ಖಾಸಗಿ ನೌಕರರಿಗೆ ಸಿಹಿ ಸುದ್ದಿ ನೀಡಿದ ರಾಜ್ಯ ಸರ್ಕಾರ – ಯಶಸ್ವಿನಿ ಯೋಜನೆ ಯನ್ನು ಖಾಸಗಿ ನೌಕರರಿಗೂ ವಿಸ್ತರಣೆ ಮಾಡಿ ನೋಂದಣಿಗೆ ಅವಕಾಶ ನೀಡಿದ ಸರ್ಕಾರ

Suddi Sante Desk
ಖಾಸಗಿ ನೌಕರರಿಗೆ ಸಿಹಿ ಸುದ್ದಿ ನೀಡಿದ ರಾಜ್ಯ ಸರ್ಕಾರ – ಯಶಸ್ವಿನಿ ಯೋಜನೆ ಯನ್ನು ಖಾಸಗಿ ನೌಕರರಿಗೂ ವಿಸ್ತರಣೆ ಮಾಡಿ ನೋಂದಣಿಗೆ ಅವಕಾಶ ನೀಡಿದ ಸರ್ಕಾರ

ಬೆಂಗಳೂರು –

ರಾಜ್ಯದಲ್ಲಿ ಖಾಸಗಿಯಾಗಿ ಕರ್ತವ್ಯವನ್ನು ಮಾಡುತ್ತಿರುವ ಖಾಸಗಿ ನೌಕರರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ.ಹೌದು ಸಹಕಾರಿ ಕ್ಷೇತ್ರದ ಸದಸ್ಯರಿಗೆ ನಗದುರಹಿತ ಆರೋಗ್ಯ ಚಿಕಿತ್ಸಾ ಸೌಲಭ್ಯ ಕಲ್ಪಿಸುವ ಯಶಸ್ವಿನಿ ಯೋಜನೆ ವ್ಯಾಪ್ತಿಗೆ ಸೇರ್ಪಡೆಗೊಳಿಸಿ ಆದೇಶವನ್ನು ಮಾಡಿ ಅವಕಾಶವನ್ನು ನೀಡಿದೆ.

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವವರ ನೌಕರರನ್ನು ಯಶಸ್ವಿನಿ ಯೋಜನೆಯಿಂದ ಹೊರಗಿಡಲಾಗಿತ್ತು ಈಗ ಮಾರ್ಗಸೂಚಿಯಲ್ಲಿ ಬದಲಾವಣೆ ಮಾಡಲಾಗಿದ್ದು ಮಾಸಿಕ 30 ಸಾವಿರ ರೂ ಅಥವಾ ವಾರ್ಷಿಕ 3.60 ಲಕ್ಷ ರೂಪಾಯಿ ವೇತನ ಪಡೆಯುವ ಖಾಸಗಿ ಕಂಪನಿ ಗಳ ನೌಕರರು ಸಹಕಾರಿ ಸದಸ್ಯರಾಗಿದ್ದರೆ ಯೋಜನೆಗೆ ಸೇರಿಸುವ ಕುರಿತಂತೆ ಅವಕಾಶ ವನ್ನು ನೀಡಿ ಆದೇಶವನ್ನು ನೀಡಿದೆ.

ಇನ್ನೂ ಮಾರ್ಗಸೂಚಿಯನ್ವಯ ಮಾಸಿಕ ರೂ.30,000- ವರೆಗಿನ ಅಥವಾ ವಾರ್ಷಿಕ ರೂ.3,60,000/- ವರೆಗಿನ ವೇತನ ಪಡೆಯುವ ಖಾಸಗಿ ನೌಕರರು ಯಶಸ್ವಿನಿ ಯೋಜನೆಯಡಿ ನೋಂದಾಯಿಸಿಕೊಳ್ಳಬಹುದು.

ಅಲ್ಲದೇ ಯಶಸ್ವಿನಿ ಕಾರ್ಡ್ ಮಾಡಿಸುವ ಸಹಕಾರ ಸಂಘದ ಸಿಬ್ಬಂದಿಗಳಿಗೆ ಪ್ರೋತ್ಸಾಹ ಧನ ರೂ.20/- ನೀಡಲಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ಸಹಕಾರ ಇಲಾಖೆಯ ಸಹಕಾರ ಸಿಂಧು ವೆಬ್ ಸೈಟ್ https://sahakarasindhu.karnataka.gov.in ಕಚೇರಿ ಸಂಪರ್ಕಿಸಬಹುದು ಇದರೊಂ ದಿಗೆ ರಾಜ್ಯದಲ್ಲಿ ಖಾಸಗಿಯಾಗಿ ಕೆಲಸವನ್ನು ಮಾಡುತ್ತಿ ರುವ ನೌಕರರಿಗೂ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.