ಶಿಕ್ಷಕರ ಕಾಲಿಗೆ ಬಿದ್ದು ತಪ್ಪಾಯಿತು ಎಂದು ಕ್ಷಮೆ ಕೇಳಿದ ವಿದ್ಯಾರ್ಥಿಗಳು, ಗ್ರಾಮಸ್ಥರು ಗುರುವಿಗೆ ಕೀಟಲೆ ಮಾಡಿದ ವಿದ್ಯಾರ್ಥಿಗಳಿಗೆ ಬುದ್ದಿ ಕಲಿಸಿದ ಗ್ರಾಮಸ್ಥರು…..

Suddi Sante Desk

ದಾವಣಗೆರೆ –

ಶಾಲೆಯಲ್ಲಿ ಪಾಠ ಮಾಡುವ ಶಿಕ್ಷಕರೊಬ್ಬರಿಗೆ ಕೀಟಲೆ ಮಾಡಿ ನಿಂದಿಸಿದ ದಾವಣಗೆರೆಯಲ್ಲಿನ ಪ್ರಕರಣ ಕುರಿತಂತೆ ವಿದ್ಯಾರ್ಥಿಗಳು ಗುರುವಿಗೆ ಕ್ಷಮೆ ಕೇಳಿದ್ದಾರೆ.ಹೌದು ಜಿಲ್ಲೆಯ ಹೊನ್ನಾಳಿಯ ಚನ್ನಗಿರಿಯ ನಲ್ಲೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಹಿರಿಯ ಶಿಕ್ಷಕರೊಬ್ಬರು ವರ್ಗದಲ್ಲಿ ಪಾಠವನ್ನು ಮಾಡುವಾಗ ಕೆಲ ಕಿಡಗೇಡಿ ವಿದ್ಯಾರ್ಥಿಗಳು ಗುರು ಎನ್ನದೇ ಅವಮಾನಿಸಿ ನಿಂದಿಸಿ ಹಲ್ಲೆಯನ್ನು ಮಾಡಿದ್ದರು

ಈ ಒಂದು ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿತ್ತು ಈ ಕುರಿತಂತೆ ಸುದ್ದಿ ಸಂತೆ ಕೂಡಾ ವರದಿ ಯನ್ನು ಪ್ರಸಾರ ಮಾಡಿತ್ತು.ವರದಿ ಬಿತ್ತರವಾಗುತ್ತಿದ್ದಂತೆ ಈ ಕುರಿತಂತೆ ರಾಜ್ಯಾದ್ಯಂತ ಶಿಕ್ಷಕರು ಅಸಮಾಧಾನವನ್ನು ವ್ಯಕ್ತಪಡಿಸಿದ್ದರು ಅಲ್ಲದೇ ಈ ಕೂಡಲೇ ಪುಂಡ ವಿದ್ಯಾರ್ಥಿ ಗಳ ಮೇಲೆ ಸೂಕ್ತವಾಗ ಕ್ರಮವನ್ನು ಕೈಗೊಳ್ಳುವಂತೆ ಒತ್ತಾಯವನ್ನು ಮಾಡಿದ್ದರು

ಇದೇಲ್ಲದರ ನಡುವ ಗ್ರಾಮದ ಗೌರವ ಹಾಳಾಗುತ್ತಿದ್ದಂತೆ ಘಟನೆಯಿಂದ ಎಚ್ಚೇತ್ತುಕೊಂಡ ಚನ್ನಗಿರಿ ಗ್ರಾಮಸ್ಥರು ಕೂಡಲೇ ಶಾಲೆಯಲ್ಲಿ ಪುಂಡ ವಿದ್ಯಾರ್ಥಿಗಳನ್ನು ಕರೆಯಿಸಿ ಶಿಕ್ಷಕ ಪ್ರಕಾಶ್ ಅವರಿಗೆ ಕಾಲಿಗೆ ಬಿದ್ದು ಕ್ಷಮೆ ಕೇಳಿಸಿದ್ದಾರೆ.

ಗುರುಗಳನ್ನೇ ನಿಂದಿಸಿ ಅವಮಾನಿಸಿದ್ದ ಪ್ರಕರಣವನ್ನು ಈ ಮೂಲಕ ಸುಖಾಂತ್ಯ ಕಾಣಿಸಿದ್ದಾರೆ.ಶಾಲೆಯಲ್ಲಿ ಗ್ರಾಮ ಸ್ಥರು ಮತ್ತು ಯುವಕರು ಸೇರಿಕೊಂಡು ಪುಂಡ ವಿದ್ಯಾರ್ಥಿ ಗಳಿಗೆ ಹಿಗ್ಗಾ ಮುಗ್ಗಾ ಮಾತಿನ ಪೆಟ್ಟು ಹಾಕಿದ್ದು ಇದರಿಂ ದಾಗಿ ಕೂಡಲೇ ಶಿಕ್ಷಕ ಪ್ರಕಾಶ್ ಅವರಿಗೆ ಕಾಲಿಬಿದ್ದು ಕ್ಷಮೆ ಕೇಳಿದ್ದಾರೆ ವಿದ್ಯಾರ್ಥಿಗಳು.ನಲ್ಲೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಈ ಒಂದು ಪ್ರಕರಣ ನಡೆದಿತ್ತು

ಇನ್ನೂ ವಿದ್ಯಾರ್ಥಿಗಳೊಂದಿಗೆ ಗ್ರಾಮಸ್ಥರು ಕೂಡಾ ಕ್ಷಮೆ ಯನ್ನು ಕೇಳಿದ್ದಾರೆ.ಇನ್ನೂ ಎಬಿವಿಪಿ ಕಾರ್ಯಕರ್ತರು ಇದೇ ತಿಂಗಳು 3 ರಂದು ತರಗತಿ ಕೊಠಡಿಯಲ್ಲೇ ಶಿಕ್ಷಕ ಪ್ರಕಾಶ್ ರಿಗೆ ಕೀಟಲೆ ಮಾಡಿದ್ದ ಕೆಲ ವಿದ್ಯಾರ್ಥಿಗಳು ಗುರುಗಳಿಂದ ನಿಂದಿಸಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು ಆದರೂ ಶಿಕ್ಷಕರು ಸಹನೆ ತಾಳ್ಮೆಯಿಂದ ವಿದ್ಯಾರ್ಥಿಗಳ ಭವಿಷ್ಯ ಹಿನ್ನೆಲೆ ಯಾರಿಗೂ ವಿಷಯ ತಿಳಿಸಿರಿಲಿಲ್ಲ ವಿಡಿಯೋ ನೋಡಿದ ಜನರು ಘಟನೆ ಖಂಡಿಸಿದ್ದರು

ಈ ಸಂಬಂಧ ಚನ್ನಗಿರಿ ಠಾಣೆಯಲ್ಲಿ ಪ್ರಕರಣ ಕೂಡ ದಾಖ ಲಾಗಿತ್ತು ವಿದ್ಯಾರ್ಥಿಗಳನ್ನ ಶಾಲೆಯಿಂದ ಅಮಾನುತು ಮಾಡಬೇಕೆಂದು ಕೆಲವರು ಆಗ್ರಹಿಸಿದ್ದರು ಇದೇಲ್ಲದರ ನಡುವೆ ಈಗ ಪುಂಡ ವಿದ್ಯಾರ್ಥಿಗಳೇ ತಪ್ಪಾಯಿತು ಗುರುಗಳೇ ಎಂದು ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.