ವರ್ಗಾವಣೆಯಲ್ಲಿ ಸಿಗದ ನ್ಯಾಯ ಸಂಘಟನಾ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದ ಶಿಕ್ಷಕ ಸಾಲು ಸಾಲಾಗಿ ರಾಜೀನಾಮೆ ನೀಡುತ್ತಿ ದ್ದರು ಮಾತನಾಡದ ಸಂಘಟನೆಯ ನಾಯಕರು…..

Suddi Sante Desk

ಬಾಗೇಪಲ್ಲಿ –

ಶಿಕ್ಷಕರ ಸ್ನೇಹಿಯಾಗದ ವರ್ಗಾವಣೆಯ ಪ್ರಕ್ರಿಯೆಯಿಂದ ಬೇಸತ್ತ ಮತ್ತೊರ್ವ ಶಿಕ್ಷಕರು ತಮ್ಮ ಸಂಘಟನಾ ಕಾರ್ಯ ದರ್ಶಿ ಹುದ್ದೆಗೆ ರಾಜೀನಾಮೆಯನ್ನು ನೀಡಿದ್ದಾರೆ.ಹೌದು ವರ್ಗಾವಣೆಯಲ್ಲಿ ಸರಿಯಾಗಿ ಸಿಗದ ನ್ಯಾಯ ಅನ್ಯಾಯ ದಿಂದ ಬೇಸರಗೊಂಡ ಮತ್ತೊರ್ವ ಶಿಕ್ಷಕರು ಹಾಗೇ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ಯನ್ನು ನೀಡಿದ್ದಾರೆ.

ಹೌದು ಈಗಾಗಲೇ ಹಲವಾರು ಶಿಕ್ಷಕ ರು ವರ್ಗಾವಣೆಯ ವಿರುದ್ದ ಅಸಮಾಧಾನಗೊಂಡು ಸಂಘಟನೆಯ ಸಂಘದ ಸದಸ್ಯತ್ವಕ್ಕೆ ರಾಜೀನಾಮೆಯನ್ನು ನೀಡಿದ್ದು ಇದರ ಬೆನ್ನಲ್ಲೇ ಚಿಕ್ಕಬಳ್ಳಾಪೂರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ಮತ್ತೊರ್ವ ಶಿಕ್ಷಕರಾದ ಕದೀರಪ್ಪ ಅವರು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹುದ್ದೆಗೆ ಮತ್ತು ಸದಸ್ಯತ್ವಕ್ಕೆ ರಾಜೀನಾಮೆಯನ್ನು ನೀಡಿ ದ್ದಾರೆ.

ಈ ಕುರಿತಂತೆ ಸಂಘದ ಬಾಗೇಪಲ್ಲಿಯ ತಾಲ್ಲೂಕು ಅಧ್ಯಕ್ಷ ರಿಗೆ ಪತ್ರವನ್ನು ಬರೆದಿರುವ ಇವರು ವರ್ಗಾವಣೆಯ ವಿಚಾರದಲ್ಲಿ ತಮಗೆ ಆಗಿರುವ ನೋವಿನ ಕುರಿತಂತೆ ಸುಧೀರ್ಘವಾಗಿ ಉಲ್ಲೇಖವನ್ನು ಮಾಡಿ ಶಿಕ್ಷಕ ಸ್ನೇಹಿ ಅಲ್ಲದ ಈ ಒಂದು ವರ್ಗಾವಣೆಯಿಂದ ಬೇಸತ್ತು ಹಾಗೇ ಸಂಘದ ಸದಸ್ಯರ ಮೃದು ಧೋರಣೆಯಿಂದ ಬೇಸತ್ತು ಹುದ್ದೇಗೆ ಮತ್ತು ಸದಸ್ಯತ್ವಕ್ಕೆ ಈ ಕೂಡಲೇ ರಾಜೀನಾಮೆ ಯನ್ನು ನೀಡೊದಾಗಿ ಹೇಳಿದರು.ಇದರೊಂದಿಗೆ ಸಂಘದ ನಾಯಕರ ವಿರುದ್ದವೇ ಅದೇ ಸಂಘದ ತಾಲ್ಲೂಕಿನ ಸದಸ್ಯ ರು ನಾಯಕರು ಸಿಡಿದೆದ್ದಿದ್ದಾರೆ.ಇನ್ನೂ ಸಾಲು ಸಾಲಾಗಿ ಸಂಘಟನೆಗೆ ರಾಜೀನಾಮೆಯನ್ನು ನೀಡುತ್ತಿದ್ದರೆ ಇತ್ತ ಸಂಘಟನೆಯ ನಾಯಕರು ಮಾತ್ರ ಮೌನವಾಗಿದ್ದಾರೆ ಈ ಕುರಿತಂತೆ ಮಾತನಾಡುತ್ತಿಲ್ಲ ಇದೊಂದು ದುರಂತದ ವಿಚಾರವಾಗಿದೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.