ರಜೆಯಲ್ಲೂ ಶಿಕ್ಷಕರಿಗೆ ಹೊಸದೊಂದು ಕರ್ತವ್ಯ ನೀಡಿದ ಇಲಾಖೆ – ಕಾಯಕವೇ ಕೈಲಾಸ ಎಂದುಕೊಂಡು ಕೆಲಸ ಮಾಡುತ್ತಿರುವ ನಾಡಿನ ಶಿಕ್ಷಕರು…..

Suddi Sante Desk
ರಜೆಯಲ್ಲೂ ಶಿಕ್ಷಕರಿಗೆ ಹೊಸದೊಂದು ಕರ್ತವ್ಯ ನೀಡಿದ ಇಲಾಖೆ – ಕಾಯಕವೇ ಕೈಲಾಸ ಎಂದುಕೊಂಡು ಕೆಲಸ ಮಾಡುತ್ತಿರುವ ನಾಡಿನ ಶಿಕ್ಷಕರು…..

ಬೆಂಗಳೂರು

ಹೌದು ಸಧ್ಯ ಶಾಲೆಗಳಿಗೆ ಬೇಸಿಗೆ ಕಾಲದ ರಜೆ ಇದೆ ಆದರೂ ಕೂಡಾ ರಜೆಯ ಮೂಡ್ ನಲ್ಲಿದ್ದ ರಾಜ್ಯದ ಶಿಕ್ಷಕರಿಗೆ ಇಲಾಖೆ ಮಹತ್ವದ ಜವಾಬ್ದಾರಿ ಕೆಲಸವನ್ನು ನೀಡಿದೆ ಹೌದು ಮುಂದಿನ ಶೈಕ್ಷಣಿಕ ವರ್ಷದ ಶಾಲಾ ಆರಂಭಿಕ ಕುರಿತು ಈಗಾಗಲೇ ಇಲಾಖೆ ಪ್ಲಾನ್ ಮಾಡಿಕೊಂಡಿದ್ದು ಹೀಗಾಗಿ ಮುಂದೆ ಏನು ಮಾಡಬೇಕು ಎಂಬ ಕುರಿತು ಕೆಲಸವನ್ನು ಆರಂಭ ಮಾಡಿಸಿದೆ.

ಶಿಕ್ಷಕರಿಂದ ಮನೆ ಮನೆಗೆ ಭೇಟಿ ನೀಡಿ ಅವರನ್ನು
ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕರೆತರುವ ಸಲುವಾಗಿ ಶಿಕ್ಷಕರೇ ಮನೆ ಮನೆ ಪ್ರಚಾರ ಕಾರ್ಯಕ್ಕೆ ಮುಂದಾಗಿದ್ದಾರೆ.ದೂರವಾಣಿ ಕರೆ ಅಥವಾ ಮನೆಗಳಿಗೆ ಭೇಟಿ ನೀಡಿ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಿ ಎಂದು ಹೇಳುತ್ತಿದ್ದಾರೆ.

ಮಕ್ಕಳನ್ನು ಶಾಲೆಗೆ ಆಕರ್ಷಿಸಲು ಶಿಕ್ಷಣ ಇಲಾಖೆ ಉಚಿತವಾಗಿ ಸಮವಸ್ತ್ರ,ಪಠ್ಯಪುಸ್ತಕ ಹಾಗೂ ಮಧ್ಯಾಹ್ನದ ಬಿಸಿಯೂಟ ನೀಡುತ್ತಿದೆ.ಹೀಗಾಗಿ, ಗ್ರಾಮೀಣ ಭಾಗದ ಶಾಲೆಗಳಲ್ಲಿನ ಹಾಜರಾತಿ ಹೆಚ್ಚಿಸುವ ನಿಟ್ಟಿನಲ್ಲಿ ಇಲಾಖೆ ಈ ಒಂದು ಹೊಸ ಪ್ಲಾನ್ ನೊಂದಿಗೆ ಕಾರ್ಯವನ್ನು ಆರಂಭ ಮಾಡಿದೆ.

ಇದೇಲ್ಲಾ ಸರಿಯಾದ ವಿಚಾರ ನಮ್ಮ ಶಿಕ್ಷಕರಿಗೆ ಏನೇ ಯಾವುದೇ ಕೆಲಸ ಕಾರ್ಯವನ್ನು ನೀಡಿದರು ಮಾಡತಾರೆ ಆದರೆ ವರ್ಗಾವಣೆ ವಿಚಾರದಲ್ಲಿ ಇವರಿಗೆ ಇಲಾಖೆ ಅಧಿಕಾರಿಗಳು ಯಾಕೆ ಹೀಗೆ ಮಾಡತಾರೆ ಈ ಒಂದು ವಿಚಾರ ಕುರಿತು ಶಿಕ್ಷಕರು ಏನೆಲ್ಲಾ ಮಾಡಿದರು ಕೂಡಾ ಯಾರು ಸ್ಪಂದಿಸುತ್ತಿಲ್ಲ ಹೀಗಾಗಿ ರಾಜ್ಯದ ಸಮಸ್ತ ಶಿಕ್ಷಕರು ಪರದಾಡುತ್ತಿದ್ದು ಇನ್ನಾದರೂ ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾಗಲಿದ್ದು ವರ್ಗಾವಣೆ ವಿಚಾರದಲ್ಲಿ ಶಾಶ್ವತ ಪರಿಹಾರ ಸಿಗಲಿ ಎಂಬೊಂದು ನಮ್ಮ ಆಶಯವಾಗಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

 

 

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.