This is the title of the web page
This is the title of the web page

Live Stream

[ytplayer id=’1198′]

April 2025
T F S S M T W
 12
3456789
10111213141516
17181920212223
24252627282930

| Latest Version 8.0.1 |

State News

ಗಣೇಶ ನಿಗೆ ಅನುಮತಿ ತಗೆದುಕೊಂಡು ಬರುವಾಗ ಅಪಘಾತ – ಮೂವರು ಯುವಕರು ಸ್ಥಳದಲ್ಲೇ ಸಾವು…..

WhatsApp Group Join Now
Telegram Group Join Now

ದಾವಣಗೆರೆ –

ಗಣಪತಿ ಯನ್ನು ಕೂಡಿಸಲು ಪೊಲೀಸ್ ಠಾಣೆ ಯಿಂದ ಅನುಮತಿ ತಗೆದುಕೊಂಡು ಮರಳಿ ಬರುವಾಗ ಅಪಘಾತ ಸಂಭವಿಸಿ ಮೂವರು ಯುವಕರು ಸ್ಥಳದಲ್ಲೇ ಸಾವಿಗೀಡಾದ ಘಟನೆ ದಾವಣಗೆರೆ ಯಲ್ಲಿ ನಡೆದಿದೆ. ಹೌದು ಜಿಲ್ಲೆಯ ಚನ್ನಗಿರಿ ತಾಲೂಕಿನ ರಾಜಗೊಂಡನಹಳ್ಳಿ ಬಳಿ ನಡೆದ ಭೀಕರ ಅಪಘಾತದಲ್ಲಿ ಮೂವರು ಸ್ನೇಹಿತರು ಸಾವಿಗೀಡಾಗಿದ್ದಾರೆ. ಟಾಟಾ ಏಸ್ ವಾಹನ ಹಾಗೂ ಬೈಕ್ ನಡುವೆ ಗುರುವಾರ ರಾತ್ರಿ ಈ ಅಪಘಾತ ಸಂಭವಿಸಿದೆ.

ಹೌದು ಚನ್ನಗಿರಿ ತಾಲೂಕಿನ ಮಲ್ಲೇಶ್ವರ ಗ್ರಾಮದ ಅಜ್ಜಯ್ಯ (21), ದೇವರಾಜ (18), ಮಂಜುನಾಥ್ (18) ಮೃತಪಟ್ಟವರಾಗಿದ್ದಾರೆ.ಗಣೇಶೋತ್ಸವ ಹಿನ್ನಲೆಯಲ್ಲಿ ಮೂವರು ಯುವಕರು ಪ್ರತಿಷ್ಠಾಪನೆ ಮಾಡಲು ಚನ್ನಗಿರಿ ಪೊಲೀಸ್ ಠಾಣೆಗೆ ತೆರಳಿದ್ದರು. ಅನುಮತಿ ತಗೆದುಕೊಂಡು ಮರಳಿ ಬರುವಾಗ ಈ ಒಂದು ಭೀಕರ ಅಪಘಾತ ಸಂಭವಿಸಿದೆ

ಈ ಮೂವರು ಸ್ನೇಹಿತರು ಚೌತಿ ಪ್ರಯುಕ್ತ ಗ್ರಾಮ ದಲ್ಲಿ ಗಣೇಶನನ್ನು ಕೂರಿಸಲು ಅನುಮತಿ ಪಡೆ ಯುವ ಸಲುವಾಗಿ ಹೋಗಿ ಸಿಕ್ಕ ದೊಡ್ಡ ಸಂತೋಷ ದಲ್ಲಿ ಮರಳಿ ಬರುವಾಗ ಟಾಟಾ ಎ ಎಸ್ ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾಗಿವೆ.

ಬೈಕ್ ನಲ್ಲಿ ಮರಳುತ್ತಿದ್ದ ಇವರು ಅಪಘಾತಕ್ಕೀಡಾ ಗಿದ್ದು, ಮೂವರೂ ಸಾವಿಗೀಡಾಗಿದ್ದಾರೆ. ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರೆ ಮತ್ತೊಬ್ಬನನ್ನು ಆಸ್ಪತ್ರೆಗೆ ಕೊಂಡೊಯ್ಯುವಾಗ ಮಾರ್ಗಮಧ್ಯೆ ಕೊನೆಯುಸಿ ರೆಳೆದಿದ್ದಾನೆ ಈ ಕುರಿತು ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ


Google News

 

 

WhatsApp Group Join Now
Telegram Group Join Now
Suddi Sante Desk