BJP ಕಾರ್ಯಕರ್ತರ ಇಚ್ಛಾಶಕ್ತಿಯೇ ನಮಗೆ ಪ್ರೇರಣಾಶಕ್ತಿ ಪ್ರಹ್ಲಾದ್ ಜೋಶಿ – ಗ್ರಾಮ ಪಂಚಾಯತ್ ನಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿ ಗೌರವಿಸಿದ ಸಚಿವರು…..

Suddi Sante Desk
BJP ಕಾರ್ಯಕರ್ತರ ಇಚ್ಛಾಶಕ್ತಿಯೇ ನಮಗೆ ಪ್ರೇರಣಾಶಕ್ತಿ ಪ್ರಹ್ಲಾದ್ ಜೋಶಿ – ಗ್ರಾಮ ಪಂಚಾಯತ್ ನಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿ ಗೌರವಿಸಿದ ಸಚಿವರು…..

ಹುಬ್ಬಳ್ಳಿ

BJP ಕಾರ್ಯಕರ್ತರ ಇಚ್ಛಾಶಕ್ತಿಯೇ ನಮಗೆ ಪ್ರೇರಣಾಶಕ್ತಿ ಪ್ರಹ್ಲಾದ್ ಜೋಶಿ – ಗ್ರಾಮ ಪಂಚಾಯತ್ ನಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿ ಗೌರವಿಸಿದ ಸಚಿವರು

ಹೌದು ಇತ್ತೀಚೆಗೆ ಜಿಲ್ಲೆಯಲ್ಲಿ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳು ವಿಜಯಿಶಾಲಿಗಳಾ ಗಿದ್ದು ಪಕ್ಷದ ಕಾರ್ಯಕರ್ತರ ಹಾಗೂ ನಾಯಕರ ಪರಿಶ್ರಮದ ಫಲವಾಗಿ ಜಿಲ್ಲೆಯಲ್ಲಿ ಪಕ್ಷ ಮತ್ತೊಮ್ಮೆ ಭದ್ರವಾಗಿ ಬೇರೂರುವಂತಾಗಿದೆ.

ಈ ಹಿನ್ನಲೆಯಲ್ಲಿ ಕೆಲ ದಿನಗಳ ಹಿಂದೆ ಗೆದ್ದ ಅಭ್ಯರ್ಥಿಗಳಿಗೆ ಅಭಿನಂದನಾ ಸಭೆ ಹುಬ್ಬಳ್ಳಿ ಯಲ್ಲಿ ನಡೆಯಿತು ನಗರದ ಸಚಿವರ ಕಚೇರಿ ಯಲ್ಲಿ ಏರ್ಪಡಿಸಿದ್ದ ಈ ಒಂದು ಸಭೆಯಲ್ಲಿ ಎಲ್ಲಾ ಅಭ್ಯರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಗಿತ್ತು

ಇನ್ನೂ ಪಕ್ಷದ ಗೆಲುವಿಗೆ ಶ್ರಮಿಸಿದ ಕಾರ್ಯಕ ರ್ತರ ಸೇವೆಯನ್ನು ನಾವೆಂದೂ ಮರೆಯುವಂ ತಿಲ್ಲ ಮತ್ತು ಮರೆಯಬಾರದು ಎಂಬ ಉದ್ದೇಶ ದಿಂದ ಕಚೇರಿಯಲ್ಲಿ ಗ್ರಾಮಾಂತರ ಜಿಲ್ಲೆಯ ಎಲ್ಲಾ ಪ್ರಮುಖ ಕಾರ್ಯಕರ್ತರನ್ನು ಕರೆಸಿ ಸಭೆ ನಡೆಸಿ ಎಲ್ಲರಿಗೂ ನಮ್ಮ ಧಾರವಾಡದಲ್ಲಿ ತಯಾರಾಗುವ “ತ್ರಿವರ್ಣ ಧ್ವಜವನ್ನು” ನೀಡಿ ಗೌರವಿಸಲಾಯಿತು.

ಪಕ್ಷದ ವಿಚಾರ ಬಂದಾಗ ಯಾವುದೇ ರೀತಿಯ ರಾಜಿ ಮಾಡಿಕೊಳ್ಳದೆ ಹಗಲಿರುಳೆನ್ನದೆ ದುಡಿಯುವ ಕಾರ್ಯಕರ್ತರೇ ನಮ್ಮ ಆಸ್ತಿ. ಭಾರತೀಯ ಜನತಾ ಪಕ್ಷದ ಗೆಲುವಿಗೆ ಶ್ರಮಿಸಿದ ಎಲ್ಲರಿಗೂ ಮತ್ತೊಮ್ಮೆ ಧನ್ಯವಾದ ಅರ್ಪಿಸಿ ಗೌರವಿಸಲಾಯಿತು.

ಸಭೆಯಲ್ಲಿ ಶಾಸಕರಾದ ಎಮ್ ಆರ್ ಪಾಟೀಲ್ ಜಿಲ್ಲಾಧ್ಯಕ್ಷರಾದ ಬಸವರಾಜ್ ಕುಂದಗೋಳ ಮಠ, ರಾಜ್ಯ ರೈತಮೋರ್ಚಾ ಉಪಾಧ್ಯಕ್ಷರಾದ ಶ್ರೀ ಷಣ್ಮುಖ ಗುರಿಕಾರ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.