ಹುಬ್ಬಳ್ಳಿ ಧಾರವಾಡ –
ಪೊಲೀಸ್ ಇಲಾಖೆಯಲ್ಲಿ ಚರ್ಚೆಯಾಗುತ್ತಿದೆ ಪತ್ರಿ ಮುಟ್ಟಿಸೊದು – ಪತ್ರಿ ಮುಟ್ಟಿಸಿದರು ಕೆಲಸವಾಗುತ್ತಿಲ್ಲ ನೊಂದುಕೊಳ್ಳುತ್ತಿರುವವರ ವಿಚಾರ ವೈರಲ್ ಆಗಿದೆ ಪತ್ರಿ ಪ್ರಸಂಗ ಹೌದು
ಹುಬ್ಬಳ್ಳಿ ಧಾರವಾಡದಲ್ಲಿ ಪೊಲೀಸ್ ಇಲಾಖೆಯ ಗೋಳು ಯಾರಿಗೂ ಕಾಣುತ್ತಿಲ್ಲ ಕೇಳುತ್ತಿಲ್ಲ.ಮನೆ ಒಂದು ಕಡೆಯಾದರೆ ಡೂಟಿ ಮತ್ತೊಂದು ಕಡೆಗೆ ನೆಮ್ಮದಿಯಿಂದ ಕೆಲಸ ಮಾಡಬೇಕ ಎಂದರೆ ಮನೆ ಧಾರವಾಡದಲ್ಲಿ ಡೂಟಿ ಹುಬ್ಬಳ್ಳಿಯಲ್ಲಿ
ಮನೆ ಹುಬ್ಬಳ್ಳಿಯಲ್ಲಿ ಡೂಟಿ ಧಾರವಾಡದಲ್ಲಿ ಇಂತಹ ಪರಸ್ಥಿತಿಯಲ್ಲಿ ಯಾರಿಗೆ ಹೇಳೊಣಾ ನಮ್ಮ ಗೋಳು ಎನ್ನತ್ತಾ ಪರದಾಡುತ್ತಿದ್ದಾರೆ ಅವಳಿ ನಗರದ ಪೊಲೀಸ್ ಸಿಬ್ಬಂದಿಗಳು. ಅವೈ ಜ್ಞಾನಿಕವಾಗಿ ಪೊಲೀಸ್ ಸಿಬ್ಬಂದಿಗಳನ್ನು ಬೇಕಾ ಬಿಟ್ಟಿಯಾಗಿ ವರ್ಗಾವಣೆ ಮಾಡಿ ಪರದಾಡುವಂತೆ ಮಾಡಿರುವ ಮೇಲಾಧಿಕಾರಿಗಳಿಗೆ ಹಿಡಿಶಾಪ ವನ್ನು ಹಾಕುತ್ತಾ ಅನಿವಾರ್ಯವಾಗಿರುವ ಪೊಲೀಸ್ ಡೂಟಿಯನ್ನು ಸಿಬ್ಬಂದಿಗಳು ಮಾಡು ತ್ತಿದ್ದಾರೆ
ಅವಳಿ ನಗರದ ಪೊಲೀಸರು.ಇನ್ನೂ ಪೊಲೀಸ್ ಆಯುಕ್ತರಾಗಿ ಹೊಸದಾಗಿ ನಗರಕ್ಕೆ ಬಂದಿರುವ ಖಡಕ್ ಪೊಲೀಸ್ ಅಧಿಕಾರಿ ರೇಣುಕಾ ಸುಕು ಮಾರ ಅವರು ಬಂದ ಕೂಡಲೇ ಈ ಒಂದು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ತಮಗೆ ಬಂದಿರುವ ಅರ್ಜಿಗಳನ್ನು ಪರಿಶೀಲನೆ ಮಾಡಿ ಹಂತ ಹಂತವಾಗಿ ಸಿಬ್ಬಂದಿಗಳ ಕಷ್ಟವನ್ನು ಆಲಿಸಿ ನೆಮ್ಮದಿಯಿಲ್ಲದೇ ಕರ್ತವ್ಯವನ್ನು ಮಾಡುತ್ತಿದ್ದ ಪೊಲೀಸ್ ಸಿಬ್ಬಂದಿಗಳಿಗೆ ತುಸು ನೆಮ್ಮದಿಯನ್ನು ನೀಡಿದ್ದಾರೆ
