ಬಾವಿಗೆ ಬಿದ್ದ ಶ್ವಾನ ರಕ್ಷಣೆ – ಮಾನವೀಯತೆ ಮೆರೆದ ಗೋಜನೂರು ಗ್ರಾಮಸ್ಥರು

Suddi Sante Desk

ಗದಗ –

ಆಕಸ್ಮಿಕವಾಗಿ ಶ್ವಾನವೊಂದು ಬಾವಿಗೆ ಬಿದ್ದಿರುವ ಘಟನೆ ಗದಗ ನಲ್ಲಿ ನಡೆದಿದೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೊಜನೂರ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ.ಗ್ರಾಮದಲ್ಲಿನ ಬಾವಿಯೊಂದಕ್ಕೆ ಶ್ವಾನ ಬಿದ್ದಿದೆ. ಬಿದ್ದ ಕೂಡಲೇ ಮರಳಿ ಬರಲಾರದೇ ಸಾವು- ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ವಿಚಾರವನ್ನು ಗೋಜನೂರ ಗ್ರಾಮದ ಯುವಕರು ಬಾವಿಯತ್ತ ಆಗಮಿಸಿ ಶ್ವಾನವನ್ನು ರಕ್ಷಣೆ ಮಾಡಿದರು.

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೊಜನೂರ ಗ್ರಾಮದಲ್ಲಿ ಇಂಥದೊಂದು ಘಟನೆ ನಡೆದಿದೆ . ಬಾವಿಯತ್ತ ಹೋಗಿದ್ದ ಶ್ವಾನ ನಂತರ ಆಕಸ್ಮಿಕವಾಗಿ ಬಾಯಿಗೆ ಬಿದ್ದಿದ್ದ ಶ್ವಾನ.ಬಾವಿಯಲ್ಲಿ ಸಾವು- ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಶ್ವಾನವನ್ನು ಹಗ್ಗದ ಸಹಾಯದಿಂದ ಹೊರಗಡೆ ತೆಗೆದಿದ್ದಾರೆ ಯುವಕರು. ಒಂದು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಶ್ವಾನದ ರಕ್ಷಣೆ ಮಾಡಿ ಮಾನವೀಯತೆಯನ್ನು ಮೆರೆದಿದ್ದಾರೆ.ಹಗ್ಗಕ್ಕೆ ಒಂದು ಬುಟ್ಟಿಯನ್ನು ಕಟ್ಟಿದ ಯುವಕರು ಅದನ್ನು ಬಾವಿಯೊಳಗೆ ಬಿಟ್ಟಿದ್ದಾರೆ.

ಬಿಡುತ್ತಿದ್ದಂತೆ ನಾಯಿ ಆ ಬುಟ್ಟಿಯೊಳಗೆ ಕುಳಿತುಕೊಂಡಿದೆ ನಂತರ ನಿಧಾನವಾಗಿ ಮೆಲೆ ಅದನ್ನು ಜಗ್ಗಿದ್ದಾರೆ. ಇದರೊಂದಿಗೆ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ಶ್ವಾನವನ್ನು ರಕ್ಷಣೆ ಮಾಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.