ಈಜಲು ತೆರಳಿದ್ದ ಮೂವರು ಮಕ್ಕಳು ನೀರಿನಲ್ಲಿ ಮುಳುಗಿ ಸಾವು – ಶಾಲೆಗೆ ರಜೆ ಹಿನ್ನಲೆಯಲ್ಲಿ ಬೆಳಿಗ್ಗೆ ತೆರಳಿದ್ದ ಮಕ್ಕಳು…..

Suddi Sante Desk

ತುಮಕೂರು‌ –

ಈಜಲು ತೆರಳಿದ್ದ ಮೂವರು ಮಕ್ಕಳು ನೀರಲ್ಲಿ ಮುಳುಗಿ ಸಾವಿಗೀಡಾದ ದಾರುಣ ಘಟನೆ ತುಮ ಕೂರಿನಲ್ಲಿ ನಡೆದಿದೆ‌.ತುಮಕೂರು ಜಿಲ್ಲೆ ತಿಪಟೂರು ಹೊರವಲಯದ ಮಾರನಗೆರೆ ಯಲ್ಲಿ ನಡೆದಿದೆ. ತರುಣ್(11), ದೀಪಕ್‌ (13), ಕೌಶಿಕ್ (13) ಮೃತ ದುರ್ದೈವಿಗಳಾಗಿದ್ದಾರೆ‌.ಇಂದು ಶಾಲೆಗೆ ರಜೆ ಇದ್ದ ಕಾರಣ ಬೆಳಗ್ಗೆಯೇ 6 ಜನ ಸ್ನೇಹಿತರು ಮಾರನಗೆರೆ ಕೆರೆಯಲ್ಲಿ ಈಜಾಡಲು ತೆರಳಿದ್ದರು. ಮುಳುಗುತ್ತಿದ್ದ ಬಾಲಕನನ್ನ ರಕ್ಷಣೆ‌ ಮಾಡಲು ತೆರಳಿದ ಇಬ್ಬರು ಮಕ್ಕಳು ಸೇರಿ ಒಟ್ಟು ಮೂವರ ದುರ್ಮರಣರಾಗಿ ದ್ದಾರೆ‌.8ನೇ‌ ತರಗತಿಯ ಕೌಶಿಕ್, ತಿಪಟೂರು ತಾಲೂಕು ಮತ್ತಿಹಳ್ಳಿ ವಾಸಿ, 8ನೇ‌ ತರಗತಿಯ ದೀಪಕ್ ತಿಪಟೂರು ತಾಲೂಕು ಮುದ್ದೇನಹಳ್ಳಿ ವಾಸಿ, ತರುಣ್ 5ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದವರಾಗಿದ್ದಾರೆ.‌ಇನ್ನೂ ಸುದ್ದಿ ತಿಳಿದ ತಿಪಟೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀ ಲನೆ ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.