ಶಾಸಕರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು ರಾಜ್ಯದಲ್ಲಿ ನಿಮ್ಮದೇ ಸರ್ಕಾರ ನಿಮ್ಮವರೇ CM ಅಭಿವೃದ್ಧಿ ಯಾವಾಗ ಎಂದು ಪ್ರಶ್ನೆ ಮಾಡಿದ ಗ್ರಾಮಸ್ಥರು ಉತ್ತರಿಸದೇ ಎಸ್ಕೇಪ್

Suddi Sante Desk

ನಂಜನಗೂಡು

ಕೆಲಸ ಮಾಡದ ಜನಪ್ರತಿನಿಧಿಗಳಿಗೆ ಅಷ್ಟು ಸುಲಭವಿಲ್ಲ ಎಂಬ ಲಕ್ಷಣಗಳು ಗೋಚರಿಸಲಾರಂಭಿಸಿವೆ ಏಕೆಂದರೆ ಕೆಲಸ ಮಾಡಿಲ್ಲ ಎಂಬ ಕಾರಣಕ್ಕೆ ಈಗ ಜನರೇ ಶಾಸಕ ರನ್ನು ಪ್ರಶ್ನೆ ಮಾಡಲಾರಂಭಿಸಿದ್ದಾರೆ.ಹೌದು ವಾರದ ಹಿಂದಷ್ಟೇ ಹೀಗೆ ಜನರ ಕೈಗೆ ಸಿಲುಕಿ ಶಾಸಕರೊಬ್ಬರು ಫಜೀತಿ ಪಟ್ಟಿದ್ದರು.ಇದೀಗ ಮತ್ತೊಬ್ಬ ಶಾಸಕರು ಅಂಥದ್ದೇ ಪರಿಸ್ಥಿತಿ ಎದುರಿಸುವಂತಾಗಿದೆ.ಇದಕ್ಕೆ ತಾಜಾ ಉದಾಹ ರಣೆ ನಂಜನಗೂಡು ಬಿಜೆಪಿ ಶಾಸಕ ಹರ್ಷವರ್ಧನ ಅವರು

ಹೌದು.. ಕಳೆದ ವಾರ ಇದೇ ದಿನ ಕಾಗವಾಡದ ಶಾಸಕ ಶ್ರೀಮಂತ ಪಾಟೀಲ್ ಅವರನ್ನು ಬೆಳಗಾವಿ ಜಿಲ್ಲೆ ಚಿಕ್ಕೋ ಡಿಯ ಕಿರಣಗಿ ಗ್ರಾಮದಲ್ಲಿನ ಜನರು ತರಾಟೆಗೆ ತೆಗೆದು ಕೊಂಡಿದ್ದರು.ಇದಾಗಿ ಒಂದೇ ವಾರಕ್ಕೆ ನಂಜನಗೂಡು ಶಾಸಕರನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ. ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಹೋಬಳಿಯ ಮಲ್ಲಹಳ್ಳಿ ಗ್ರಾಮಕ್ಕೆ ಬಂದಿದ್ದ ಶಾಸಕ ಹರ್ಷವರ್ಧನ್ ಜನರ ಪ್ರಶ್ನೆಗಳನ್ನು ಎದುರಿಸುವಂತಾಯಿತು.

ಹರ್ಷವರ್ಧನ್ ಆಗಮಿಸುತ್ತಿದ್ದಂತೆ ಪ್ರಶ್ನೆ ಮಾಡಿದ ಗ್ರಾಮಸ್ಥರು ಮತಕ್ಕಾಗಿ ಬರ್ತೀರಿ.ಗ್ರಾಮದ ಅಭಿವೃದ್ಧಿ ಮಾಡಕ್ಕಾಗಲ್ವಾ….ಶಾಲಾ ಮಕ್ಕಳು ಓಡಾಡೋದು ಹೇಗೆ ಮಳೆ ಬಂದ್ರೆ ರಸ್ತೆಯಲ್ಲಿ ಓಡಾಡಕ್ಕಾಗಲ್ಲ.ಕುಡಿಯುವ ನೀರು ಚರಂಡಿ ವ್ಯವಸ್ಥೆಯೂ ಇಲ್ಲ ಏನಾದ್ರೂ ಪ್ರೋಗ್ರಾಂ ಇದ್ರೆ ಬರ್ತೀರಿ ಎಂದು ತರಾಟೆಗೆ ತೆಗೆದುಕೊಂಡರು. ಗ್ರಾಮಕ್ಕೆ ಮೂಲಸೌಕರ್ಯವಿಲ್ಲ ಹುಲ್ಲಹಳ್ಳಿ, ನಂಜನ ಗೂಡು ಭಾಗಕ್ಕೆ ರಸ್ತೆ ಇಲ್ಲ.ದುರಸ್ತಿ ಮಾಡ್ತೀವಿ ಅಂತೀರಿ ಆಮೇಲೆ ಇತ್ತ ತಿರುಗಿಯೂ ನೋಡಲ್ಲ ಎಂದು ದಬಾಯಿ ಸಿದ ಜನರಿಗೆ ರಸ್ತೆ ಸರಿ ಮಾಡಿಸಿ ಮತಕ್ಕಾಗಿ ಬರ್ತೀನಿ ಅಂತ ಶಾಸಕರು ಸಮಜಾಯಿಷಿ ಕೊಟ್ಟರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.