This is the title of the web page
This is the title of the web page

Live Stream

[ytplayer id=’1198′]

May 2025
T F S S M T W
1234567
891011121314
15161718192021
22232425262728
293031  

| Latest Version 8.0.1 |

State News

ಶಿಕ್ಷಕರ ದಿನಾಚರಣೆ ದಿನದಂದೇ ಬೀದಿಗಿಳಿದ ಶಿಕ್ಷಕರು – ಮೌನವಾಗಿ ಪ್ರತಿಭಟನೆ ಬೇಡಿಕೆಗಳ ಈಡೇರಿ ಕೆಗೆ ಮನವಿ ಸಲ್ಲಿಕೆ…..

WhatsApp Group Join Now
Telegram Group Join Now

ಗಂಗಾವತಿ –

ಎಲ್ಲೇಡೆ ಇಂದು ಸಡಗರ ಸಂಭ್ರಮದಿಂದ ನಾಡಿನ ಶಿಕ್ಷಕರೆಲ್ಲರೂ ತಮ್ಮ ಶಿಕ್ಷಕರ ದಿನಾಚರಣೆಯನ್ನು ಆಚರಣೆ ಮಾಡಿದರು.ಈ ಒಂದು ದಿನಾಚರಣೆಯ ನಡುವೆ ರಾಜ್ಯದ ಹಲವೆಡೆ ಶಿಕ್ಷಕರು ದಿನಾಚರಣೆ ಮಾಡಿ ತಮ್ಮ ಕೆಲವೊಂದಿಷ್ಟು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮೌನವಾಗಿ ಪ್ರತಿಭ ಟನೆ ಮಾಡಿ ಮನವಿಯನ್ನು ಸಲ್ಲಿಸಿದರು.

ಹೌದು ರಾಜ್ಯದ ಹಲವೆಡೆ ಶಿಕ್ಷಕರು ಬೀದಿಗಿಳಿದು ಮೌನವಾದ ಪ್ರತಿಭಟನೆಯನ್ನು ಮಾಡಿದರು. ಕೆಲ ವೊಂದಿಷ್ಟು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಶಿಕ್ಷಕರು ದಿನಾಚರಣೆಯನ್ನು ಮಾಡಿ ಇದರ ನಡುವೆ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಮನವಿ ಸಲ್ಲಿಸಿದರು.

ಮೌನವಾಗಿ ಪ್ರತಿಭಟನೆ ಮಾಡಿದ ಶಿಕ್ಷಕರು ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮಕ್ಕೆ ಆಗಮಿಸಿದ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ಸೇರಿದಂತೆ ಹಲವರಿಗೆ ಮನವಿಯನ್ನು ಸಲ್ಲಿಸಿದರು.

ಜೊತೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಕಳಿಸಿದರು.ಇದೇ ವೇಳೆ ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವರಿಗೆ ಸೇವಾ ಅವಧಿಯಲ್ಲಿ ಒಂದು ಬಾರಿ ಶಿಕ್ಷಕರು ಬಯಸಿದ ಜಿಲ್ಲೆಗೆ ಒಂದು ಬಾರಿ ವರ್ಗಾವಣೆ ನೀಡಬೇಕೆಂದು ಮೌನವಾಗಿ ಮನವಿ ಸಲ್ಲಿಸಿ ಕೂಡಲೇ ಬೇಡಿಕೆ ಈಡೇರಿಸುವಂತೆ ಒತ್ತಾಯವನ್ನು ಮಾಡಿದರು.

ಈ ಒಂದು ಸಮಯದಲ್ಲಿ ಮುತ್ತು ಕಳಸಗೊಂಡ, ಶರಣೇಗೌಡ ಪೊಲೀಸ್ ಪಾಟೀಲ್,ವಿಜಯಾ ರಾಂಪೂರ,ರುದ್ರಗೌಡ ಪಾಟೀಲ,ಇಬ್ರಾಹಿಂ ನವಲಿ,ಶಬನಮ್ ಬೇಗಂ ಸೇರಿದಂತೆ ವರ್ಗಾವಣೆ ವಂಚಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು ಇವರು ಉಪಸ್ಥಿತರಿದ್ದರು.


Google News

 

 

WhatsApp Group Join Now
Telegram Group Join Now
Suddi Sante Desk