ಶಾಲಾ ಮಕ್ಕಳ ಬಿಸಿಯೂಟ ಕ್ಕೂ ತಟ್ಟಿದ ಬೆಲೆ ಏರಿಕೆಯ ಬಿಸಿ ಕೊಡುವ ಹಣ ಸಾಲುತ್ತಿಲ್ಲ ಸ್ವಾಮಿ ಸ್ವಲ್ಪ ಹೆಚ್ಚಿಗೆ ಕೊಡಿ…..

Suddi Sante Desk

ಬೆಂಗಳೂರು –

ದುಬಾರಿ ದುನಿಯಾ ದಲ್ಲಿ ಎಲ್ಲರೂ ಬೆಲೆ ಏರಿಕೆಯ ಬಿಸಿಯಿಂದ ಕಂಗಾಲಾಗಿದ್ದಾರೆ‌.ಗ್ಯಾಸ್ ತರಕಾರಿ ಎಣ್ಣೆ ಕಿರಾಣಿ ಹೀಗೆ ಎಲ್ಲವುಗಳ ಬೆಲೆ ಆಕಾಶಕ್ಕೆ ಏರಿದ್ದು ಇನ್ನೂ ಈ ಒಂದು ಬೆಲೆ ಏರಿಕೆಯ ಬಿಸಿ ಜನ ಸಾಮಾನ್ಯರಿಗೂ ಅಷ್ಟೇ ಅಲ್ಲದೆ ಶಾಲಾ ಮಕ್ಕಳಿಗೂ ತಟ್ಟಿದೆ ಹೌದು ಸಧ್ಯ ಮಧ್ಯಾಹ್ನದ ಬಿಸಿಯೂಟ ಕ್ಕಾಗಿ ಶಾಲೆಗಳಿಗೆ ಹಣವನ್ನು ಏನೋ ನೀಡಲಾಗುತ್ತಿದೆ ಆದರೆ ಸಧ್ಯ ದುಬಾರಿ ಯಾದ ಇವತ್ತಿನ ಪರಿಸ್ಥಿತಿಯಲ್ಲಿ ಇದು ಸಾಲುತ್ತಿಲ್ಲ

ರಾಜ್ಯ ಸರ್ಕಾರವು ಶಾಲಾ ಮಕ್ಕಳ ಬಿಸಿಯೂಟಕ್ಕೆ ಸಧ್ಯ ಹಣವನ್ನು ನೀಡುತ್ತಿದೆ ಆದರೆ ಅದು ದುಬಾರಿ ಯಾದ ಇವತ್ತಿನ ದಿನದಲ್ಲಿ ಸಾಲುತ್ತಿಲ್ಲ. ಬೇಕಾಗಿರುವ ಈರುಳ್ಳಿ, ಟೊಮೆಟೊ,ಮೆಣಸಿನ ಕಾಯಿ,ಕೊತ್ತಂಬರಿ ಸೊಪ್ಪು, ಕರಿಬೇವು, ಮಸಾಲೆ ಸೇರಿದಂತೆ ಇತರೆ ಅಡುಗೆ ಸಾಮಾಗ್ರಿ ಗಳ ಖರೀದಿಗಾಗಿ ಸರ್ಕಾರವು ಹಣವನ್ನು ಬಿಡುಗಡೆ ಮಾಡುತ್ತದೆ ಆದರೆ ಸರ್ಕಾರವು ನೀಡುತ್ತಿರುವ ಹಣದಲ್ಲಿ ಇತ್ತೀಚಿಗೆ ಸಾಮಾಗ್ರಿಗಳನ್ನು ಈ ಅಡುಗೆ ಖರೀದಿಸಲು ಸಾಧ್ಯವಾಗುತ್ತಿಲ್ಲ

ಸರ್ಕಾರ ನೀಡುತ್ತಿರುವ ಹಣದಲ್ಲಿ ಈಗ ಇರುವ ದರದಲ್ಲಿ ತರಕಾರಿ ಖರೀದಿಸಲು ಆಗದೆ ಶಾಲೆಯಲ್ಲಿ ಮಕ್ಕಳಿಗೆ ಸಪ್ಪೆ ಊಟವನ್ನು ಬಡಿಸಲಾಗುತ್ತಿದೆ ಕೆಲವು ಕಡೆಗಳಲ್ಲಿ ಶಾಲೆಗಳಿ ಗೆ ಇದೊಂದು ದೊಡ್ಡ ಪ್ರಮಾಣದಲ್ಲಿ ಸಮಸ್ಯೆ ಯಾಗಿದ್ದು ಇನ್ನಾದರು ಸರ್ಕಾರ ಹೆಚ್ಚಳ ಮಾಡುತ್ತದೆನಾ ಎಂಬುದನ್ನು ಕಾದು ನೋಡಬೇಕು

ವರದಿ – ವೆಂಕಟೇಶ್ ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.