ವರ್ಗಾವಣೆಗಾಗಿ ಜನಪ್ರತಿನಿಧಿಗಳ ಶಿಫಾರಸ್ಸು ಬಯಸುವವರಿಗೆ ಬಿಗ್ ಶಾಕ್ ನೀಡಿದ ಕೇಂದ್ರ ಸರ್ಕಾರ ರಾಜ್ಯದಲ್ಲೂ ಇದು ಯಾವಾಗ…..

Suddi Sante Desk

ಬೆಂಗಳೂರು –

ವರ್ಗಾವಣೆಗಾಗಿ ಜನಪ್ರತಿನಿಧಿಗಳ ಶಿಫಾರಸ್ಸು ಮಾಡಿ ಕೊಂಡು ಬಂದರೆ ಅಂತಹ ನೌಕರರ ಮೇಲೆ ಸೂಕ್ತ ಕ್ರಮವನ್ನು ಕೈಗೊಳ್ಳಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ.ಹೌದು ಕೇಂದ್ರ ಸರ್ಕಾರದ ಯಾವುದೇ ನೌಕರನು ವರ್ಗಾವಣೆ ಬಯಸಿ ಜನಪ್ರತಿನಿಧಿಗಳ ಶಿಫಾರಸ್ಸು ಪಡೆದು ಕೊಂಡು ವರ್ಗಾವಣೆಗೆ ಬಂದರೆ ಕೂಡಲೇ ಅವರ ಮೇಲೆ ಸೂಕ್ತವಾದ ಕ್ರಮವನ್ನು ಕೈಗೊಳ್ಳಲು ಸೂಚನೆ ನೀಡಲಾ ಗಿದೆ.ಹೌದು ತಾವು ಬಯಸಿದ ಸ್ಥಳಕ್ಕೆ ವರ್ಗಾವಣೆಯಾ ಗಲು ಸರ್ಕಾರಿ ಉದ್ಯೋಗಿಗಳು ರಾಜಕಾರಣಿಗಳ ಮೊರೆ ಹೋಗುವುದು ಸರ್ವೇಸಾಮಾನ್ಯವಾಗಿದೆ. ರಾಜಕಾರಣಿಗ ಳಿಂದ ಶಿಫಾರಸ್ಸು ಪತ್ರ ಪಡೆಯುವುದು ಅಥವಾ ಫೋನ್ ಕರೆ ಮಾಡಿಸುವ ಮೂಲಕ ವರ್ಗಾವಣೆಗಾಗಿ ಒತ್ತಡ ಹೇರುತ್ತಾರೆ.ಇಂತಹ ಉದ್ಯೋಗಿಗಳಿಗೆ ಈಗ ಕೇಂದ್ರ ಸರ್ಕಾರ ಬಿಗ್ ಶಾಕ್ ನೀಡಿದೆ.

ಕೇಂದ್ರ ಸರ್ಕಾರದ ಸೇವೆಯಲ್ಲಿರುವ ಅಧಿಕಾರಿಗಳು ತಮ್ಮ ವರ್ಗಾವಣೆಗಾಗಿ ರಾಜಕಾರಣಿಗಳ ಶಿಫಾರಸ್ಸು ಪತ್ರ ತೊಂದರೆ ಅಂಥವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗು ತ್ತದೆ ಎಂದು ತಿಳಿಸಲಾಗಿದೆ. ಸರ್ಕಾರಿ ಸೇವೆಯಲ್ಲಿರುವ ವರು ನಿಷ್ಪಕ್ಷಪಾತ ಧೋರಣೆ ಹೊಂದಿರಬೇಕು ಎಂಬ ಕಾರಣಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.ಈ ಹಿನ್ನೆಲೆ ಯಲ್ಲಿ ಕೇಂದ್ರ ಸಿಬ್ಬಂದಿ ಸಚಿವಾಲಯವು ಸುತ್ತೋಲೆ ಹೊರಡಿಸಿದ್ದು, ಹಲವು ಉದ್ಯೋಗಿಗಳು ವರ್ಗಾವಣೆಗಾಗಿ ಸಚಿವರು, ಲೋಕಸಭೆ ಅಥವಾ ರಾಜ್ಯಸಭಾ ಸದಸ್ಯರಿಂದ ಶಿಫಾರಸ್ಸು ಪತ್ರ ತರುತ್ತಾರೆ. ಆದರೆ ಇದು ಸಿಸಿಎಸ್ ಸೇವಾ ನಿಯಮ 20 ರ ಉಲ್ಲಂಘನೆ ಆಗುವ ಕಾರಣ ಅಂಥವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಲಾ ಗಿದ್ದು ರಾಜ್ಯದಲ್ಲೂ ಈ ಒಂದು ನಿಯಮ ಶೀಘ್ರದಲ್ಲೇ ಜಾರಿಗೆ ಬರಲೆಂದು ಕೆಲವೊಂದಿಷ್ಟು ಸರ್ಕಾರಿ ನೌಕರರು ಒತ್ತಾಯವನ್ನು ಮಾಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.