ಎಲ್ಲಿಯಾದರೂ ಕರ್ತವ್ಯವನ್ನು ಮಾಡೊದು ಆದರೆ ಮನೆ ಇದ್ದ ಊರಿನಲ್ಲಿ ಡೂಟಿಯನ್ನು ನೆಮ್ಮದಿಯಿಂದ ಮಾಡಿದರೆ ಇನ್ನೊಂದು ಗಂಟೆ ಹೆಚ್ಚುವರಿಯಾಗಿ ಮಾಡಬಹುದು ಎನ್ನುವ ತರ್ಕದಲ್ಲಿರುವ ಪೊಲೀಸರಿಗೆ ಹೊಸದಾಗಿ ಬಂದಿರುವ ಆಯುಕ್ತೆ ರೇಣುಕಾ ಸುಕುಮಾರ ಒಂದಿಷ್ಟು ಸಂತೋಷ ನೆಮ್ಮದಿಯನ್ನು ನೀಡಿದ್ದಾರೆ
ಇದು ಒಂದು ವಿಚಾರವಾದರೆ ಇನ್ನೂ ಇದರೊಂ ದಿಗೆ ಸಧ್ಯ ಅವಳಿ ನಗರದ ಪೊಲೀಸ್ ಇಲಾಖೆ ಯಲ್ಲಿ ವರ್ಗಾವಣೆಗಾಗಿ ಪತ್ರಿಯನ್ನು ತಗೆದು ಕೊಳ್ಳುತ್ತಿದ್ದಾರಂತೆ.ಆಯುಕ್ತರ ಗಮನಕ್ಕೆ ಇದೆಯೋ ಇಲ್ಲವೊ ಗೊತ್ತಿಲ್ಲ ವರ್ಗಾವಣೆ ಬೇಕಾ ದರೆ ಪತ್ರಿ ಕೊಡಬೇಕು ಎಂಬ ಸಂದೇಶ ವರ್ಗಾ ವಣೆ ಬಯಸಿದವರಿಗೆ ಮುಟ್ಟಿಸಲಾಗುತ್ತದೆ
ವರ್ಗಾವಣೆಗಾಗಿ ಅರ್ಜಿ ಕೊಟ್ಟರು ಸಂಬಂಧ ಪಟ್ಟವರಿಂದಲೂ ಹೇಳಿಸಿದರು ಕೂಡಾ ಬಂದು ನೀವು ಭೇಟಿಯಾಗಿ ಎಂಬ ಸಂದೇಶವನ್ನು ನೀಡಲಾಗುತ್ತಿದೆ ಯಂತೆ ಬಂದು ನೀವು ಭೇಟಿ ಯಾಗಬೇಕು ಎಂಬ ಸಂದೇಶ ವನ್ನು ನೀಡುತ್ತಾ ರಂತೆ ಎನ್ನುತ್ತಾ ಹೀಗಾಗಿ ಈ ಒಂದು ವಿಚಾರದಲ್ಲಿ ಅವಳಿ ನಗರದ ಸಿಬ್ಬಂದಿಗಳು ಬೇಸತ್ತಿದ್ದಾರೆ
ಹೀಗ್ಯಾಕೆ ನಮ್ಮ ಪರಸ್ಥಿತಿ ಎನ್ನುತ್ತಾ ಅವರು ಹೇಳಿದ ಸ್ಥಳವಾದ ಧಾರವಾಡದ ಸೈದಾಪೂರದ ಗಣಪತಿ ಗುಡಿ ಹಿಂದೆ ಹೋಗಿ ಪತ್ರಿ ಮುಟ್ಟಿಸಿ ಬರುತ್ತಿದ್ದಾರೆ.ಹೀಗೆ ಪತ್ರಿ ಮುಟ್ಟಿಸಿ ಬಂದರು ಕೂಡಾ ವರ್ಗಾವಣೆಯಾಗುತ್ತಿಲ್ಲ ಮುಕ್ತಿ ಸಿಗುತ್ತಿಲ್ಲ ಎಂಬ ನೋವಿನ ಮಾತುಗಳನ್ನು ಪತ್ರಿ ಮುಟ್ಟಿಸಿದ ಸಿಬ್ಬಂದಿಗಳು ಹೇಳುತ್ತಿದ್ದಾರೆ
ಇನ್ನಾದರೂ ಈ ಒಂದು ಪತ್ರಿ ಮುಟ್ಸಿಸುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಇದಕ್ಕೆ ಮುಕ್ತಿ ನೀಡಿ ನೆಮ್ಮದಿಯಿಂದ ನೌಕರಿಯನ್ನು ಮಾಡಲು ಪೊಲೀಸ್ ಸಿಬ್ಬಂದಿಗಳಿಗೆ ಖಡಕ್ ಪೊಲೀಸ್ ಆಯುಕ್ತರು ಸಂದೇಶವನ್ನು ನೀಡುತ್ತಾ ರೆಯಾ ಎಂಬೊದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ ಧಾರವಾಡ…..