ರಾಜ್ಯದ ಪದವೀಧರೇತರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಿಗೆ ಸಿಹಿಸುದ್ದಿ ನೀಡಿದ ರಾಜ್ಯ ಸರ್ಕಾರ ಹೊರಬಿತ್ತು ಅಧಿಕೃತವಾದ ಆದೇಶ

Suddi Sante Desk

ಬೆಂಗಳೂರು –

ಹೌದು ಇಂದು ರಾಜ್ಯದ ಪದವೀಧರೇತರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರು ಖುಷಿ ಪಡುವಂತಹ ಹೆಮ್ಮೆ ಪಡುವಂತಹ ಸುದಿನ ಎಂದರೆ ತಪ್ಪಾಗಲಾರದು. ಹೌದು ರಾಜ್ಯ ಸರ್ಕಾರ ಮಹತ್ವದವಾದ ಆದೇಶವೊಂದನ್ನು ಮಾಡಿದೆ.ಈವರೆಗೆ ಶಿಕ್ಷಕ ಸಂಯೋಜಕ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಅವಕಾಶವಿರಲಿಲ್ಲ ಸಧ್ಯ ಈ ಪದವೀಧೇತರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ರಿಗೂ ಸಾಕಷ್ಟು ಪ್ರಮಾಣದಲ್ಲಿ ಅನುಕೂಲವಾಗಿದೆ.

ಹೀಗಾಗಿ ಇನ್ನೂ ಈ ಆದೇಶ ಹೊರ ಬೀಳಲು ಸಹಾಯ ಮಾಡಿದ ಸರ್ವರಿಗೂ ಅದರಲ್ಲೂ ವಿಶೇಷವಾಗಿ ಷಡಾಕ್ಷರಿ ಅವರಿಂದ ಹಿಡಿದು ಎಲ್ಲರಿಗೂ ರಾಜ್ಯದ ಸಮಸ್ತ ಪದವೀ ಧೆತರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಶಿಕ್ಷಕರ ಸಂಘದವರು ಧನ್ಯವಾದಗಳನ್ನು ತಿಳಿಸಿದ್ದಾರೆ.ಸರ್ವರೂ ನಮ್ಮೊಂದಿಗಿದ್ದು ಹೋರಾಟದ ಪ್ರತಿ ಹೆಜ್ಞೆಯಲ್ಲಿಯೂ ಸಹ ಕೈ ಜೋಡಿಸಿ ಈ ಆದೇಶ ಹೊರಬೀಳಲು ಸಾಧ್ಯವಾಗಿದ್ದು ಈ ಎಲ್ಲಾ ಕೆಲಸ ಕಾರ್ಯಗಳನ್ನು ಹಗಲಿರುಳು ಎನ್ನದೆ ಬಿಡುವು ಇಲ್ಲದೆ ರೀತಿಯಲ್ಲಿ ಧಣಿವು ಅರಿಯದ ಕಾಯಕ ವನ್ನು ಮಾಡುತ್ತಾ ಸದಾ ಚಟುವಟಿಕೆಯಿಂದ ಓಡಾಡಿ ಈ ಆದೇಶವನ್ನು ಹೊರ ಬೀಳಲು ಶ್ರಮವಹಿಸಿದ ಸರ್ವರಿಗೂ ಧನ್ಯವಾದಗಳೆಂದು ಹೇಳಿದ್ದಾರೆ. ಕೆ.ಕೃಷ್ಣಪ್ಪನವರು.ರಾಜ್ಯ ಅಧ್ಯಕ್ಷರು.ಕ.ರಾ.ಸ.ಹಿರಿಯ ಹಾಗು ಪದವೀಧರೇತರ ಪ್ರಾ.ಶಾಲಾ ಮುಖ್ಯೋಪಾಧ್ಯಾಯರ ಸಂಘ.ಬೆಂಗಳೂರು ಆದ ಶ್ರೀಯುತರ ಪರವಾಗಿ.ಸಿ.ಜಯಪ್ಪ ಹೆಬ್ಬಳಗೆರೆ.ರಾಜ್ಯ ಸಂಘಟನಾ ಕಾರ್ಯದರ್ಶಿಗಳು ಹಾಗು ಭದ್ರಾವತಿ ತಾಲ್ಲೂಕು ಅಧ್ಯಕ್ಷರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.