ಬೆಂಗಳೂರು –
ರಾಜ್ಯದ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ.ಹೌದು ರಾಜ್ಯ ಸರ್ಕಾರದಿಂದ ಸಿವಿಲ್ ಸೇವೆಗಳ ಲ್ಲಿನ ಹುದ್ದೆಗಳ ಭರ್ತಿಗೆ ಸಂಬಂಧ ಇದ್ದಂತ ರಿಕ್ತ ಸ್ಥಾನ ಆಧಾರಿತ ವರ್ಗೀಕರಣವನ್ನು ರದ್ದು ಪಡಿಸಿದ್ದು ಇದರ ಬದಲಾಗಿ ಹುದ್ದೆ ಆಧಾರಿತ( ಪೋಸ್ಟ್ ಬೇಸ್ಡ್ ) ವರ್ಗೀಕರ ಣಕ್ಕೆ ಅವಕಾಶ ನೀಡಲಾಗಿದೆ.ಅಲ್ಲದೇ ಮುಂಬಡ್ತಿಗೆ ಇದ್ದಂತ ಶೇ.25ರ ಮಿತಿಯನ್ನು ಶೇ.30ಕ್ಕೆ ಹೆಚ್ಚಳ ಮಾಡಿ ಆದೇಶಿಸಿದ್ದು ಈ ಮೂಲಕ ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ.
ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಪಿ.ಹೇಮಲತ ಅಧಿಕೃತ ಜ್ಞಾಪನೆಯಲ್ಲಿ ಮಾಹಿತಿ ನೀಡಿದ್ದು ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳನ್ನು ಭರ್ತಿ ಮಾಡುವಾಗ ರಿಕ್ತ ಸ್ಥಾನ ಆಧಾರಿತ ವರ್ಗೀಕರಣದ ಬದಲಾಗಿ ಹುದ್ದೆ ಆಧಾ ರಿತ ವರ್ಗೀಕರಣ ಮಾಡುವಂತೆ ಸೂಚಿಸಿ ಅಧಿಕೃತವಾಗಿ ಆದೇಶವನ್ನು ಮಾಡಿದ್ದಾರೆ
ರಾಜ್ಯ ಸರ್ಕಾರದ ಈ ಒಂದು ಆದೇಶದಿಂದಾಗಿ ಸರ್ಕಾರಿ ನೌಕರರ ಬಡ್ತಿ ಸಮಸ್ಯೆಗೆ ಇದ್ದಂತ ದೊಡ್ಡ ಸಮಸ್ಯೆಗೆ ಪರಿಹಾರ ಸಿಕ್ಕಂತೆ ಆಗಿದೆ ಇದರಿಂದಾಗಿ ನೌಕರರಿಗೆ ಮುಂಬಡ್ತಿ ಅವಕಾಶಗಳು ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾ ಗುವಂತೆ ಆಗಿದ್ದು ಅನುಕೂಲ ಆಗಲಿದೆ
ಅಂದಾಹಗೇ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಈ ಸಂಬಂಧ ಮನವಿ ಮಾಡಲಾಗಿತ್ತು ಈ ಮನವಿ ಪರಿಶೀಲಿಸಿದಂತ ಸಿಎಂ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳನ್ನು ಭರ್ತಿ ಮಾಡುವಾಗ ರಿಕ್ತ ಸ್ಥಾನ ಆಧಾರಿತ ವರ್ಗೀಕರಣದ ಬದಲಾಗಿ ಹುದ್ದೆ ವರ್ಗೀಕರಣವನ್ನು ಅನುಸರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.ಈ ಸೂಚನೆಯ ಹಿನ್ನಲೆಯಲ್ಲಿ ರಿಕ್ತ ಸ್ಥಆನದ ಹುದ್ದೆಗಳನ್ನು ಪೋಸ್ಟ್ ಬೇಸ್ಡ್ ಹುದ್ದೆಗಳನ್ನಾಗಿ ವರ್ಗೀಕರಿಸಿ ಮುಂಬಡ್ತಿಗೆ ಪರಿಗಣಿಸಲಾಗಿದೆ.
ಈ ಆದೇಶದಿಂದಾಗಿ ರಾಜ್ಯದ ಎಲ್ಲಾ ಇಲಾಖೆಗಳಲ್ಲಿನ ಸರ್ಕಾರಿ ನೌಕರರಿಗೆ ಶೇ.25 ರಿಂದ 30ರವೆರೆಗ ಮುಂಬ ಡ್ತಿಗೆ ಅವಕಾಶಗಳು ಹೆಚ್ಚಾಗಲಿವೆ ಪ್ರತಿ ಇಲಾಖೆಯ ಸಾವಿ ರಾರೂ ನೌಕರರಿಗೆ ಮುಂಬಡ್ತಿ ಅವಕಾಶ ದೊರೆಯುವಂತೆ ಆಗಲಿದೆ.