ಮೂವರು ಶಿಕ್ಷಕಿಯರು ಅಮಾನತು ರಾಜ್ಯದಲ್ಲಿ ಶಿಕ್ಷಕರ ಮೇಲೆ ಮುಂದುವರೆದ ದೌರ್ಜನ್ಯ – ಒತ್ತಡದ ನಡುವೆ ಶಿಕ್ಷಕರ ಸಮುದಾಯ…..

Suddi Sante Desk
ಮೂವರು ಶಿಕ್ಷಕಿಯರು ಅಮಾನತು ರಾಜ್ಯದಲ್ಲಿ ಶಿಕ್ಷಕರ ಮೇಲೆ ಮುಂದುವರೆದ ದೌರ್ಜನ್ಯ – ಒತ್ತಡದ ನಡುವೆ ಶಿಕ್ಷಕರ ಸಮುದಾಯ…..

ಉಡುಪಿ  –

ಜಿಲ್ಲೆಯಲ್ಲಿ ನಡೆಯುತ್ತಿರುವ ಸಾಮಾಜಿಕ , ಶೈಕ್ಷಣಿಕ ಸಮೀಕ್ಷೆಗೆ ನಿಯೋಜನೆಗೊಂಡಿರುವ ಮೂವರು ಶಿಕ್ಷಕಿ ಯರು ಸಮೀಕ್ಷಾ ಕಾರ್ಯ ನಡೆಸದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮೂವರನ್ನು ಅಮಾನತು ಮಾಡಿದ ಘಟನೆ ಉಡುಪಿ ಯಲ್ಲಿ ನಡೆದಿದೆ ಒಳಕಾಡು ಸ . ಪ್ರೌ . ಶಾಲೆಯ ಶಿಕ್ಷಕಿಯರಾದ ಸುರೇಖಾ , ರತ್ನಾ ಹಾಗೂ ಉದ್ಯಾವರ ಸ . ಪ . ಪೂ . ಕಾಲೇಜು ಸಹ ಶಿಕ್ಷಕಿ ಪ್ರಭಾ ಬಿ . ಅವರೇ ಅಮಾನತು ಗೊಂಡಿರುವ ಶಿಕ್ಷಕಿಯರಾಗಿದ್ದಾರೆ

ನೇಮಕಾತಿ ಆದೇಶವನ್ನು ಸ್ವೀಕರಿಸಿರುವುದಿಲ್ಲ ಮತ್ತು ದೂರವಾಣಿ ಮೂಲಕ ಸಂಪರ್ಕಿಸಿದರೂ ಆದೇಶ ಪ್ರತಿಯನ್ನು ಸ್ವೀಕರಿಸಲು ನಿರಾಕರಿಸಿದ್ದರ ಹಿನ್ನೆಲೆಯಲ್ಲಿ ಅಮಾನತು ಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟನೆ ತಿಳಿಸಿದೆ .

ಸುದ್ದಿ ಸಂತೆ ನ್ಯೂಸ್ ಉಡುಪಿ……

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.