ಕಾರವಾರ –
ಈಜಲು ತೆರಳಿದ್ದ ಮೂವರು ಪ್ರವಾಸಿಗರು ನೀರಿನಲ್ಲಿ ಮುಳುಗಿ ಸಾವಿಗೀಡಾದ ಘಟನೆ ಕಾರವಾರದ ಗೋಕರ್ಣ ದಲ್ಲಿ ನಡೆದಿದೆ.
ಗೋಕರ್ಣದ ಮುಖ್ಯ ಕಡಲತೀರದಲ್ಲಿ ಈ ಒಂದು ಘಟನೆ ನಡೆದಿದೆ.ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಗೋಕರ್ಣದಲ್ಲಿ ಈ ಒಂದು ಅವಘಡ ನಡೆದಿದೆ.
ಸುಮ(21), ತಿಪ್ಪೇಶ(20) ಹಾಗೂ ರವಿ(35) ಮೃತರರಾಗಿದ್ದಾರೆ.ಬೆಂಗಳೂರಿನ ಹೆಬ್ಬಗೋಡಿಯ ತಿರುಪಾಲ್ಯ ಮೂಲದವರಾಗಿದ್ದಾರೆ.16 ಜನರು ದೇವರ ದರ್ಶನಕ್ಕೆಂದು ಗೋಕರ್ಣಕ್ಕೆ ಆಗಮಿಸಿದ್ದರು
ದರ್ಶನದ ನಂತರ ಕಡಲತೀರದಲ್ಲಿ ಈಜಲು ತೆರಳಿದಾಗ ಈ ಒಂದು ಅವಘಡ ನಡೆದಿದೆ.ಇನ್ನೂ ಮುಳುಗುತ್ತಿದ್ದ ಇಬ್ಬರನ್ನು ರಕ್ಷಣೆ ಮಾಡಿದ್ದಾರೆ ಪ್ರವಾಸಿ ಬೋಟ್ ಸಿಬ್ಬಂದಿಗಳು.
ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಪ್ರಕರಣ ನಡೆದಿದೆ.