ಈಜಲು ಹೋಗಿ ನೀರು ಪಾಲಾದ ಮೂವರು ವಿದ್ಯಾರ್ಥಿಗಳು – 6 ವಿದ್ಯಾರ್ಥಿಗಳಲ್ಲಿ ಬದುಕುಳಿದ ಮೂವರು ವಿದ್ಯಾರ್ಥಿಗಳು

Suddi Sante Desk
ಈಜಲು ಹೋಗಿ ನೀರು ಪಾಲಾದ ಮೂವರು ವಿದ್ಯಾರ್ಥಿಗಳು – 6 ವಿದ್ಯಾರ್ಥಿಗಳಲ್ಲಿ ಬದುಕುಳಿದ ಮೂವರು ವಿದ್ಯಾರ್ಥಿಗಳು

ಹೊಸಪೇಟೆ

ಈಜಲು ಹೋಗಿದ್ದ 6 ವಿದ್ಯಾರ್ಥಿಗಳಲ್ಲಿ ಮೂವರು ನೀರು ಪಾಲಾದ ಘಟನೆ ಹೊಸ ಪೇಟೆಯಲ್ಲಿ ನಡೆದಿದೆ.ಹೌದು ವಿಜಯನಗರ ಜಿಲ್ಲೆಯ ಹೊಸಪೇಟೆಯ ಹೊರವಲಯದಲ್ಲಿ ಈ ಒಂದು ಘಟನೆ ನಡೆದಿದೆ. ಕಾಲುವೆಯಲ್ಲಿ ಈಜಲು ಹೋಗಿದ್ದ ಆರು ವಿದ್ಯಾರ್ಥಿಗಳ ಪೈಕಿ ಮೂವರು ನೀರು ಪಾಲಾಗಿದ್ದಾರೆ.

ಈ ಒಂದು ದಾರುಣ ಘಟನೆಯಿಂದಾಗಿ ವಿಜಯನಗರ ಜಿಲ್ಲೆಯ ಹೊಸಪೇಟೆಯ ಹೊರವಲಯದಲ್ಲಿ ಚಿತ್ರಣ ಸಾಕ್ಷಿಯಾಗಿ ನಡೆದಿದೆ.ಇನ್ನೂ ಘಟನೆಯಲ್ಲಿ ಮೂವರು ಮೃತರಾಗಿದ್ದು ಇನ್ನೂ ಮೂವರು ಬದುಕುಳಿದಿ ದ್ದಾರೆ.ಮೃತರನ್ನು ಹೊಸಪೇಟೆಯ ಹಾಗೂ ಕೊಪ್ಪಳದ ನಿವಾಸಿಗಳಾದ ಯಶವಂತ್, ಅಂಜಿನಿ,ಗುರುರಾಜ್ ಎಂದು ಗುರುತಿಸಲಾಗಿದೆ.

ಹೊಸಪೇಟೆಯ ವಿಜಯನಗರ ಕಾಲೇಜಿನಲ್ಲಿ ಓದುತ್ತಿದ್ದ 6 ವಿದ್ಯಾರ್ಥಿಗಳ ತಂಡ ಈಜಲು ಹೋಗಿತ್ತು.ಈ ವೇಳೆ ಮೂವರು ನೀರಿನಲ್ಲಿ ಮಳುಗಿದ್ದಾರೆ. ಇನ್ನು ಮೂವರು ಬದುಕುಳಿದಿ ದ್ದಾರೆ ಇನ್ನೂ ಈ ಒಂದು ಸುದ್ದಿಯನ್ನು ತಿಳಿದ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ ಹೊಸಪೇಟೆಯ ಗ್ರಾಮೀಣ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿ ದ್ದಾರೆ.ಇತ್ತ  ಬದುಕುಳಿದಿರುವ ಮೂವರು ವಿದ್ಯಾರ್ಥಿಗಳನ್ನು ಠಾಣೆಗೆ ಕರೆತಂದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಹೊಸಪೇಟೆ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.