಅವಧಿಯನ್ನು ಬೆಳಗಿನ ಅವಧಿಯಲ್ಲಿ ನಡೆಸಲು ಅನುಕೂಲ ಮಾಡಿಕೊಡುವಂತೆ ಕೋರಿರುತ್ತಾರೆ.
ಈ ಬಗ್ಗೆ ನಿಯಮಾನುಸಾರ ಪರಿಶೀಲಿಸಿ ಸೂಕ್ತ ಕ್ರಮವಹಿಸಿ ಕ್ರಮದ ಬಗ್ಗೆ ಸರ್ಕಾರಕ್ಕೆ ವರದಿ ನೀಡುವಂತೆ ತಮ್ಮನ್ನು ಕೋರಲು ನಿರ್ದೇಶಿತವಾ ಗಿದ್ದೇನೆ ಎಂದು ಆದೇಶದಲ್ಲಿ ತಿಳಿಸಲಾಗಿದೆ ಮುಸ್ಲಿಮರಿಗೆ ರಂಜಾನ್ ಮಾಸ ಪವಿತ್ರವಾದದ್ದು.
ರೋಜಾ ಅಥವ ಉಪವಾಸವನ್ನು ಈ ಸಂದರ್ಭ ದಲ್ಲಿ ಆಚರಣೆ ಮಾಡಲಾಗುತ್ತದೆ. ಸೂರ್ಯೋದ ಯಕ್ಕೆ ಮುಂಚೆ ತಿಂಡಿ (ಸೆಹ್ರಿ & ಸೋಹರ್) ಸೇವಿ ಸುತ್ತಾರೆ.ನಂತರ ಸೂರ್ಯಾಸ್ತದ ತನಕ ಉಪವಾಸ ಮಾಡುತ್ತಾರೆ.ಸೂರ್ಯಾಸ್ತದ ನಂತರ ಉಪವಾಸ ಕೊನೆಗೊಳಿಸುತ್ತಾರೆ.
ಇದನ್ನು ಇಫ್ತಾರ್ ಎಂದು ಸಹ ಕರೆಯಲಾಗುತ್ತದೆ. ಈ ವರ್ಷದ ರಂಜಾನ್ ಮಾಸ ಮಾರ್ಚ್ 23 ರಿಂದ ಆರಂಭವಾಗುತ್ತದೆ.ಈ ಅವಧಿಯಲ್ಲಿ ಉರ್ದು ಶಾಲೆಗಳ ಅವಧಿ ಬದಲಾವಣೆ ಮಾಡು ವಂತೆ ಮನವಿ ಸಲ್ಲಿಕೆ ಮಾಡಲಾಗಿತ್ತು.
ರಂಜಾನ್ ಮಾಸದಲ್ಲಿ ಉಪವಾಸವಿದ್ದು ದೇವರ ಪ್ರಾರ್ಥನೆಯಲ್ಲಿ ತೊಡಗಲಾಗತ್ತದೆ.ರಂಜಾನ್ ಕೊನೆಯ ದಿನ ಈದ್-ಉಲ್-ಫಿತರ್ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಇಸ್ಲಾಂ ಧರ್ಮವನ್ನು ಆಚರಣೆ ಮಾಡುವವರು ಸೂರ್ಯೋದಯದ ಬಳಿಕ ಸೂರ್ಯಾಸ್ತದ ತನಕ ಉಪವಾಸ ಇರುತ್ತಾರೆ
ಆನಾರೋಗ್ಯ ಇರುವವರು,ವೃದ್ಧರು, ಗರ್ಭಿಣಿ ಯರು ಉಪವಾಸ ಮಾಡುವುದಿಲ್ಲ.ಉಳಿದವರು ರಂಜಾನ್ ಮಾಸದಲ್ಲಿ ಉಪವಾಸ ಇರುತ್ತಾರೆ. ಇಂತಹ ಸಮಯಲ್ಲಿ ಉರ್ದು ಶಾಲೆಗಳಲ್ಲಿ ಓದುವ ಮಕ್ಕಳಿಗೆ ಅನುಕೂಲವಾಗುವಂತೆ ಶಾಲಾ ಅವಧಿಯನ್ನು ಬದಲಾವಣೆ ಮಾಡ ಲಾಗುತ್ತಿದೆ
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..