ರಾಜೀನಾಮೆ ಹಿಂದೆ ತಗೆದುಕೊಳ್ಳಿ ಶಿಕ್ಷಕಿ‌ಯ ಬೆನ್ನಿಗೆ ನಿಂತ ಶಿಕ್ಷಕ ವೃಂದ ಯಾವುದೇ ಕಾರಣಕ್ಕೂ ಹೆದರ ಬೇಡಿ ಎಂದರು ಶಿಕ್ಷಕ ಬಂಧುಗಳು.

Suddi Sante Desk

ಬೆಂಗಳೂರು –

ವರ್ಗಾವಣೆಯಲಿ ಅವಕಾಶ ಸಿಗದೇ ಶಿಕ್ಷಕಿ ಯ ವೃತ್ತಿಗೆ ರಾಜೀನಾಮೆ ನೀಡಿರುವ ಶಿಕ್ಷಕಿ ಅಕ್ಷತಾ ಇವರ ಬೆನ್ನಿಗೆ ನಾಡಿನ ಶಿಕ್ಷಕ ಬಂಧುಗಳು ಬೆನ್ನಿಗೆ ನಿಂತಿದ್ದಾರೆ.ಹೌದು ನಿನ್ನೆ ಯಷ್ಟೇ ರಾಯಚೂರು ಜಿಲ್ಲೆಯ ಗಾಣಪೂರ ಶಾಲೆಯ ಅಕ್ಷತಾ ಬಿ ಅವರು ಇಂಥದೊಂದು ನಿರ್ಧಾರ ಕೈಗೊಂಡಿದ್ದು ಈ ಕುರಿತು ಸುದ್ದಿ ಸಂತೆ ಕೂಡಾ ವರದಿಯನ್ನು ಮಾಡಿದ್ದು ಇದರ ಬೆನ್ನಲ್ಲೇ ಈಗ ನಾಡಿನ ಶಿಕ್ಷಕ ಬಂಧುಗಳು ನೋವಿನ ಧ್ವನಿಗೆ ಧ್ವನಿಯಾಗಿ ನಿಂತು ಕೊಂಡಿದ್ದಾರೆ

ಹೌದು ಶ್ರೀಮತಿ ಸೋದರಿಯಾದ ಅಕ್ಷತಾ ಬಿ ಇವರು ರಾಜೀನಾಮೆಯನ್ನು ದಯವಿಟ್ಟು ಹಿಂದಕ್ಕೆ ತೆಗೆದುಕೊಳ್ಳ ಬೇಕು. ನಿಮ್ಮ ಸಮಸ್ಯೆಗೆ ಇಡೀ ಕರ್ನಾಟಕದ ನಿಮ್ಮ ಸೋದರರು ಶಿಕ್ಷಕ ವೃಂದವೇ ನಿಮ್ಮ ಜೊತೆಯಲ್ಲಿ ಇರುತ್ತವೆ ಯಾವುದೇ ಕಾರಣಕ್ಕೂ ಹೆದರದೆ ನಿಮ್ಮ ರಾಜೀನಾಮೆ ಯನ್ನು ಹಿಂದಕ್ಕೆ ತೆಗೆದುಕೊಳ್ಳಿ ಆದಷ್ಟು ಸರ್ಕಾರ ಇವರ ಸಮಸ್ಯೆಯನ್ನು ಅರಿತುಕೊಂಡು ಸ್ಪಂದನೆ ಮಾಡಬೇಕೆಂದು ನಾವು ಮನವಿ ಮಾಡುತ್ತೇವೆ. ಸರ್ಕಾರಕ್ಕೆ ಒತ್ತಡ ಮಾಡು ತ್ತೇವೆ. ಜೈ ಕರ್ನಾಟಕ ಮಾತೆ✊?✊?✊?✊? ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಬರೆದು ಪೊಸ್ಟ್ ಮಾಡಿ ಆತ್ಮವಿಶ್ವಾಸದ ಮಾತುಗಳನ್ನು ಹೇಳಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.